Mangaluru ಕರಾವಳಿಯ ವಿಭಿನ್ನ ಸಂಸ್ಕೃತಿ ಮಾದರಿ: ಚಿತ್ರನಟ ಅಭಿಷೇಕ್ ಅಂಬರೀಷ್
Team Udayavani, Sep 26, 2023, 11:31 PM IST
ಮಂಗಳೂರು: ಮಂಡ್ಯದ ಜನರ ಪ್ರೀತಿಯ ಜತೆಯಲ್ಲಿ ಮಂಗಳೂರು ಸಹಿತ ಕರಾವಳಿ ನನಗೆ ಅಚ್ಚುಮೆಚ್ಚು. ಇಲ್ಲಿನ ವಿಭಿನ್ನ ಸಂಸ್ಕೃತಿಯನ್ನು ನಾನು ಎಲ್ಲೂ ಕಂಡಿಲ್ಲ. ವಿಘ್ನವಿನಾಯಕನು ರೈತರ ಸಂಕಷ್ಟಗಳನ್ನು ದೂರ ಮಾಡಲಿ ಎಂದು ಚಿತ್ರನಟ ಅಭಿಷೇಕ್ ಅಂಬರೀಷ್ ಹೇಳಿದರು.
ಹಿಂದೂ ಯುವ ಸೇನೆ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ನಡೆದ ಮಂಗಳೂರು ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ, ಮೈಸೂರಿನ ಉದ್ಯಮಿ ಮದನ್ ಮ್ಯಾಡಿ, ಹಿಂದೂ ಯುವ ಸೇನೆ ಉಡುಪಿ ಗೌರವಾಧ್ಯಕ್ಷ ಶೇಖರ್ ಶೆಟ್ಟಿ ಉಡುಪಿ, ಅಧ್ಯಕ್ಷ ಅಜಿತ್ ಕೊಡವೂರು, ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ಜನಾರ್ದನ ಅರ್ಕುಳ ಭಾಗವಹಿಸಿದ್ದರು.
ಮಂಗಳೂರು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ, ಹಿಂದೂ ಯುವ ಸೇನಾ ಕಾರ್ಯದರ್ಶಿ ಪದ್ಮನಾಭ ನಾವೂರು, ಪರಂಜ್ಯೋತಿ ಶಾಖೆಯ ಭವಿಶ್ ಶೆಟ್ಟಿ ಅಳಪೆ ಉಪಸ್ಥಿತರಿದ್ದರು.
ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ ಪ್ರಸ್ತಾವನೆಗೈದರು, ಉಪಾಧ್ಯಕ್ಷ ಕಿರಣ್ ರೈ ಬಜಾಲ್ ಸ್ವಾಗತಿಸಿ, ಉಮಾಶಂಕರ್, ಧರ್ಮೇಂದ್ರ ಎಂ.ಪಿ. ವಂದಿಸಿ, ಪ್ರವೀಣ್ ಎಸ್.ಕುಂಪಲ, ವಾರಿಣಿ ಎನ್ ಆಚಾರ್ಯ ನಿರೂಪಿಸಿದರು.