2 ದಿನಗಳ ಹಿಂದೆ ನಾಪತ್ತೆ ಆದ ದಿವಾಕರ್, ಚಂದ್ರಹಾಸ್ ಶವವಾಗಿ ಪತ್ತೆ
Team Udayavani, Aug 18, 2018, 1:11 PM IST
ಬಜ್ಪೆ: ಎರಡು ದಿನಗಳ ಹಿಂದೆ ಮೂಡುಪೆರಾರ ನೆಲ್ಲಿಕಾಡು ತೋಡಿಗೆ ಕಾಲು ಜಾರಿ ಬಿದ್ದಿದ್ದ ದಿವಾಕರ(32) ಅವರ ಶವ ಎಕ್ಕಾರು ಕನಿಕಟ್ಟ ಸೇತುವೆ ಬಳಿ ಪತ್ತೆಯಾದರೆ, ಪಡುಪೆರಾರ ಗ್ರಾಮದ ಕತ್ತಲ್ಸಾರ್ ಕಲ್ಲಟ್ಟ- ಸಾಂತ್ರಬೈಲು ಬಳಿ ತೋಡಿಗೆ ಬಿದ್ದಿದ್ದ ಚಂದಸ್ರಹಾಸ ಶೆಟ್ಟಿ 53) ಅವರ ಶವ ಎಕ್ಕಾರು ಮೊಯ್ಲಿಬೆನ್ನಿ ಸೇತುವೆ ಬಳಿ ಶನಿವಾರ ಮಧ್ಯಾಹ್ನ ಪತ್ತೆಯಾಗಿದೆ.
ನೆಲ್ಲಿಕಾಡು ಮನೆಯ ನಿವಾಸಿ ದಿವಾಕರ ಕೂಲಿ ಕೆಲಸ ಮಾಡಿಕೊಂಡಿದ್ದು, ಗುರುವಾರ ಸಂಜೆ ಕೆಲಸದಿಂದ ವಾಪಾಸಾಗುವ ಸಂದರ್ಭ ಮನೆ ಬಳಿ ತೋಡಿನ ನೀರಿಗೆ ಕಾಲು ಜಾರಿ ಬಿದ್ದಿದ್ದರು.
ಕಲ್ಲಟ್ಟ- ಸಾಂತ್ರಬೈಲು ಕಿಂಡಿ ಆಣೆಕಟ್ಟಿನಲ್ಲಿ ಮನೆಕಡೆ ಹೋಗುತ್ತಿದ್ದ ಬಾಕಿಮಾರ್ ಕೋಡಿ ನಿವಾಸಿ ಚಂದ್ರಹಾಸ ಶೆಟ್ಟಿ ಕಾಲು ಜಾರಿ ತೋಡಿಗೆ ಬಿದ್ದಿದ್ದರು. ಇವರು ಎಂಆರ್ಪಿಎಲ್ ಗುತ್ತಿಗೆ ನೌಕರರಾಗಿದ್ದರು. ಇಬ್ಬರೂ ಬಿದ್ದ ತೋಡು ಒಂದೆಯಾಗಿದೆ. ಈ ತೋಡು ಎಕ್ಕಾರಿನಲ್ಲಿ ದೊಡ್ಡದಾಗಿ ನದಿ ಆಕಾರವನ್ನು ಪಡೆಯುತ್ತದೆ.
ಗುರುವಾರ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಬಜ್ಪೆ ಪೊಲೀಸರು ಆಗಮಿಸಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ತಣ್ಣೀರುಬಾವಿ ಮುಳುಗು ತಜ್ಞರು ಆಗಮಿಸಿ ಹುಡುಕಾಟ ನಡೆಸಿದ್ದರು. ಇದೀಗ ಶನಿವಾರ ಎಕ್ಕಾರು ಬಳಿ ದಿವಾಕರ ಮತ್ತು ಚಂದ್ರಹಾಸ ಅವರ ಶವ ಒಂದೇ ಕಡೆ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ