10 ಗ್ರಾ.ಪಂ.ಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ
ಕೇಂದ್ರ ಸರಕಾರದ ಸಂಸ್ಥೆ ಜತೆ ರಾಜ್ಯ ಸರಕಾರ ಒಪ್ಪಂದ
Team Udayavani, Oct 31, 2020, 6:02 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಗ್ರಾಮ ಪಂಚಾಯತ್ಗಳಲ್ಲಿ ಭಾರತ ಸರಕಾರದ ಸಂಸ್ಥೆಯಾದ ಕಾಮನ್ ಸರ್ವಿಸ್ ಸೆಂಟರ್: ಇ ಗವರ್ನೆನ್ಸ್ ಸರ್ವಿಸಸ್ ಪ್ರೈ.ಲಿ. (ಸಿಎಸ್ಸಿ, ಎಸ್ಪಿವಿ) ಸಹ ಯೋಗದೊಂದಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯನ್ನು ಪ್ರಾಯೋಗಿಕ ವಾಗಿ ಜಾರಿಗೊಳಿ ಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತಲಾ ಐದರಂತೆ ರಾಜ್ಯದ 150 ಗ್ರಾಮ ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದೆ.
ಒಪ್ಪಂದದ ಸ್ವರೂಪ ಹೇಗೆ?
ಸದ್ಯ ಆಯ್ಕೆಯಾಗಿರುವ ಗ್ರಾ.ಪಂಗಳಲ್ಲಿ ಸಿಎಸ್ಸಿ-ಎಸ್ಪಿವಿ ಸಂಸ್ಥೆಯವರು ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ನೌಕರರನ್ನು ನೇಮಿಸಲಿದ್ದಾರೆ. ಆಧಾರ್ ಕಿಟ್ಗಳನ್ನು ಸಂಸ್ಥೆಯವರೇ ಅಳವಡಿಸುತ್ತಾರೆ. ಗ್ರಾ.ಪಂ.ನವರು ಕೇಂದ್ರ ಸ್ಥಾಪನೆಗೆ ಸ್ಥಳಾವಕಾಶ, ಇಂಟರ್ನೆಟ್ ಹಾಗೂ ಮೂಲಸೌಕರ್ಯ ನೀಡಬೇಕಿದೆ. ಪ್ರತೀ ಆಧಾರ್ ನೋಂದಣಿ, ತಿದ್ದುಪಡಿಗೆ ಸಂಗ್ರಹವಾಗುವ 100 ರೂ.ಗಳಲ್ಲಿ ಸಿಎಸ್ಸಿ, ಎಸ್ಪಿವಿಗೆ 85 ರೂ. ಮತ್ತು ಗ್ರಾ.ಪಂ./ಗ್ರಾಮೀಣಾಭಿವೃದ್ಧಿ ಹಾಗೂ ಪಂ.ರಾಜ್ ಇಲಾಖೆಗೆ 15 ರೂ. ನೀಡಲಾಗುತ್ತದೆ.
ಯಾಕಾಗಿ ಒಪ್ಪಂದ?
ಗ್ರಾ.ಪಂ.ನಲ್ಲಿ ಸಿಬಂದಿ ಮೂಲಕ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಸ್ಥಾಪಿಸಿದರೆ ಪಂಚಾಯತ್ನ ದೈನಂದಿನ ಕಾರ್ಯಗಳಿಗೆ ತೊಂದರೆ ಉಂಟಾಗಲಿದೆ. ಹಾಗೂ ಆಧಾರ್ ನೋಂದಣಿ – ತಿದ್ದುಪಡಿ ಪರಿಣಾಮಕಾರಿಯಾಗಿ ಅನುಷ್ಠಾನ ವಾಗುವುದಿಲ್ಲ. ಹೀಗಾಗಿ ಸಿಎಸ್ಸಿ, ಎಸ್ಪಿವಿ ಸಹಯೋಗದೊಂದಿಗೆ ಆಧಾರ್ ನೋಂದಣಿ ತಿದ್ದುಪಡಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರಕಾರ ನಿರ್ಧರಿಸಿದೆ.
ದಕ್ಷಿಣ ಕನ್ನಡ, ಉಡುಪಿ : ಎಲ್ಲೆಲ್ಲಿ?
ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಬಜಪೆ ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕಿನ ಕೊಳ್ನಾಡು, ಬೆಳ್ತಂಗಡಿಯ ಉಜಿರೆ, ಸುಳ್ಯದ ಅಲೆಟ್ಟಿ, ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾ. ಪಂ., ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿರೂರು, ಉಡುಪಿ ತಾಲೂಕಿನ ಪಡುಬಿದ್ರಿ, ಅಲೆವೂರು, ಕಾರ್ಕಳದ ನಿಟ್ಟೆ, ವರಂಗದಲ್ಲಿ ಪ್ರಾಯೋಗಿಕವಾಗಿ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಸದ್ಯ ಪ್ರಾಯೋಗಿಕ ಅನುಷ್ಠಾನ
ಸಿಎಸ್ಸಿ, ಎಸ್ಪಿವಿ ಸಹಯೋಗ ದೊಂದಿಗೆ ಗ್ರಾ.ಪಂ.ಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಸೂಚಿಸಿದ್ದು, ಅದರಂತೆ ಪ್ರಾಯೋಗಿಕ ವಾಗಿ ದ.ಕ. ಜಿಲ್ಲೆ ಯಲ್ಲಿ 5 ಗ್ರಾ. ಪಂ.ಗಳನ್ನು ಆಯ್ಕೆ ಮಾಡಲಾಗಿದೆ. ಇದು ಯಶಸ್ವಿಯಾದರೆ ಇತರ ಗ್ರಾ. ಪಂ.ಗಳಲ್ಲಿ ಜಾರಿ ಗೊ ಳಿಸುವ ನಿಟ್ಟಿನಲ್ಲಿ ಸರಕಾರ ತೀರ್ಮಾ ನಿಸಲಿದೆ.
ಆರ್. ಸೆಲ್ವಮಣಿ, ಸಿಇಒ, ಜಿ. ಪಂ.-ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ