ಕಾರು-ಬಸ್ ಢಿಕ್ಕಿ ಪ್ರಕರಣ: ಕಾರು ಚಾಲಕ ಸಾವು
Team Udayavani, Nov 3, 2022, 11:25 PM IST
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದುಹೋಗುವ ಅಲಂಗಾರ್ನಲ್ಲಿ ಬಸವನಕಜೆ ಬಳಿ ಶಾಲಾ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕಾರಿನ ಚಾಲಕ ಕಾರ್ಕಳ ನಿ ರಾಜೇಶ್ ಆಚಾರ್ಯ (39) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯ ರಾತ್ರಿ ವೇಳೆಗೆ ಮೃತಪಟ್ಟ ಘಟನೆ ನಡೆದಿದೆ.
ಆಲಂಗಾರಿನ ಸೆ„ಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ಬಸ್ಗೆ ಕಾರ್ಕಳದ ಕಡೆಯಿಂದ ಬರುತ್ತಿದ್ದ ಕಾರು ಗುದ್ದಿ ಎರಡೂ ವಾಹನಗಳು ಜಖಂಗೊಂಡಿದ್ದವು. ಶಾಲಾ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿಗೂ ಗಾಯಗಳಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ.
ಮೃತ ರಾಜೇಶ್ ಅವರು ಕೊಡ್ಯಡ್ಕ, ಪೊಳಲಿ, ಕಟೀಲು ಕ್ಷೇತ್ರಗಳಿಗೆ ರಥ ನಿರ್ಮಾಣ ಮಾಡಿಕೊಟ್ಟ ರಥಶಿಲ್ಪಿ ಎಕ್ಕಾರು ಅಪ್ಪು ಆಚಾರ್ಯ ಕಾರ್ಕಳ ಆವರ ಪುತ್ರ. ಮೊದಲು ಮರದ ಕೆಲಸ ಮಾಡಿಕೊಂಡಿದ್ದು ಬಳಿಕ ಮಂಗಳೂರಿನಲ್ಲಿ ಟೂರಿಸ್ಟ್ ಕಾರು ವ್ಯವಹಾರ ನಿರತರಾಗಿದ್ದರು. ಕಾರ್ಕಳದಲ್ಲಿರುವ ತಾಯಿಕಡೆಯ ಮನೆಗೆ ಹೋಗಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ರಾಜೇಶ್ ವಿವಾಹಿತ, ಪತ್ನಿ, ಹಾಗೂ 14ರ ಹರೆಯದ ಪುತ್ರಿ ಇದ್ದಾರೆ. ರಾಜೇಶ್ ಆಚಾರ್ಯ ಅವರು ಮಂಗಳೂರು ಅತ್ತಾವರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್
BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ
Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು
ಬಿಲ್ಡರ್ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್
QR code system: ರೈಲ್ವೆ ಟಿಕೆಟ್ ಖರೀದಿಗೆ ಕ್ಯೂಆರ್ಕೋಡ್ ವ್ಯವಸ್ಥೆ; ಉತ್ತಮ ಸ್ಪಂದನೆ