Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

ನಕಲಿ ಷೇರು ಮಾರುಕಟ್ಟೆ ವ್ಯವಹಾರ ಕಂಪೆನಿಗಳ ಹಾವಳಿ

Team Udayavani, Jul 22, 2024, 7:45 AM IST

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

ಮಂಗಳೂರು: “ಷೇರು ಮಾರುಕಟ್ಟೆ ವ್ಯವಹಾರ ಕಂಪೆನಿ’ ಎಂಬ ಹೆಸರನ್ನಿಟ್ಟುಕೊಂಡು ಆನ್‌ಲೈನ್‌ನಲ್ಲಿ ಹಣ ದೋಚುವ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ವಂಚಕರು ಫೇಸ್‌ಬುಕ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತುಗಳನ್ನು ಹಾಕಿ ನಕಲಿ ಸ್ಟಾಕ್‌ ಮಾರ್ಕೆಟ್‌ ಸುಳಿಗೆ ಸೆಳೆದುಕೊಳ್ಳುತ್ತಾರೆ. ಷೇರು ಮಾರುಕಟ್ಟೆ ಬಗ್ಗೆ ಅಲ್ಪಸ್ವಲ್ಪ ಮಾಹಿತಿ, ಕುತೂಹಲ, ಹೆಚ್ಚು ಲಾಭ ಗಳಿಸ ಬೇಕೆಂಬ ಆಸೆ ಯವರು ಅನಾಯಾಸವಾಗಿ ಇಂಥ ವಂಚಕರ ಬಲೆಗೆ ಬಿದ್ದು, ಭಾರೀ ಹಣವನ್ನು ಕಳೆದು ಕೊಳ್ಳುತ್ತಿದ್ದಾರೆ.

ಒಬ್ಬರಿಂದಲೇ 5 ಕೋ.ರೂ. ದೋಚಿದರು!
ವಿದೇಶದಲ್ಲಿ ಉದ್ಯೋಗ ದಲ್ಲಿದ್ದು, ಮಂಗಳೂರಿಗೆ ಮರಳಿರುವ ವ್ಯಕ್ತಿಯೋರ್ವರು ಫೇಸ್‌ಬುಕ್‌ನಲ್ಲಿ “ಫೆಡ ರೇಟೆಡ್‌ ಹಮ್ಸ್‌ì ಷೇರ್‌ ಟ್ರೇಡಿಂಗ್‌ ಕಂಪೆನಿ’ ಎಂಬ ಜಾಹೀರಾತು ನೋಡಿದ್ದರು. ಕುತೂಹಲದಿಂದ ಅದರಲ್ಲಿದ್ದ ಲಿಂಕ್‌ ಒತ್ತಿದ್ದರು. ಬಳಿಕ ಅವರನ್ನು “ಟ್ರೇಡಿಂಗ್‌ ಕಂಪೆನಿ’ಯವರು ವಾಟ್ಸಾಪ್‌ ಗ್ರೂಪೊಂದಕ್ಕೆ ಸೇರಿಸಲಾಯಿತು. ಕೆಲವೇ ಸಮಯದಲ್ಲಿ ಮತ್ತೊಂದು ವಾಟ್ಸಾಪ್‌ ಗ್ರೂಪ್‌ಗೆ ಸೇರಿಸಲ್ಪಟ್ಟರು. ಅಲ್ಲಿ ಗ್ರೂಪ್‌ ಅಡ್ಮಿನ್‌ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡತೊಡಗಿದ. ಷೇರು ಮಾರುಕಟ್ಟೆಗೆ ಸಂಬಂಧಿಸಿ ಹಲವಾರು ಮಂದಿ ವ್ಯವಹಾರ ನಡೆಸುತ್ತಿರುವ ರೀತಿಯಲ್ಲಿ ಆ ಗ್ರೂಪ್‌ನಲ್ಲಿ ಸಂದೇಶಗಳನ್ನು ಹಾಕಲಾಗುತ್ತಿತ್ತು. ತಾನು ಕೂಡ ಹೆಚ್ಚು ಲಾಭ ಗಳಿಸಬಹುದು ಎಂಬ ನಂಬಿಕೆ ಆ ವ್ಯಕ್ತಿಯಲ್ಲಿ ಮೂಡಿತು. ವಂಚಕರು ತಿಳಿಸಿದಂತೆ ಎ.15ರಂದು ಹಣ ಹೂಡಿಕೆ ಮಾಡಿದರು.

ಅನಂತರ ಗ್ರೂಪ್‌ನವರ ಸೂಚನೆಯಂತೆ ಹಂತ ಹಂತವಾಗಿ ಜೂ.7ರ ವರೆಗೆ ಒಟ್ಟು 5 ಕೋ.ರೂ.ಗಳನ್ನು ಕಳೆದುಕೊಂಡಿದ್ದಾರೆ !
ಲಾಭ ಗಳಿಸಿದಂತೆ ಬಿಂಬಿಸುತ್ತಾರೆ !

ಇನ್ನೊಂದು ಪ್ರಕರಣದಲ್ಲಿ ಇದೇ ರೀತಿ ಸ್ಟಾಕ್‌ ಮಾರ್ಕೆಟ್‌ ಹೂಡಿಕೆ ಎಂಬ ವಂಚನಾ ಕಂಪೆನಿಯ ಬಲೆಗೆ ಬಿದ್ದವರೊಬ್ಬರು 1.50 ಕೋ.ರೂ. ಕಳೆದುಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ”Jefferies wealth multiplication Plan’ ‘ ಎಂಬ ಜಾಹೀರಾತು ಗಮನಿಸಿದ್ದರು. ಅದರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿದ್ದರು. ಕೆಲವು ದಿನಗಳ ಬಳಿಕ ಅವರನ್ನು Jefferies wealth multiplication center–223’ ವಾಟ್ಸಪ್‌ ಗ್ರೂಪ್‌ಗೆ ಸೇರಿಸಲಾಗಿತ್ತು. ಆ ಗ್ರೂಪ್‌ನಲ್ಲಿದ್ದ ಸದಸ್ಯರು ಸ್ಟಾಕ್‌ನಲ್ಲಿ ಹೂಡಿಕೆ ಮಾಡಿ “ಲಾಭ’ ಗಳಿಸಿದ ಬಗ್ಗೆ ಸ್ಕ್ರೀನ್‌ ಶಾಟ್‌ಗಳನ್ನು ಹಾಕುತ್ತಿದ್ದರು. ಇದರಿಂದ ಪ್ರೇರಿತರಾದ ದೂರುದಾರ ವ್ಯಕ್ತಿ ಹಣ ಹೂಡಿಕೆ ಮಾಡುವ ಆಸಕ್ತಿ ತೋರಿಸಿದರು. ಬಳಿಕ ಅಡ್ಮಿನ್‌ನ ಸೂಚನೆಯಂತೆ “ವಿಐಪಿ ಟ್ರೇಡಿಂಗ್‌ ಅಕೌಂಟ್‌’ ತೆರೆದರು. ಮೇ 28ರಿಂದ ಜೂ.28ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್‌ಗಳ ಖಾತೆಯಿಂದ 1.50 ಕೋ.ರೂ.ಗಳನ್ನು ಗ್ರೂಪ್‌ನಲ್ಲಿದ್ದ ಅಪರಿಚಿತ(ವಂಚಕ) ನೀಡಿದ ಖಾತೆಗಳಿಗೆ ವರ್ಗಾಯಿಸಿದ್ದರು. ಕೆಲವು ದಿನಗಳ ಬಳಿಕ ಹೂಡಿಕೆ ಮಾಡಿದ ಹಣವನ್ನು ವಾಪಸ್‌ ಪಡೆಯಲು ಮುಂದಾದರು. ಆದರೆ ವಿಥ್‌ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಚೀಫ್ ಅಡ್ಮಿನ್‌ನನ್ನು ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ!

ಚಿನ್ನಾಭರಣ ಅಡವಿಟ್ಟು ಹಣ ಹೂಡಿಕೆ
ಇತ್ತೀಚೆಗೆ ಮಹಿಳೆಯೋರ್ವರು ಮನೆಯವರಿಗೆ ತಿಳಿಯದಂತೆಯೇ ಸ್ಟಾರ್ಕ್‌ ಮಾರ್ಕೆಟ್‌ ಹೆಸರಿನ ಕಂಪೆನಿಗೆ ಆನ್‌ಲೈನ್‌ ಮೂಲಕ ಸೇರ್ಪಡೆಯಾಗಿ 50 ಲ.ರೂ.ಗಳನ್ನು ಹೂಡಿಕೆ ಮಾಡಿದ್ದರು. ಮನೆಯಲ್ಲಿದ್ದ ಚಿನ್ನವನ್ನು ಕೂಡ ಅಡವಿರಿಸಿದ್ದರು. ಅನಂತರ ಮೋಸ ಹೋಗಿ ಪೊಲೀಸರಿಗೆ ದೂರು ನೀಡಿದ್ದರು.

ಮೊಬೈಲ್‌ ಶೋಧ ಗೀಳು
ವಂಚನೆಗೆ ಮೂಲ!
ಮೊಬೈಲ್‌ನಲ್ಲಿ ನಿರಂತರವಾಗಿ ಸಾಮಾಜಿಕ ಜಾಲತಾಣಗಳನ್ನು ನೋಡುವವರು ಒಂದಲ್ಲ ಒಂದು ಆಮಿಷದ ಸುಳಿಗೆ ಸಿಲುಕುತ್ತಾರೆ. ಇತ್ತೀಚೆಗೆ ಬೆಳಕಿಗೆ ಬಂದಿರುವ “ಷೇರು ಮಾರುಕಟ್ಟೆಯಲ್ಲಿ ಹೂಡಿಕೆ’ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರಿಗೆ ಸಾಮಾಜಿಕ ಜಾಲತಾಣಗಳನ್ನು ನಿರಂತರವಾಗಿ ವೀಕ್ಷಿಸುವ, ಹುಡುಕುವ ಅಭ್ಯಾಸವಿತ್ತು ಎಂಬುದು ಗೊತ್ತಾಗಿದೆ ಎನ್ನುತ್ತಾರೆ ಪೊಲೀಸರು.

6 ತಿಂಗಳಲ್ಲಿ
20 ಕೋ.ರೂ. ವಂಚನೆ
ಮಂಗಳೂರು ನಗರದಲ್ಲಿ ಆನ್‌ಲೈನ್‌ ಮೂಲಕ ಹೂಡಿಕೆ ಸಹಿತ ಕಳೆದ ಆರು ತಿಂಗಳಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 20 ಕೋ.ರೂ. ವಂಚಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ 15 ಮಂದಿಯನ್ನು ಬಂಧಿಸಲಾಗಿದ್ದು, 1.50 ಕೋ.ರೂ.ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿದೆ. ಒಂದು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಹೂಡಿಕೆಯ ಆಮಿಷ ಸಹಿತ ಯಾವುದೇ ರೀತಿಯ ಹಣಕಾಸಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲಿಂಕ್‌ಗಳನ್ನು ತೆರೆಯಬಾರದು. ಒಂದು ವೇಳೆ ತೆರೆದರೂ ಹಣ ವರ್ಗಾಯಿಸಬಾರದು. ಆನ್‌ಲೈನ್‌ ವಂಚನೆ ಗೊತ್ತಾದ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು. ಆನ್‌ಲೈನ್‌ ವಂಚನೆ ಬಗ್ಗೆ ಜನ ಜಾಗೃತರಾಗಬೇಕು.
– ಸತೀಶ್‌, ಇನ್‌ಸ್ಪೆಕ್ಟರ್‌,
ಸೈಬರ್‌ ಪೊಲೀಸ್‌ ಠಾಣೆ ಮಂಗಳೂರು

- ಸಂತೋಷ್‌ ಬೊಳ್ಳೆಟ್ಟು

Ad

ಟಾಪ್ ನ್ಯೂಸ್

7-dudhsagar

Dudhsagar Falls: ದೂಧ್‌ಸಾಗರಕ್ಕೊಂದು ಸಾಹಸಮಯ ರೈಲು ಯಾತ್ರೆ!

ಹೊಂದಾಣಿಕೆ ಸಮಸ್ಯೆ: 22 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ ಖ್ಯಾತ ಕಿರುತೆರೆ ನಟಿ

ಹೊಂದಾಣಿಕೆ ಸಮಸ್ಯೆ: 22 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ ಖ್ಯಾತ ಕಿರುತೆರೆ ನಟಿ

Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Charmadi: ನೀವ್ ಹೇಳೋದ್ ಹೇಳ್ತಾನೆ ಇರಿ, ನಾವ್ ಮಾಡೋದ್ ಮಾಡ್ತಾನೆ ಇರ್ತೀವಿ

Charmadi: ನೀವ್ ಹೇಳೋದ್ ಹೇಳ್ತಾನೆ ಇರಿ, ನಾವ್ ಮಾಡೋದ್ ಮಾಡ್ತಾನೆ ಇರ್ತೀವಿ…

6-thirthahalli-1

ಆರಗ ಅವರು ಅಧಿಕಾರಿಗಳೊಂದಿಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ: ಕಿಮ್ಮನೆ

ಪೊಲೀಸರ ಭರ್ಜರಿ ಬೇಟೆ: ಗಾಂಜಾ ಖರೀದಿಸುತ್ತಿದ್ದ ವಿದ್ಯಾರ್ಥಿ, ದಂಪತಿ ಸೇರಿ 14 ಮಂದಿಯ ಬಂಧನ

ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mangaluru: ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ; ಅಕ್ಟೋಬರ್‌ಗೆ ಗಡುವು

7

Surathkal: ನಿಂತಿದ್ದ ನರ್ಮ್ ಬಸ್‌ಗಳ ಮರು ಸಂಚಾರ

6

Mangaluru: ಗುರುಪುರ ಪೇಟೆಗೆ ಬೈಪಾಸ್‌ ಸರ್ಜರಿ! ಸ್ಥಳೀಯರ ಸಂಕಟಗಳು ಮಾತ್ರ ಹಲವು

Mangaluru: ಕೆಂಪುಕಲ್ಲು, ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮಳೆಯಲ್ಲೇ ಪ್ರತಿಭಟನೆ

Mangaluru: ಕೆಂಪುಕಲ್ಲು, ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮಳೆಯಲ್ಲೇ ಪ್ರತಿಭಟನೆ

17

Surathkal: ಎಂಆರ್‌ಪಿಎಲ್‌ನಲ್ಲಿ ದುರಂತ ಸಾವು ಪ್ರಕರಣ; ಮೃತನ ಪತ್ನಿಯಿಂದ ದೂರು ದಾಖಲು

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

7-dudhsagar

Dudhsagar Falls: ದೂಧ್‌ಸಾಗರಕ್ಕೊಂದು ಸಾಹಸಮಯ ರೈಲು ಯಾತ್ರೆ!

ಹೊಂದಾಣಿಕೆ ಸಮಸ್ಯೆ: 22 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ ಖ್ಯಾತ ಕಿರುತೆರೆ ನಟಿ

ಹೊಂದಾಣಿಕೆ ಸಮಸ್ಯೆ: 22 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ ಖ್ಯಾತ ಕಿರುತೆರೆ ನಟಿ

21

Kondlahalli: ಕೊನೆಗೂ ಪಶು ಚಿಕಿತ್ಸಾಲಯ ಮಂಜೂರು!

20

Molakalmuru: ಬಸ್‌ ನಿಲ್ದಾಣದಲ್ಲಿಲ್ಲ ಕುಡಿವ ನೀರಿನ ಸೌಲಭ್ಯ

19

Indi: ಅಭಿವೃದ್ಧಿ ಪಥದತ್ತ ಇಂಡಿ ದಾಪುಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.