ಮಣ್ಣು ಕುಸಿದು ಅಂಗನವಾಡಿ ಅಪಾಯದಲ್ಲಿ
Team Udayavani, Aug 9, 2018, 3:45 AM IST
ಪುಂಜಾಲಕಟ್ಟೆ: ಪಿಲಾತಬೆಟ್ಟು ಗ್ರಾಮದ ಮೂರ್ಜೆ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಬುಧವಾರ ತಡೆಗೋಡೆ ಸಹಿತ ಮಣ್ಣು ಕುಸಿದಿದ್ದು, ಅಂಗನವಾಡಿ ಕಟ್ಟಡ ಅಪಾಯದಲ್ಲಿದೆ. ಈ ಕಟ್ಟಡಕ್ಕೆ ತಾಗಿಕೊಂಡು ಸರಕಾರಿ ಹಿ.ಪ್ರಾ. ಶಾಲೆಯೂ ಇದ್ದು, ಅದರ ಒಂದು ಪಾರ್ಶ್ವಕ್ಕೂ ಅಪಾಯದ ಭೀತಿ ಇದೆ. ಸರಕಾರಿ ಹಿ.ಪ್ರಾ. ಶಾಲಾ ಕಟ್ಟಡ ಮತ್ತು ಅಂಗನವಾಡಿ ಕಟ್ಟಡ ಎತ್ತರ ಪ್ರದೇಶದಲ್ಲಿದ್ದು, ಹಿಂಭಾಗದಲ್ಲಿ ತಗ್ಗು ಪ್ರದೇಶದಲ್ಲಿ ಬೀಡಿ ಉದ್ಯಮಿಯೊಬ್ಬರ ಕಟ್ಟಡವಿದೆ. ಅವರ ಜಾಗಕ್ಕೆ ಆವರಣ ಗೋಡೆ ಕಟ್ಟಿದ್ದು ಅದು ಕುಸಿದು ಬಿದ್ದಿದೆ. ಆವರಣಗೋಡೆಗೂ ಅಂಗನವಾಡಿಗೂ 7 ಅಡಿ ದೂರವಿದ್ದು, ಕಟ್ಟಡದ ಸಮೀಪದವರೆಗೆ ಮಣ್ಣು ಕುಸಿದಿದೆ. ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಶಾಲೆಯ ಒಂದು ತರಗತಿಯ ಮಕ್ಕಳನ್ನೂ ಸ್ಥಳಾಂತರಿಸಲಾಗಿದೆ.
ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಸ್ಥಳಕ್ಕಾಗಮಿಸಿ ಬಂಟ್ವಾಳ ಪಂಚಾಯತ್ರಾಜ್ ಎಂಜಿನಿಯರಿಂಗ್ ಉಪವಿಭಾಗ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪಂ.ಅ. ಕಾರ್ಯದರ್ಶಿ ಪ್ರಶಾಂತ್ ಜೋಯೆಲ್ ಫೆಲೆರೋ, ಎಂಜಿನಿಯರ್ ಕೃಷ್ಣ ಮಾನೆ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲಿಕಾ, ಗ್ರಾಮಕರಣಿಕ ರಾಜು, ಸಹಾಯಕ ಸಂತೋಷ್, ಗ್ರಾ.ಪಂ. ಸದಸ್ಯ, ಅಂಗನವಾಡಿ ಸಮಿತಿ ಅಧ್ಯಕ್ಷ ಯೋಗೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನನ್ನ ಜಾಗದ ಎತ್ತರ ಪ್ರದೇಶದ ಮಣ್ಣನ್ನು ಸುಮಾರು 38 ವರ್ಷಗಳ ಹಿಂದೆಯೇ ತೆಗೆಸಿದ್ದು, ಮೇಲ್ಭಾಗಕ್ಕೆ ಆವರಣ ಗೋಡೆ ಕಟ್ಟಿಸಿದ್ದೇನೆ. ಅನಂತರ ಅಂಗನವಾಡಿ ಕಟ್ಟಲಾಗಿದೆ. ಇತ್ತೀಚಿನ ಮಳೆಯಿಂದಾಗಿ ಮತ್ತು ಮೇಲ್ಭಾಗದ ನೀರು ಹರಿದು ಆವರಣ ಗೋಡೆ ಕುಸಿದಿರಬಹುದು ಎಂದು ಬೀಡಿ ಉದ್ಯಮಿಯೊಬ್ಬರು ತಿಳಿಸಿದ್ದಾರೆ. ಮಣ್ಣು ಕುಸಿದ ಭಾಗಕ್ಕೆ ಟರ್ಪಾಲು ಹಾಸಿ ಮತ್ತಷ್ಟು ಮಣ್ಣು ಕುಸಿಯದಂತೆ ಎಚ್ಚರಿಕೆ ವಹಿಸಲು ಜಾಗದ ಮಾಲಕರಲ್ಲಿ ವಿನಂತಿಸಿರುವುದಾಗಿ ಎಂಜಿನಿಯರ್ ಕೃಷ್ಣ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು