ಪೆಟ್ರೋಲ್‌, ಡೀಸೆಲ್‌ ಕಳ್ಳರಿದ್ದಾರೆ ಎಚ್ಚರ!


Team Udayavani, Oct 29, 2018, 11:07 AM IST

29-october-4.gif

ಮಹಾನಗರ: ರೈಲು, ಬಸ್‌ ನಿಲ್ದಾಣ ಸೇರಿದಂತೆ ನಗರದ ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಹೆಚ್ಚು ಸಮಯ ವಾಹನ ನಿಲ್ಲಿಸಿ ಹೋಗಬೇಕಾದರೆ ಎಚ್ಚರ ವಹಿಸುವ ಅಗತ್ಯವಿದೆ. ಏಕೆಂದರೆ, ಸವಾರರು ತಮ್ಮ ಕೆಲಸ ಮುಗಿಸಿ ಹಿಂದಿರುಗುವಷ್ಟರಲ್ಲಿ ವಾಹನದ ಇಂಧನ ಟ್ಯಾಂಕ್‌ನಲ್ಲಿರುವ ಪೆಟ್ರೋಲ್‌-ಡೀಸೆಲ್‌ ಖಾಲಿಯಾಗಿರುತ್ತದೆ!

ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಅಥವಾ ವಾಹನ ನಿಲುಗಡೆ ಮಾಡಿರುವ ಸ್ಥಳಗಳಲ್ಲಿ ರಾತ್ರಿ ಹೊತ್ತು ಹೊಂಚು ಹಾಕಿ ಪೆಟ್ರೋಲ್‌, ಡೀಸೆಲ್‌ ಕದಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಪೆಟ್ರೋಲ್‌ ಖದೀಮರ ಬಗ್ಗೆ ಎಚ್ಚರಿಕೆಯಿಂದಿರುವುದು ಆವಶ್ಯಕ. ಈ ಬಗ್ಗೆ ಕೆಲವರು ಪೊಲೀಸ್‌ ದೂರು ನೀಡಿದರೆ, ಮತ್ತೆ ಕೆಲವರು ಅನವಶ್ಯ ಅಲೆದಾಡಬೇಕಾಗುತ್ತದೆ ಎಂದು ಸುಮ್ಮನಾಗುತ್ತಿದ್ದಾರೆ.

ಪಾರ್ಕ್‌ ಮಾಡಿದ ವಾಹನ ಸುರಕ್ಷಿತವಲ್ಲ
ಸಾಮಾನ್ಯವಾಗಿ ಜನರು ರೈಲು ಅಥವಾ ಬಸ್‌ಗಳಲ್ಲಿ ದೂರದೂರಿಗೆ ಹೋಗಬೇಕಾದ ಸಂದರ್ಭದಲ್ಲಿ ರೈಲ್ವೇ ನಿಲ್ದಾಣ ಅಥವಾ ಬಸ್‌ ನಿಲ್ದಾಣದ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಹೀಗೆ ಪಾರ್ಕ್‌ ಮಾಡಿದಕ್ಕೆ ಹಣವನ್ನೂ ನೀಡುತ್ತಾರೆ. ಆದರೆ ಪಾರ್ಕ್‌ ಮಾಡಿದ ವಾಹನ ಸುರಕ್ಷಿತವಾಗಿ ಇರುತ್ತದೆ ಎಂಬ ಬಗ್ಗೆ ಯಾವ ಖಚಿತತೆಯೂ ಇರುವುದಿಲ್ಲ. ಏಕೆಂದರೆ ಬೇಕೆಂದೇ ಹೊಂಚು ಹಾಕಿ ಅಥವಾ ತಮ್ಮ ವಾಹನದಲ್ಲಿ ಪೆಟ್ರೋಲ್‌ ಖಾಲಿಯಾಯಿತೆಂದು ರಾತ್ರಿ ಹೊತ್ತಿನಲ್ಲಿ ದ್ವಿಚಕ್ರ ವಾಹನಗಳಿಂದ ಪೆಟ್ರೋಲ್‌ ಕದಿಯುವವರ ಸಂಖ್ಯೆ ಹೆಚ್ಚುತ್ತಿದೆ. 

ಗಂಜಿಮಠ-ನಾರ್ಲಪದವು ಬಳಿ ಬುಧವಾರ ರಾತ್ರಿ ಜಿ. ಯಾಕೂಬ್‌ ಅವರು ತಮ್ಮ ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಗ್ಯಾಸ್‌ ಲೋಡ್‌ನ‌ ಲಾರಿಯಿಂದ 10,000 ರೂ. ಮೌಲ್ಯದ 120 ಲೀಟರ್‌ ಡೀಸೆಲ್‌ ಕಳವಾಗಿದೆ ಎಂದು ಈಗಾಗಲೇ ಬಜಪೆ ಪೊಲೀಸ್‌ ಠಾಣೆಗೆ ದೂರು ದಾಖಲಿದ್ದಾರೆ.

ಮಂಗಳೂರು ನಿವಾಸಿಯೋರ್ವರು ಕಳೆದ ರವಿವಾರ ಹಂಪನಕಟ್ಟೆ ಸೆಂಟ್ರಲ್‌ ರೈಲ್ವೇ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದರು. ಟ್ಯಾಂಕ್‌ನಲ್ಲಿ ಸುಮಾರು ಎರಡು ಲೀಟರ್‌ ಇದ್ದ ಪೆಟ್ರೋಲ್‌ ಎರಡು ದಿನಗಳ ಅನಂತರ ಮಂಗಳವಾರ ಬೆಳಗ್ಗಿನ ಜಾವ ಬಂದು ನೋಡಿದಾಗ ಸಂಪೂರ್ಣ ಖಾಲಿಯಾಗಿತ್ತು. ವಾಹನ ಚಾಲುಗೊಳ್ಳಲು ಬೈಕಿಗೆ ಪೆಟ್ರೋಲ್‌ ನ್ನು ಸಂಪರ್ಕಿಸುವ ವಯರ್‌ ಸಡಿಲ ಕನೆಕ್ಷನ್‌ನಲ್ಲಿದ್ದು, ವಾಹನದ ಕೆಳಭಾಗದಲ್ಲಿ ಪೆಟ್ರೋಲ್‌ ಚೆಲ್ಲಿತ್ತು. ಅಲ್ಲದೆ ಬಿಸಿಲು ತಾಗದ ಜಾಗದಲ್ಲಿ ವಾಹನ ನಿಲ್ಲಿಸಿರುವುದರಿಂದ ಎರಡು ಲೀಟರ್‌ ಪೆಟ್ರೋಲ್‌ ಬಿಸಿಲಿಗೆ ಆರಿ ಹೋಗುವ ಸಾಧ್ಯತೆಯೂ ಇಲ್ಲ. ಇದರಿಂದ ಪೆಟ್ರೋಲ್‌ ಕಳವಾಗಿರುವುದು ಸ್ಪಷ್ಟವಾಗಿದೆ. ಆದರೆ ಈ ಬಗ್ಗೆ ಪಾರ್ಕಿಂಗ್‌ನಲ್ಲಿ ಶುಲ್ಕ ಸಂಗ್ರಹಿಸುವವರ ಬಳಿ ವಿಚಾರಿಸಿದರೆ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ ಅವರು.

ಹೆಲ್ಮೆಟ್‌ ಕಳ್ಳರ ಹಾವಳಿ
ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ ಆದೇಶ ಬಂದ ಬಳಿಕ ಹೆಲ್ಮೆಟ್‌ ಕಳವು ಪ್ರಕರಣ ಹೆಚ್ಚಿದ್ದರೆ, ಬಳಿಕ ಕಡಿಮೆಯಾಗಿತ್ತು. ಆದರೆ ಈಗ ಬೈಕ್‌ ಮೇಲೆ ಹೆಲ್ಮೆಟ್‌ ಇರಿಸಿ ಹೋದರೆ ಹೆಲ್ಮೆಟ್‌ನ್ನೂ ಲಪಟಾಯಿಸುವ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ. 

24×7 ಸಿಬಂದಿ ಇದ್ದರೂ
ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಕಳವಾಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಅನೇಕ ಬಾರಿ ವಯರ್‌ ತುಂಡರಿಸಿ ಕಳವು ಮಾಡಿರುವ ಬಗ್ಗೆಯೂ ಸಾರ್ವಜನಿಕರು ದೂರಿಕೊಂಡಿದ್ದಾರೆ. ಈ ಎಲ್ಲ ಪಾರ್ಕಿಂಗ್‌ ಸ್ಥಳಗಳಲ್ಲಿ ಪಾರ್ಕಿಂಗ್‌ ಶುಲ್ಕ ತೆಗೆದುಕೊಳ್ಳುವ ಸಿಬಂದಿ ಮತ್ತು ಭದ್ರತಾ ಸಿಬಂದಿ 24×7 ಕೆಲಸದಲ್ಲಿರುತ್ತಾರೆ. ಆದರೂ ಕಳವು ನಡೆಯುತ್ತಿರುವುದು ವಿಪರ್ಯಾಸ. 

ದೂರು ಬಂದಿಲ್ಲ
ರೈಲ್ವೇ ಸ್ಟೇಷನ್‌ ಅಥವಾ ಇತರ ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಕಳವು ಆದ ಬಗ್ಗೆ ಯಾವುದೇ ದೂರುಗಳು ಈವರೆಗೆ ಬಂದಿಲ್ಲ. ದೂರು ಬಂದಲ್ಲಿ ಆ ಬಗ್ಗೆ ಪರಿಶೀಲಿಸಲಾಗುವುದು.
– ಉಮಾ ಪ್ರಶಾಂತ್‌,
ಡಿಸಿಪಿ,ಕಾನೂನು ಮತ್ತು ಸುವ್ಯವಸ್ಥೆ

ವಿಶೇಷ ವರದಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.