City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು
Team Udayavani, Sep 28, 2023, 12:35 AM IST
ಮಂಗಳೂರು: ಖಾಸಗಿ ಸಿಟಿ ಬಸ್ನ ನಿರ್ವಾಹಕನಿಗೆ ಪ್ರಯಾಣಿಕರಿಂದ ಹಲ್ಲೆ ಹಾಗೂ ಪರಸ್ಪರ ಹೊಡೆದಾಟದ ಘಟನೆ ನಗರದ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಅಡ್ಯಾರ್ ಕಣ್ಣೂರಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಸಂಜೆ 6.15ರ ಸುಮಾರಿಗೆ ಸ್ಟೇಟ್ಬ್ಯಾಂಕ್ನಿಂದ ಕಣ್ಣೂರಿಗೆ ಹೋಗುತ್ತಿದ್ದ ಬಸ್ನಲ್ಲಿದ್ದ ಪ್ರಯಾಣಿಕ ಕಣ್ಣೂರು ಚೆಕ್ಪೋಸ್ಟ್ಗಿಂತ ಸ್ವಲ್ಪ ಹಿಂದೆ ನಿಲ್ಲಿಸುವಂತೆ ನಿರ್ವಾಹಕನಿಗೆ ತಿಳಿಸಿದ. ಆದರೆ ನಿರ್ವಾಹಕ ಮುಂದಿನ ನಿಲ್ದಾಣದಲ್ಲಿ ನಿಲ್ಲಿಸುವುದಾಗಿ ಹೇಳಿದ. ಈ ಸಂದರ್ಭ ಮಾತಿನ ಚಕಮಕಿ ನಡೆದು ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿದ್ದಾರೆ. ಅನಂತರ ಪರಸ್ಪರ ಹೊಡೆದಾಟ ನಡೆದಿದೆ. ಈ ಬಗ್ಗೆ ನಿರ್ವಾಹಕ ಮತ್ತು ಪ್ರಯಾಣಿಕ ಪರಸ್ಪರರ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಬಸ್ ಓಡಾಟ ಸ್ಥಗಿತ
ಹಲ್ಲೆಯನ್ನು ಖಂಡಿಸಿ ಬಸ್ ಸಿಬಂದಿ ಬುಧವಾರ ಅಡ್ಯಾರ್ಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು. ಅಡ್ಯಾರ್ ಕಣ್ಣೂರು ಭಾಗದಲ್ಲಿ ಖಾಸಗಿ ಬಸ್ ಸಂಚರಿಸಲು ಅವಕಾಶ ನೀಡಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಟೈಮಿಂಗ್ಸ್ ನಿಯಮದಿಂದಾಗಿ ಕೆಲವೊಮ್ಮೆ ಕೆಲವು ನಿಲ್ದಾಣಗಳಲ್ಲಿ ಬಸ್ ನಿಲುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಿರ್ವಾಹಕರು ದೂರಿದ್ದಾರೆ.
ಕಠಿನ ಕ್ರಮಕ್ಕೆ ಒತ್ತಾಯ
ಗಾಯಗೊಂಡ ಬಸ್ ನಿರ್ವಾಹಕ ಯಶವಂತ್ ಪೂಜಾರಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಹಲ್ಲೆ ನಡೆಸಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಶರಣ್ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಸಾಗುವುದಷ್ಟೇ ಮುಖ್ಯ ಎಂದು ಮೂಗು ಮುರಿಯಬೇಡಿ !
Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು
Mangaluru ಮೂಲದ ಫಾ| ವಿಲ್ಫ್ರೆಡ್ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್ ಆಗಿ ನೇಮಕ
ಕೊಳಚಿಕಂಬಳ: ಮರುವಾಯಿ ಹೆಕ್ಕಲು ನದಿಗಿಳಿದ ಓರ್ವ ನೀರುಪಾಲು; ಮೂವರನ್ನು ರಕ್ಷಿಸಿದ ಸ್ಥಳೀಯರು
Mangaluru ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು