ಕೃಷಿ, ಅಂತರ್ಜಲ ವೃದ್ಧಿಗೆ ಜಲಕ್ರಾಂತಿ
Team Udayavani, Nov 24, 2020, 2:07 PM IST
ಸಾಂದರ್ಭಿಕ ಚಿತ್ರ
ಬೆಳ್ತಂಗಡಿ, ನ. 23: ಅಂತರ್ಜಲ ವೃದ್ಧಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ಅತೀ ಹೆಚ್ಚು 20 ಹಾಗೂ ವಿಶೇಷ ಘಟಕ ಯೋಜನೆಯಡಿ 4 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸರಕಾರ 125 ಕೋ.ರೂ. ಒದಗಿಸಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮೃತ್ಯುಂಜಯ, ನೇತ್ರಾವತಿ, ಫಲ್ಗುಣಿ, ಅಣಿಯೂರು, ಸೋಮಾವತಿ ಮೊದಲಾದ ನದಿಗಳ ನೀರು ಬೆಳ್ತಂಗಡಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ವರೆಗೆ ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಆದರೆ ಬೇಸಗೆಯಲ್ಲಿ ನದಿನೀರು ಬತ್ತಿದಾಗ ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗುತ್ತದೆ.
2019ರಲ್ಲಿ ನೇತ್ರಾವತಿ ಬರಿದಾ ದಾಗ ಇತಿಹಾಸದಲ್ಲೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಬರುವವರು ಯಾತ್ರೆಯನ್ನು ಮುಂದೂಡುವಂತೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ವಿನಂತಿಸಿದ್ದರು. ಜನರು ಜಲ ಸಾಕ್ಷರರಾಗಬೇಕು ಎಂದೂ ಕರೆ ನೀಡಿದ್ದರು. ಇದರ ಭಾಗವಾಗಿ ತಾಲೂಕಿನ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಜಲಯಜ್ಞ ಎಂಬ ನೀರಿಂಗಿಸುವ ಯೋಜನೆಯನ್ನು ಶಾಸಕ ಹರೀಶ್ ಪೂಂಜ ರೂಪಿಸಿದ್ದರು.
600 ಕೋ.ರೂ. ಕ್ರಿಯಾಯೋಜನೆ :
ಜಲಯಜ್ಞ ಕಾರ್ಯಕ್ರಮದಡಿ ಶಾಸಕರ ಸಮಿತಿಯಂತೆ ಅಂತರ್ಜಲ ವೃದ್ಧಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಯಡಿ 600 ಕೋ.ರೂ. ಕ್ರಿಯಾಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಇದೀಗ ಪಶ್ಚಿಮ ವಾಹಿನಿ ಯೋಜನೆಯಡಿ ತಾಲೂಕಿನ
ಪ್ರಮುಖ ನದಿಗಳ ಆಯ್ದ ಭಾಗಗಳಲ್ಲಿ ಕೃಷಿಗೆ ಅನುಕೂಲ ಹಾಗೂ ಜನರ ಸಂಚಾರಕ್ಕೂ ಸಾಧ್ಯವಾಗುವಂತಹ ಕಿಂಡಿ ಅಣೆಕಟ್ಟು ನಿರ್ಮಿಸುವ ನಿಟ್ಟಿನಲ್ಲಿ ಅನುದಾನ ಲಭ್ಯವಾಗಿದೆ.
24 ಕಿಂಡಿ ಅಣೆಕಟ್ಟುಗಳು : ಮಳೆಗಾಲದಲ್ಲಿ ಕರಾವಳಿಯ ನದಿಗಳು ತುಂಬಿ ಹರಿಯುತ್ತವೆ. ಆದರೆ ಬೇಸಗೆಯಲ್ಲಿ ವ್ಯಾಪಕ ನೀರಿನಸಮಸ್ಯೆ ಎದುರಿಸುತ್ತಿರುವುದನ್ನುಕಂಡು ಅಂತರ್ಜಲ ವೃದ್ಧಿಗೆ ಬೆಳ್ತಂಗಡಿ ವ್ಯಾಪ್ತಿಯ ನದಿಗಳಲ್ಲಿ ಸರಣಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಚಿಂತಿಸಿದ್ದರ ಫಲವಾಗಿ ಆರಂಭಿಕ ಹಂತದಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ 125 ಕೋ.ರೂ. ವೆಚ್ಚದಲ್ಲಿ 24 ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಲಿವೆ. – ಹರೀಶ್ ಪೂಂಜ, ಶಾಸಕರು
ದ.ಕ., ಉಡುಪಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ತಡೆಯುವ ದೃಷ್ಟಿಯಿಂದ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಅವಶ್ಯವಾಗಿದೆ. ಹೆಚ್ಚಿನ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. 5 ವರ್ಷಗಳಲ್ಲಿ ಇನ್ನಷ್ಟು ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. – ಗೋಕುಲ್ದಾಸ್, ಕಾರ್ಯಪಾಲಕ ಅಭಿಯಂತ, ಸಣ್ಣನೀರಾವರಿ ವಿಭಾಗ
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ