ಮಂಗಳೂರು: ಸಿಆರ್‌ಝಡ್‌ ಮರಳುಗಾರಿಕೆ ಆದೇಶ ಗೊಂದಲಕಾರಿ


Team Udayavani, Jan 8, 2023, 8:05 AM IST

ಮಂಗಳೂರು: ಸಿಆರ್‌ಝಡ್‌ ಮರಳುಗಾರಿಕೆ ಆದೇಶ ಗೊಂದಲಕಾರಿ

ಮಂಗಳೂರು: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌)ದಲ್ಲಿ ಮರಳು ತೆಗೆಯುವುದಕ್ಕೆ ಜಿಲ್ಲಾಧಿಕಾರಿ ಇತ್ತೀಚೆಗೆ ಅವಕಾಶ ಮಾಡಿಕೊಟ್ಟಿದ್ದರೂ ಅದರಲ್ಲಿರುವ ಷರತ್ತುಗಳು ನ್ಯಾಯಾಂಗ ನಿಂದನೆಗೆ ಪೂರಕವಾಗಿವೆ. ಹಾಗಾಗಿ ಹಿಂದಿನಂತೆಯೇ ಮರಳು ತೆಗೆಯಲು ಹಾಗೂ ಸಾಗಾಟಕ್ಕೆ ಅನುವು ಮಾಡಿಕೊಡಬೇಕು ಎಂದು ತಾತ್ಕಾಲಿಕ ಪರವಾನಿಗೆದಾರರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಹಿಂದೆ ಚೆನ್ನೈ ಹಸುರು ನ್ಯಾಯಾಧಿಕರಣವು ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಿಸಿದ್ದ ಆದೇಶವನ್ನು ದ.ಕ. ಜಿಲ್ಲೆಯಲ್ಲೂ ಅನ್ವಯಿಸಿದ್ದರ ವಿರುದ್ಧವಾಗಿ ನಾವು ಹೈಕೋರ್ಟ್‌ ಮೆಟ್ಟಿಲೇರಿದ್ದೆವು. ಅದರಲ್ಲಿ ಹೈಕೋರ್ಟ್‌ ದ.ಕ. ಜಿಲ್ಲಾಡಳಿತದ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಉಲ್ಲೇಖೀಸಿ ಜಿಲ್ಲಾಡಳಿತ 14.11.2022ರಂದು ಏಳು ಸದಸ್ಯರ ಸಮಿತಿಯ ಸಭೆ ನಡೆಸಿ 15.12.2022ರಂದು ಮರುಸ್ಥಾಪಿತ ತಾತ್ಕಾಲಿಕ ಪರವಾನಿಗೆಯನ್ನು ವಿತರಿಸಿತ್ತು. ಆದರೆ ಇದು ರಾಜ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಪರವಾನಿಗೆ ದಾರರು ಅಭಿಪ್ರಾಯ ಪಟ್ಟಿದ್ದಾರೆ.

ಹೆಚ್ಚಿದ ಅಕ್ರಮ
ಮರಳು ತೆಗೆಯುವವರು ಅಧಿಕೃತ ವಾಗಿ 296ರಷ್ಟು ದೋಣಿಗಳನ್ನು ಬಳಸ ಬಹುದು. ಆದರೆ ಈಗ ಈ ಗೊಂದಲ ಮಯ ಸನ್ನಿವೇಶ ಬಳಸಿಕೊಂಡು 1 ಸಾವಿರಕ್ಕೂ ಅಧಿಕ ದೋಣಿಗಳು ಅಕ್ರಮ ಮರಳು ಗಾರಿಕೆಯಲ್ಲಿ ತೊಡಗಿವೆ. ಹಿಂದೆ ಸ್ಯಾಂಡ್‌ ಬಜಾರ್‌ನಲ್ಲಿ ನಾವು ನೋಂದಣಿ ಯಾಗಿರಬೇಕಿತ್ತು, ತೆಗೆದ ಮರಳನ್ನು ಸ್ಯಾಂಡ್‌ ಬಜಾರ್‌ ಮುಖೇನ ಬರುವ ಬುಕ್ಕಿಂಗ್‌ ಆಧರಿಸಿ ಗ್ರಾಹಕರಿಗೆ ತಲಪಿಸಲು ಅವಕಾಶವಿತ್ತು. ಈಗ ಮರಳು ತೆಗೆಯಲು ಮಾತ್ರವೇ ಅವಕಾಶ. 15.12.2022ರಂದು ನೀಡಿರುವ 7 ಮಂದಿ ಸದಸ್ಯರ ಸಮಿತಿಯ ಗೊಂದಲಮಯ ಆದೇಶದಿಂದ ಸಮಸ್ಯೆಯಾಗಿದೆ. ಇದರಿಂದ ಕಾನೂನು ಬಾಹಿರವಾಗಿ ಮರಳುಗಾರಿಕೆಯೂ ನಡೆಯುತ್ತಿದೆ ಎಂದು ತಾತ್ಕಾಲಿಕ ಪರವಾನಿಗೆದಾರ ಅನಿಲ್‌ ತಿಳಿಸಿದ್ದಾರೆ.

ಗೊಂದಲದ ಆದೇಶ
ಡಿಸೆಂಬರ್‌ 5ರಂದು ಹೊರಡಿಸಿರುವ ಆದೇಶವು ಗೊಂದಲಕಾರಿಯಾಗಿದೆ, ಅದರಲ್ಲಿ ಮರಳು ತೆಗೆಯುವುದಕ್ಕೆ ಮಾತ್ರ ಪರವಾನಿಗೆ ಒದಗಿಸಿದ್ದು ಮರಳು ಮಾರಾಟ ಮಾಡುವುದಕ್ಕೆ ಅನುಮತಿ ಇಲ್ಲ. ದಿಬ್ಬದಿಂದ ಮರಳನ್ನು ದಾಸ್ತಾನು ಕೇಂದ್ರಕ್ಕೆ ಸಾಗಿಸಬೇಕೆಂದು ತಿಳಿಸಲಾಗಿದೆ. ಆದರೆ ದಾಸ್ತಾನು ಕೇಂದ್ರದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಜಿಪಿಎಸ್‌ ಅಳವಡಿಸಿದ 6 ಚಕ್ರದ ವಾಹನಗಳಲ್ಲಿ ಮಾತ್ರ ಮರಳು ವಿತರಿಸಬೇಕು ಎಂದು ತಿಳಿಸಿರುತ್ತಾರೆ, ಆದರೆ ಯಾರಿಗೆ ವಿತರಿಸುವುದು ಹಾಗೂ ದಾಸ್ತಾನು ಕೇಂದ್ರಕ್ಕೆ ಯಾಕಾಗಿ ಸಾಗಿಸಬೇಕು ಎಂಬಿತ್ಯಾದಿ ಗೊಂದಲಗಳು ಉಂಟಾಗಿವೆ. ಮರಳುದಿಬ್ಬದಿಂದ ಮರಳನ್ನು ದಾಸ್ತಾನು ಕೇಂದ್ರಕ್ಕೆ ಅಥವಾ ಇತರರಿಗೆ ವಿತರಿಸಬೇಕಾದರೆ ವಾಹನಗಳಿಗೆ ರಹದಾರಿ ಪರವಾನಿಗೆ ಕಾನೂನಾತ್ಮಕವಾಗಿ ಬೇಕಾಗಿದೆ. ಆದರೆ ಅದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ.

ಮರುಸ್ಥಾಪಿತ ತಾತ್ಕಾಲಿಕ ಪರವಾನಿಗೆಯಲ್ಲಿರುವ ಷರತ್ತಿನಲ್ಲಿ ದಿಬ್ಬದಿಂದ ಮರಳನ್ನು ದಾಸ್ತಾನು ಕೇಂದ್ರಕ್ಕೆ ಸಾಗಾಣಿಕೆ ಮಾಡಲು ಇರುವ ಮಾರ್ಗದ ನಕ್ಷೆಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಕೇಳಲಾಗಿದೆ. ಆದರೆ ಎಲ್ಲಿಯೂ ದಾಸ್ತಾನು ಕೇಂದ್ರವನ್ನು ನಮೂದಿಸದೇ ಇರುವುದರಿಂದ ಯಾವ ರಸ್ತೆ ನೀಡಬೇಕೆನ್ನುವುದು ತಿಳಿಯದಾಗಿದೆ ಎಂದು ಪರವಾನಿಗೆದಾರರು ತಿಳಿಸಿದ್ದಾರೆ.

ಟಾಪ್ ನ್ಯೂಸ್

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

1-sadasd

Gyanvapi Case: ಮಸೀದಿ ಸಮಿತಿಯ ಸವಾಲು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

1-wqeqwe

Wrestlers ಮೌನ ಪ್ರತಿಜ್ಞೆ; ಮನೆಗಳಿಗೆ ಮರಳಿದ ಹೋರಾಟ ನಿರತರು

1-sadsa

Shocking ಮೃತ ಉರಗತಜ್ಞ ನರೇಶ್ ಮನೆಯಲ್ಲಿ ವಿಷಕಾರಿ ಹಾವುಗಳ ರಾಶಿ!

ಓದಲೆಂದು ರೂಮಿಗೆ ಹೋದವಳು ಪ್ರಿಯಕರನನ್ನೇ ಚಾಕುವಿನಿಂದ ಇರಿದು ಕೊಂದಳು…

ಓದಲೆಂದು ರೂಮಿಗೆ ಹೋದವಳು ಪ್ರಿಯಕರನನ್ನೇ ಚಾಕುವಿನಿಂದ ಇರಿದು ಕೊಂದಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Retired ACP ಸುಭಾಷ್ ಚಂದ್ರ ವಿಧಿವಶ ; ಗಣ್ಯರ ಸಂತಾಪ

ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ: ದಕ್ಷಿಣ ಕನ್ನಡದ 16 ಕಡೆಗಳಲ್ಲಿ NIA ದಾಳಿ

ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ: ದಕ್ಷಿಣ ಕನ್ನಡದ 16 ಕಡೆಗಳಲ್ಲಿ NIA ದಾಳಿ

Mangaluru: ರನ್‌ವೇ ರೀಕಾರ್ಪೆಂಟಿಂಗ್ ಕಾಮಗಾರಿ ಪೂರ್ಣ: ನಾಳೆಯಿಂದ ವಿಮಾನಯಾನ ಯಥಾಸ್ಥಿತಿಗೆ

Mangaluru: ರನ್‌ವೇ ರೀಕಾರ್ಪೆಂಟಿಂಗ್ ಕಾಮಗಾರಿ ಪೂರ್ಣ: ನಾಳೆಯಿಂದ ವಿಮಾನಯಾನ ಯಥಾಸ್ಥಿತಿಗೆ

ತುಳುವಿಗೆ ರಾಜ್ಯ ಭಾಷೆ ಸ್ಥಾನ; ಮತ್ತೆ ಮೂಡಿದ ನಿರೀಕ್ಷೆ

ತುಳುವಿಗೆ ರಾಜ್ಯ ಭಾಷೆ ಸ್ಥಾನ; ಮತ್ತೆ ಮೂಡಿದ ನಿರೀಕ್ಷೆ

ಶಾಲಾರಂಭ: ಚಿಣ್ಣರ ಸ್ವಾಗತಕ್ಕೆ ಶಾಲೆಗಳು ಸಿದ್ಧ

ಶಾಲಾರಂಭ: ಚಿಣ್ಣರ ಸ್ವಾಗತಕ್ಕೆ ಶಾಲೆಗಳು ಸಿದ್ಧ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

1-sasd

Hunsur: ಗೂಡ್ಸ್ ವಾಹನ ಢಿಕ್ಕಿಯಾಗಿ ಬೈಕ್‌ ಸವಾರ ಮೃತ್ಯು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

1-sadasd

Gyanvapi Case: ಮಸೀದಿ ಸಮಿತಿಯ ಸವಾಲು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್