ಸಾಲ ಮರುಪಾವತಿಸದೆ 80 ಲಕ್ಷ ರೂ. ವಂಚನೆ: ನಾಲ್ವರ ವಿರುದ್ಧ ಪ್ರಕರಣ
Team Udayavani, Nov 6, 2022, 1:10 AM IST
ಮಂಗಳೂರು: ಬ್ಯಾಂಕ್ನಿಂದ ಸಾಲ ಪಡೆದು ಮರುಪಾವತಿಸದೆ 80ಲಕ್ಷ ರೂ. ವಂಚನೆ ಮಾಡಿರುವ ಕುರಿತಂತೆ ಶ್ರೀಧರ ಅಡಪ, ಹೆರಾಲ್ಡ್ ಅವಿನಾಶ್, ಮಂಜುನಾಥ ಪ್ರಸಾದ್, ಕಿರಣ್ ಕುಮಾರ್ ಎಂಬುವರ ವಿರುದ್ಧ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2016ನೇ ಡಿಸೆಂಬರ್ನಲ್ಲಿ ನಗರದ ಪೂಂಜಾ ಆರ್ಕೇಡ್ ನಲ್ಲಿರುವ ಆಂಧ್ರಾ ಬ್ಯಾಂಕ್ನಿಂದ ಶ್ರೀಧರ್ ಅಡಪ, ಅವಿನಾಶ್ ಎಂಬವರು ಕಿರಣ್ ಕುಮಾರ್ ಅತೋಳಿಗೆ ಮೂಲಕ ಬ್ಯಾಂಕ್ ಮುಖ್ಯ ಪ್ರಬಂಧಕ ಮಂಜುನಾಥ ಪ್ರಸಾದ್ಗೆ 45ಲಕ್ಷ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ 2017 ಜ.21ರಂದು 35ಲಕ್ಷ ರೂ. ವರ್ಗಾವಣೆಯಾಗಿದೆ.
ಸಾಲ ಪತ್ರದ ಕರಾರಿನಂತೆ ತಿಂಗಳಿಗೆ 34,051ರೂ. ಕಂತನ್ನು 10.90 ಬಡ್ಡಿ ದರದಲ್ಲಿ ಪಾವತಿಸಲು ಆರೋಪಿಗಳು ಒಪ್ಪಿಕೊಂಡಿದ್ದರು. 2018ರ ಮೇ 7ರಂದು ಸಾಲದ ಹಣವು ಅನುತ್ಪಾದಕ ಆಸ್ತಿ ಎಂದು ಪರಿವರ್ತನೆಗೊಂಡಿರುತ್ತದೆ. ಬ್ಯಾಂಕ್ನಿಂದ ಆರೋಪಿಗಳಿಗೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದ್ದು, ಅದಕ್ಕೆ ಗಮನ ಹರಿಸಲಿಲ್ಲ.
ಬೆಂಗಳೂರಿನ ಸಾಲ ಮರುಪಾವತಿ ನ್ಯಾಯ ಮಂಡಳಿ-1ರಲ್ಲೂ ಬ್ಯಾಂಕ್ ಪ್ರಬಂಧಕರು ದೂರು ದಾಖಲಿಸಿದ್ದು, ಪ್ರಸ್ತುತ ಪ್ರಕರಣದ ತೀರ್ಪು ಬರಲು ಬಾಕಿ ಇದೆ. ಈ ನಡುವೆ 2021ರ ಡಿ.2ರಂದು ಬ್ಯಾಂಕ್ನ ಅಧಿಕಾರಿಗಳು ಸಂಬಂಧಪಟ್ಟ ಜಾಗಕ್ಕೆ ತೆರಳಿ ಪರೀಕ್ಷಿಸಿದಾಗ ಅಲ್ಲಿ ಯಾವುದೇ ಮನೆ ಕಟ್ಟದೇ ಜಾಗ ಖಾಲಿ ಬಿದ್ದಿರುವುದು ಕಂಡು ಬಂದಿದೆ. ನಾಲ್ವರು ಆರೋಪಿಗಳು ಸೇರಿ ಸಾಲ ಮರುಪಾವತಿಸದೆ ಒಟ್ಟು 80 ಲಕ್ಷ ರೂ. ಹಣವನ್ನು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ