ಖರೀದಿದಾರರೇ ಗಮನಿಸಿ…ನಂಬರ್ ಅಳವಡಿಸದೆ ವಾಹನ ಡೆಲಿವರಿ ಇಲ್ಲ
Team Udayavani, Mar 21, 2023, 7:10 AM IST
ಮಂಗಳೂರು: ಹೊಸ ವಾಹನ ಖರೀದಿಸುವವರೇ ಗಮನಿಸಿ, ಇನ್ನು ಮುಂದೆ ನೀವು ವಾಹನ ಡೆಲಿವರಿ ಪಡೆಯುವಾಗ ನೋಂದಣಿ ಸಂಖ್ಯೆ ಅಳವಡಿಸಿರಲೇಬೇಕು.
ಸಾಮಾನ್ಯವಾಗಿ ಹೊಸ ವಾಹನ ಖರೀದಿಸು ವವರು ಹಣ ಪಾವತಿಯಾದ ಕೂಡಲೇ ನೋಂದಣಿ ಮಾಡಿಸಿ, ನಂಬರ್ ಪ್ಲೇಟ್ ಬರುವ ಮುಂಚೆಯೇ ಡೆಲಿವರಿ ಪಡೆದುಕೊಳ್ಳುವುದು ವಾಡಿಕೆ. ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ಅಂತಿಮ ಅಧಿಸೂಚನೆಯ ಪ್ರಕಾರ ಮೋಟಾರು ವಾಹನಗಳ ಕಾಯಿದೆ 1988ರ ಕಲಂ 41(6)ರ ಅನ್ವಯ ಇದೇ ಮಾ. 3ರಿಂದ ಅನ್ವಯವಾಗುವಂತೆ ಅತೀ ಸುರಕ್ಷಿತ ನೋಂದಣಿ ಫಲಕ (ಎಚ್ಎಸ್ಆರ್ಪಿ) ಅಳವಡಿಸದೆ ಹೊಸ ವಾಹನಗಳನ್ನು ಮಾಲಕರಿಗೆ ನೀಡುವಂತಿಲ್ಲ. ಇದಕ್ಕಾಗಿ ಕೇಂದ್ರ ಮೋಟಾರು ವಾಹನಗಳ 1989ರ ನಿಯಮ 50ಕ್ಕೆ ತಿದ್ದುಪಡಿ ಮಾಡಲಾಗಿದ್ದು, 1-4- 2019ರಿಂದ ಜಾರಿಗೆ ಬರಬೇಕಿತ್ತು. ಈಗ ಕಡ್ಡಾಯಗೊಳಿಸಲಾಗಿದೆ.
ಗ್ರಾಹಕರಿಗೆ ಹೊಸ ನಿಯಮದ ಮಾಹಿತಿ ಇಲ್ಲ. ಹಣ ಪಾವತಿಸಿ, ನೋಂದಣಿಯಾದ ಕೂಡಲೇ ವಾಹನ ಹಸ್ತಾಂತರ ಮಾಡುವಂತೆ ಆಗ್ರಹಿಸುತ್ತಾರೆ. ಹೊಸ ನಿಯಮದ ಬಗ್ಗೆ ತಿಳಿಸಿದರೆ “ಇದುವರೆಗೆ ಇಲ್ಲದ ನಿಯಮ, ನೀವೇ ಮಾಡಿದ್ದಾ’ ಎಂದು ಪ್ರಶ್ನಿಸು ತ್ತಾರೆ ಎನ್ನುವುದು ವಾಹನ ಡೀಲರ್ ಒಬ್ಬರ ಮಾತು.
ಈಗ ಹಿಂದಿನಂತೆ ಹೊಸ ವಾಹನ ಗಳನ್ನು ನೋಂದಣಿಗಾಗಿ ಆರ್ಟಿಒ ಕಚೇರಿಗೆ ಕೊಂಡು ಹೋಗಬೇಕಾಗಿಲ್ಲ, ಎಲ್ಲವೂ ಆನ್ಲೈನ್ ಮೂಲಕವೇ ನಡೆಯುತ್ತದೆ. ಗ್ರಾಹಕರು ಹಣ ಪಾವತಿಸಿದ ಕೂಡಲೇ ಸ್ವಯಂ ಆಗಿ ನೋಂದಣಿ ಸಂಖ್ಯೆ ಜನರೇಟ್ ಆಗುತ್ತದೆ. ಒಂದು ವೇಳೆ ವಿಶಿಷ್ಟ ಸಂಖ್ಯೆಯೇ ಬೇಕಿದ್ದರೆ ಆರ್ಟಿಒಗೆ ತೆರಳಿ ಹೆಚ್ಚು ಮೊತ್ತ ಪಾವತಿಸಿ ಪಡೆಯಬೇಕು. ನೋಂದಣಿ ಸಂಖ್ಯೆಯನ್ನು ಬಳಿಕ ನಂಬರ್ ಪ್ಲೇಟ್ ಮಾಡುವವರಿಗೆ ಕಳುಹಿಸಲಾಗುತ್ತದೆ.
ಬದಲಾದ ನಿಯಮದಂತೆ ವಾಹನದ ನೋಂದಣಿ ಯಾದರೂ ನಂಬರ್ ಪ್ಲೇಟನ್ನು ಅಳವಡಿಸದೆ ಹೊಸ ವಾಹನವನ್ನು ಗ್ರಾಹಕರ ಕೈಗೆ ನೀಡುವಂತಿಲ್ಲ. ಗ್ರಾಹಕರು ಇದನ್ನು ಗಮನಿಸಿ ಸಹಕರಿಸಬೇಕು.
– ಭೀಮನಗೌಡ ಪಾಟೀಲ್,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ