ಬಂಟ್ವಾಳ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬಾವಿಗೆ ಬಿದ್ದು ಸಾವು
Team Udayavani, Jul 17, 2022, 7:46 PM IST
ಬಂಟ್ವಾಳ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾವಳಪಡೂರು ಗ್ರಾಮದಲ್ಲಿ ಜುಲೈ 16 ರಂದು ಸಂಜೆ ವೇಳೆ ನಡೆದಿದೆ.
ಬಂಟ್ವಾಳ ತಾಲೂಕಿನ ಕಾವಳಪಡೂರು ಬಾಳ್ತಬೈಲು ನಿವಾಸಿ ರಾಘವ ದೇವಾಡಿಗ (65) ಮೃತಪಟ್ಟ ವ್ಯಕ್ತಿ.
ದೇವಾಡಿಗ ಅವರು ಸ್ವಂತ ಅಡಿಕೆ ತೋಟದಲ್ಲಿರುವ ಬಾವಿಯ ಸುತ್ತಲೂ ಬಂದಿದ್ದ ಹುಲ್ಲು ತೆಗೆಯುವ ವೇಳೆ ಆಯತಪ್ಪಿ ಬಾವಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.
ಮನೆಯಲ್ಲಿರುವ ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದು, ರಾಘವ ಅವರು ಒಬ್ಬರೇ ಮನೆಯಲ್ಲಿದ್ದರು. ಜುಲೈ 16 ರಂದು ಶನಿವಾರ ತೋಟದಲ್ಲಿರುವ ಬಾವಿಯ ಸುತ್ತಲಿನ ಹುಲ್ಲನ್ನು ಹಾರೆಯಿಂದ ತೆಗೆಯುತ್ತಿದ್ದನ್ನು ಸಂಜೆ 3.30. ಗಂಟೆಗೆ ನೆರೆಯ ಮನೆಯ ವ್ಯಕ್ತಿ ನೋಡಿದ್ದರು. ಆದರೆ ಸಂಜೆ ವೇಳೆ ಮಗ ಮನೆಗೆ ಬಂದು ನೋಡಿದಾಗ ತಂದೆ ಇರದಿದ್ದನ್ನು ಕಂಡು ಹುಡುಕಾಡಿದಾಗ ತೋಟದ ಬಾವಿಯ ಹತ್ತಿರ ಹಾರೆ ಇತ್ತು ಸಂಶಯದಿಂದ ಬಾವಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಸರಣಿ ನಿರ್ಣಾಯಕ ಪಂದ್ಯದಲ್ಲಿ 259 ರನ್ ಗಳಿಗೆ ಇಂಗ್ಲೆಂಡ್ ಆಲೌಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು