ಬಂಟ್ವಾಳ : ನೀರೆತ್ತಲು ಹೋಗಿದ್ದ ನವ ವಿವಾಹಿತೆ ಬಾವಿಗೆ ಬಿದ್ದು ಸಾವು
Team Udayavani, May 30, 2022, 1:11 AM IST
ಬಂಟ್ವಾಳ : ತೆರೆದ ಬಾವಿಯಿಂದ ನೀರೆತ್ತಲು ಹೋಗಿದ್ದ ನವ ವಿವಾಹಿತೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ಕಲ್ಲಡ್ಕದ ಕೆ.ಸಿ.ರೋಡು ಬಳಿ ಸಂಭವಿಸಿದೆ.
ಕೆ.ಸಿ. ರೋಡು ನಿವಾಸಿ, ಇಬ್ರಾಹಿಂ ತೌಸೀರ್ ಅವರ ಪತ್ನಿ ಮುನೀಝಾ(20) ಮೃತರು. ಮೂಲತಃ ಬಿ.ಸಿ.ರೋಡಿನ ತಲಪಾಡಿ ನಿವಾಸಿ, ಫರಂಗಿಪೇಟೆ ಸಮೀಪದ ಅಮ್ಮೆಮ್ಮಾರ್ನಲ್ಲಿ ವಾಸವಿದ್ದ ಮುಹಮ್ಮದ್ ಅವರ ಪುತ್ರಿಯಾಗಿರುವ ಮುನೀಝಾ ಅವರನ್ನು ಎರಡು ತಿಂಗಳ ಹಿಂದೆಯಷ್ಟೇ ಇಬ್ರಾಹಿಂ ತೌಸೀರ್ಗೆ ವಿವಾಹ ಮಾಡಿಕೊಡಲಾಗಿತ್ತು.
ಮುನೀಝಾ ರವಿವಾರ ಬೆಳಗ್ಗೆ ಮನೆಗೆ ನೀರು ತರುವುದಕ್ಕಾಗಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ