ದ.ಕ. ಜಿಲ್ಲೆ: ಭತ್ತ ಖರೀದಿಗೆ ದರ ನಿಗದಿ
Team Udayavani, Jan 11, 2022, 5:40 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಎಂ.ಒ 4, ಸಹಿತ ಕಜೆ, ಜಯ, ಜ್ಯೋತಿ, ಪಂಚಮುಖೀ, ಸಹ್ಯಾದ್ರಿ ಹಾಗೂ ಉಮಾ ಎಂಬ ಸ್ಥಳೀಯ ತಳಿಗಳ ಭತ್ತವನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಲು ಸರಕಾರ ಅನುಮತಿ ನೀಡಿದೆ.
ಜಿಲ್ಲೆಯ ಎಪಿಎಂಸಿ ಆವರಣದಲ್ಲಿರುವ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಮೂಡುಬಿದಿರೆ ಹಾಗೂ ಮಂಗಳೂರು, ಶಕ್ತಿನಗರ ಗೋದಾಮುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ : ದೀಪಕ್ ಕೊಚ್ಚರ್ಗೆ ಸುಪ್ರೀಂ ರಿಲೀಫ್
ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿದ ರೈತರಿಂದ ಭತ್ತವನ್ನು (ಸಾಮಾನ್ಯ) ಕ್ವಿಂಟಾಲ್ಗೆ 1,940 ರೂ. ಹಾಗೂ ಭತ್ತ (ಗ್ರೇಡ್ -0) ಕ್ವಿಂಟಾಲ್ಗೆ 1,960 ರೂ. ಗಳಂತೆ ದರ ನಿಗದಿಪಡಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.