ಬೀಡಿ ಕಂಟ್ರಾಕ್ಟ್ದಾರರು ಮುಷ್ಕರ ಹಿಂಪಡೆಯುವಂತೆ ಮನವಿ


Team Udayavani, Feb 9, 2023, 6:30 AM IST

ಬೀಡಿ ಕಂಟ್ರಾಕ್ಟ್ದಾರರು ಮುಷ್ಕರ ಹಿಂಪಡೆಯುವಂತೆ ಮನವಿ

ಮಂಗಳೂರು: ಕಮಿಷನ್‌ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕೆಲವು ಬೀಡಿ ಕಂಟ್ರಾಕ್ಟರುದಾರರ ಸಂಘಗಳು ಫೆ. 10ರಿಂದ ನಡೆಸಲು ಉದ್ದೇಶಿಸಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದು ಯಥಾಸ್ಥಿತಿ ಕಾಪಾಡಬೇಕು ಎಂದು ಕರ್ನಾಟಕ ಬೀಡಿ ಇಂಡಸ್ಟ್ರೀಸ್‌ ಅಸೋಸಿಯೇಶನ್‌ ವಿನಂತಿಸಿದೆ.

ಮುಷ್ಕರ ನಡೆಸಿದರೆ ಬೀಡಿ ಕಟ್ಟುವ ಲಕ್ಷಾಂತರ ಜನರ ಜೀವನಕ್ಕೆ ಸಂಕಷ್ಟಗಳುಂಟಾಗಿ ಹಲವು ಕಷ್ಟನಷ್ಟಗಳಿಗೆ ಕಾರಣವಾಗುತ್ತದೆ. ದೇಶದಲ್ಲಿ ಬೀಡಿ ಕಂಟ್ರಾಕುrದಾರರ ಕಮಿಷನ್‌ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ 2-3 ಪಟ್ಟು ಹೆಚ್ಚಾಗಿದೆ. ಸಂಧಾನ ಮಾತುಕತೆ ಪ್ರಾರಂಭಿಸುವ ಮೊದಲು ಪ್ರತೀ 1000 ಬೀಡಿಗಳಿಗೆ 26.75 ರೂ. ನೀಡುತ್ತಿದ್ದೆವು. ಆದರೂ ಅಸೋಸಿಯೇಶನ್‌ ಡಿ. 24, ಫೆ. 2 ಹಾಗೂ ಫೆ. 4ರಂದು ಕಂಟ್ರಾಕುrದಾರರ ಸಭೆಯನ್ನು ಕರೆದು ಈ ಬಗ್ಗೆ ಚರ್ಚಿಸಿ ಪರಿಹಾರ ಕಾಣಲು ಪ್ರಯತ್ನ ನಡೆಸಿದೆ. ಈಗಾಗಲೇ ಅಸೋಸಿಯೇಶನ್‌ 2022- 2023ರ ಸಾಲಿಗೆ ಪ್ರತೀ 1 ಸಾವಿರ ಬೀಡಿಗೆ 2 ರೂ. ಕಂಟ್ರಾಕ್ಟ್ ಕಮಿಷನ್‌ ಹೆಚ್ಚಳ ನೀಡಲು ಮಾತುಕತೆಯಲ್ಲಿ ಒಪ್ಪಿದ್ದರೂ ಕಂಟ್ರಾಕುrದಾರರ ಸಂಘಗಳು ಇದನ್ನು ತಿರಸ್ಕರಿಸಿವೆ ಹಾಗೂ ಪ್ರತೀ 1 ಸಾವಿರ ಬೀಡಿಗೆ 3.25 ರೂ. ಹೆಚ್ಚಳ ನೀಡಲೇ ಬೇಕೆಂದು ಪಟ್ಟು ಹಿಡಿದು ಸಂಧಾನ ಸಭೆಯನ್ನು ಮುರಿದಿದ್ದಾರೆ. ಈಗಾಗಲೇ ನೀಡಿದ 2 ರೂ. ಹೆಚ್ಚಳವನ್ನು ಸೇರಿಸಿದರೆ ಕಂಟ್ರಾಕ್ಟ್ ಕಮಿಷನ್‌ 2022- 23ರ ಸಾಲಿಗೆ ಪ್ರತೀ 1 ಸಾವಿರ ಬೀಡಿಗೆ 28.75 ರೂ. ಆಗುತ್ತದೆ. ಇದಕ್ಕಿಂತ ಹೆಚ್ಚು ನೀಡಲು ಯಾವುದೇ ಕಾರಣಕ್ಕೆ ಅಸಾಧ್ಯವಾಗಿದ್ದು, ಈ ಬೇಡಿಕೆ ನಮ್ಮ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗುವುದಲ್ಲದೇ ದೇಶೀಯ ಮಟ್ಟದಲ್ಲಿ ಇತರ ರಾಜ್ಯಗಳ ಬೀಡಿ ಉತ್ಪಾದಕರೊಂದಿಗೆ ಸ್ಪರ್ಧಿಸಲು ಅಸಾಧ್ಯವಾಗುತ್ತದೆ ಎಂದು ಸಂಘವು ಪ್ರಕಟನೆಯಲ್ಲಿ ತಿಳಿಸಿದೆ.

ಕಂಟ್ರಾಕ್ಟ್ ಕಮಿಷನ್‌ 2022-23ರಲ್ಲಿ ಪಶ್ಚಿಮ ಬಂಗಾಲದಲ್ಲಿ 7 ರೂ., ತಮಿಳುನಾಡಿನಲ್ಲಿ 12 ರೂ., ಆಂಧ್ರಪ್ರದೇಶದಲ್ಲಿ 15.02 ರೂ. ಇದ್ದು, ಕರ್ನಾಟಕದಲ್ಲಿ 28.75 ರೂ. ಇದೆ. ಹೀಗಾಗಿ ಕಂಟ್ರಾಕ್ಟರುದಾರರ ಕಮಿಷನ್‌ ಹೆಚ್ಚಳದ ಬಗ್ಗೆ ಮುಷ್ಕರವು ನ್ಯಾಯ ಸಮ್ಮತವಾಗಿರುವುದಿಲ್ಲ. ನಾವು ನಮ್ಮ ಕಚೇರಿಯನ್ನು (ಬ್ರಾಂಚ್‌) ತೆರೆದಿಟ್ಟು ಕೆಲಸ ನೀಡಲು ಯಾವತ್ತೂ ತಯಾರಿದ್ದೇವೆ. ಕಂಟ್ರಾಕುrದಾರರು ನಮ್ಮಿಂದ ತಂಬಾಕು ಹಾಗೂ ಇತರ ಕಚ್ಚಾವಸ್ತುಗಳನ್ನು ಪಡೆದು ಅಥವಾ ಪಡೆಯದೆ ಕಾರ್ಮಿಕರಿಗೆ ನೀಡದೆ ಅವರಿಗೆ ಕೆಲಸವನ್ನು ನಿರಾಕರಿಸಿದಲ್ಲಿ, ಮುಂದೆ ಉದ್ಭವಿಸಬಹುದಾದಂತಹ ಎಲ್ಲ ಕಷ್ಟನಷ್ಟಗಳಿಗೆ ಮುಷ್ಕರದಲ್ಲಿ ತೊಡಗಿರುವ ಕಂಟ್ರಾಕುrದಾರರೇ ಬಾಧ್ಯರಾಗಿರುತ್ತಾರೆ ಎಂದು ಕರ್ನಾಟಕ ಬೀಡಿ ಇಂಡಸ್ಟ್ರೀಸ್‌ ಅಸೋಸಿಯೇಶನ್‌ ಪ್ರಕಟನೆಯಲ್ಲಿ ತಿಳಿಸಿದೆ.

ಟಾಪ್ ನ್ಯೂಸ್

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

Vachanananda Swamiji spoke about getting reservation to Panchmasali community

ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeq223

ಮಂಗಳೂರು: 23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಬಂಧನ

1-daadas

ಮಂಗಳೂರು,ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

1-wweqewqe

ಅಂಗಾಂಗ ದಾನ ಮಾಡಿದ ಯುವಕನ ಕುಟುಂಬಕ್ಕೆ ಸಿಎಂ ನಿಧಿಯಿಂದ 5 ಲಕ್ಷ ರೂ. ನೆರವು

1-csdsadsad

ಗ್ರಾಮದಲ್ಲಿ ಸುತ್ತಾಡಿದ ಪಂಚಾಯತ್‌ರಾಜ್‌ ಇಲಾಖೆಯ ಸಿಎಸ್‌;ಮಾತುಕತೆ

ಹೆದ್ದಾರಿ ಕೆಲಸ ತ್ವರಿತಗೊಳಿಸಿ, ಗುತ್ತಿಗೆದಾರರು ಕೈಬಿಡದಿರಿ: ಸಂಸದ ನಳಿನ್‌ ಸೂಚನೆ

ಹೆದ್ದಾರಿ ಕೆಲಸ ತ್ವರಿತಗೊಳಿಸಿ, ಗುತ್ತಿಗೆದಾರರು ಕೈಬಿಡದಿರಿ: ಸಂಸದ ನಳಿನ್‌ ಸೂಚನೆ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

Vachanananda Swamiji spoke about getting reservation to Panchmasali community

ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.