AEPS Fraud: ಮುದ್ರಾಂಕ ಇಲಾಖೆಯ ವೆಬ್ಸೈಟ್ನಿಂದ ಮಾಹಿತಿ ಕಳವು?
ಪೊಲೀಸರಿಗೆ ದೂರು
Team Udayavani, Sep 22, 2023, 11:50 PM IST
ಮಂಗಳೂರು: ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (ಎಇಪಿಎಸ್)ಮೂಲಕ ಒಂದು ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ವೇಳೆ ನೀಡುವ ಬಯೋಮೆಟ್ರಿಕ್, ಮುದ್ರಾಂಕ ಇಲಾಖೆಯ ವೆಬೈಸೈಟ್ನಲ್ಲಿ ದಾಖಲಾಗುವ ಆಧಾರ್ ಮಾಹಿತಿಯನ್ನು ಬಳಸಿ ಈ ರೀತಿ ವಂಚನೆಯಾಗಿರುವ ಸಾಧ್ಯತೆ ಇದೆ ಎಂಬ ಸಂದೇಹ ವ್ಯಕ್ತವಾಗಿದೆ.
“ದೂರುದಾರರು ನಿರ್ದಿಷ್ಟವಾಗಿ ಸಬ್ರಿಜಿಸ್ಟ್ರಾರ್ ಕಚೇರಿಯ ಮೂಲಕವೇ ವಂಚನೆಯಾಗಿದೆ ಎಂದು ದೂರಿನಲ್ಲಿ ತಿಳಿಸಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಸೈಬರ್ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.