ದೇರಳಕಟ್ಟೆ: ವೈನ್ ಶಾಪ್ ದೋಚಿದ ಕಳ್ಳ ವಶಕ್ಕೆ
Team Udayavani, Apr 13, 2020, 1:11 PM IST
ಉಳ್ಳಾಲ : ದೇರಳಕಟ್ಟೆ ನಿತ್ಯಾನಂದನಗರ ವೈನ್ಶಾಪ್ ದೋಚಿದ ಕಳ್ಳನನ್ನು ಕೊಣಾಜೆ ಪೊಲೀಸರು ನಿನ್ನೆ ಬಂಧಿಸಿದ್ದು, ಇನ್ನೋರ್ವ ಕಳ್ಳ ತಲೆಮರೆಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದೆ.
ನಾಟೆಕಲ್ ನಿವಾಸಿ ಫಯಾನ್ ಯಾನೆ ಪಯ್ಯ (25) ಬಂಧಿತ. ಇನ್ನೋರ್ವ ಫಾರೂಕ್ ಎಂಬಾತ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಆರೋಪಿಗಳು ಲಾಕ್ ಡೌನ್ ಸಮಯವನ್ನು ಉಪಯೋಗಿಸಿ ನಿತ್ಯಾನಂದನಗರದಲ್ಲಿರುವ ಎಂ.ಎಸ್.ಐ.ಎಲ್ ಅಂಗಡಿಯಿಂದ ಸುಮಾರು ರೂ. 25,000 ಬೆಲೆಯ ಮದ್ಯವನ್ನು ಕಳವುಗೈದಿದ್ದರು. ಕಳವುಗೈದ ಮಾಲನ್ನು ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಯಲ್ಲಿ ಕುಳಿತು ಹೊರರಾಜ್ಯದ ಕಾರ್ಮಿಕರಿಗೆ ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದ ಕೊಣಾಜೆ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ ಫಯಾನ್ ಕುರಿತು ಮಾಹಿತಿ ಲಭಿಸಿದೆ. ಕೊಣಾಜೆ ಪೊಲೀಸರು ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆತ್ಮಶಕ್ತಿ ಸೊಸೈಟಿಗೂ ಕನ್ನ ಹಾಕಿದ್ದರು !
ವೈನ್ ಶಾಪ್ ಕಳವುಗೈದ ಮರುದಿನ ನಾಟೆಕಲ್ ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಶಟರ್ ಮುರಿದು ಇದೇ ತಂಡ ಕಳವಿಗೆ ಯತ್ನಿಸಿತ್ತು. ಲಾಕರ್ ಮುರಿಯುವ ಹಂತದಲ್ಲಿದ್ದ ಸಂದರ್ಭ ಸೈರನ್ ಮೊಳಗಿದ ಹಿನ್ನೆಲೆಯಲ್ಲಿ ಕಳ್ಳರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದರು. ಈ ಪ್ರಕರಣ ಸೇರಿದಂತೆ ಬೈಕ್ ಕಳವು ಪ್ರಕರಣವೂ ಇಬ್ಬರ ಮೇಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ