ರಫ್ತು ಹೆಚ್ಚಾಗುವ ಹೊತ್ತಿಗೆ ವಿಮಾನಗಳದ್ದೇ ಕೊರತೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೋ
Team Udayavani, Jun 26, 2019, 5:49 AM IST
ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಸೇವೆ ಮೂಲಕ ನಡೆಯುತ್ತಿರುವ ರಫ್ತು ವ್ಯವಹಾರ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುವ ಹೊತ್ತಿನಲ್ಲೇ ವಿಮಾನಗಳ ಕೊರತೆಯ ಸಮಸ್ಯೆ ಉದ್ಭವಿಸಿದೆ.
ಈ ನಿಲ್ದಾಣದಿಂದ 2013ರಲ್ಲಿ ಕಾರ್ಗೋ ಸೇವೆ ಆರಂಭವಾಗಿತ್ತು. ಆ ಆರ್ಥಿಕ ವರ್ಷದಲ್ಲಿ 116.62 ಟನ್ ರಫ್ತು ಕೈಗೊಳ್ಳಲಾಗಿತ್ತು. 2018-19 ರಲ್ಲಿ ಅದು 3,077.89 ಟನ್ಗೆàರಿತು. ಆರೇ ವರ್ಷಗಳಲ್ಲಿ 25ಕ್ಕೂ ಹೆಚ್ಚು ಪಟ್ಟು ಹೆಚ್ಚಳವಾಗಿತ್ತು. ಒಟ್ಟಾರೆ ಆಯಾತ-ನಿರ್ಯಾತ 132.79 ಟನ್ ಗಳಿಂದ 3,159.08 ಟನ್ವರೆಗೆ ಏರಿತ್ತು. ಕಳೆದ ಡಿಸೆಂಬರ್ನಿಂದ ವಿಮಾನ ಗಳ ಹಾರಾಟ ಕಡಿಮೆ ಯಾದರೂ ರಫ್ತು ವ್ಯವಹಾರಕ್ಕೆ ಹೆಚ್ಚು ಹೊಡೆತ ಬಿದ್ದಿಲ್ಲ.
ಇಲ್ಲಿಂದ ಕೊಲ್ಲಿ ದೇಶಗಳಿಗೆ ಶುಕ್ರವಾರ, ರವಿವಾರ 5, ಸೋಮ ವಾರ, ಬುಧವಾರ, ಗುರುವಾರ 4, ಮಂಗಳವಾರ ಮತ್ತು ಶನಿವಾರ 3 ವಿಮಾನಗಳು ಸಂಚರಿಸುತ್ತವೆ. ಇದ ರಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ದುಬಾೖ, ದೋಹಾ, ದಮಾಮ್, ಬಹ್ರೈನ್, ಮಸ್ಕತ್, ಅಬುಧಾಬಿಗಳಿಗೆ ತೆರಳಿದರೆ, ಸ್ಪೈಸ್ ಜೆಟ್ ದುಬಾೖಗಷ್ಟೇ ಪ್ರಯಾಣಿಸುತ್ತದೆ. ಇವುಗಳಲ್ಲಿ ವಿವಿಧ ಉತ್ಪನ್ನಗಳನ್ನು ಕಳಿಸಲಾಗುತ್ತಿದೆ..
ಇಂಡಿಗೋ ಗಲ್ಫ್ಗೂ ಯಾನ ಕೈಗೊಂಡರೆ ಹಾಗೂ ಸ್ಪೆ çಸ್ ಜೆಟ್ ಸಂಸ್ಥೆ ದುಬಾೖ ಜತೆಗೆ ಇತರ ಗಲ್ಫ್ ದೇಶಗಳಿಗೂ ಯಾನ ಆರಂಭಿಸಿದರೆ ರಫ್ತು ವ್ಯವಹಾರಕ್ಕೆ ಕೊಂಚ ಅನುಕೂಲವಾಗಬಹುದು ಎನ್ನುತ್ತಾರೆ ಉದ್ಯಮ ಪರಿಣತರು.
ಸ್ಥಳೀಯ ರಫ್ತು ಏಜೆನ್ಸಿಗಳು ಇಲ್ಲಿನ ಕೃಷಿಕರನ್ನು ತರಕಾರಿ ಬೆಳೆಯಲು ಪ್ರೋತ್ಸಾಹಿಸಬೇಕು. ಇಲ್ಲಿನ ತರಕಾರಿ ಮತ್ತು ಇತರ ಉತ್ಪನ್ನಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆ ಇದೆ. ಈಗಾಗಲೇ ಏರ್ ಏಶ್ಯಾದಂತಹ ವಿಮಾನ ಸಂಸ್ಥೆಗಳು ಗಲ್ಫ್ ದೇಶಗಳಿಗೆ ವಿಮಾನ ಯಾನ ಆರಂಭಿಸಲು ಆಸಕ್ತಿ ವಹಿಸಿವೆ. ಹೆಚ್ಚು ವಿಮಾನಗಳು ಸಂಚರಿಸಿದರೆ ರಫೂ¤ ಹೆಚ್ಚೀತು.
– ಕೆ.ಎ. ಶ್ರೀನಿವಾಸನ್, ಮ್ಯಾನೇಜರ್, ಕಾರ್ಗೊ ವಿಭಾಗ, ಮಂಗಳೂರು ವಿ. ನಿಲ್ದಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ