ಬೋರ್‌ವೆಲ್‌ ನೀರಿನಲ್ಲಿ ಎಂಡೋ ಅಂಶ


Team Udayavani, Nov 3, 2018, 11:19 AM IST

bore.jpg

ಪುತ್ತೂರು: ಮಿಂಚಿಪದವು ಗೇರು ಪ್ಲಾಂಟೇಷನ್‌ ಕೇರಳದ್ದಾದರೂ ಕರ್ನಾಟಕದ ಗಡಿಗೆ ತಾಗಿಯೇ ಇದೆ. ಇಲ್ಲಿನ ಬಾವಿಯಲ್ಲಿ ದಶಕದ ಹಿಂದೆ ಹೂತಿಡಲಾದ ಎಂಡೋಸಲ್ಫಾನ್‌ ಈಗ ಹಾಲಾಹಲವಾಗಿ ಅಂತರ್ಜಲದ ಜತೆ ಬೆರೆತಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.ನ ಕುಮಾರನಾಥ ಎಂಬವರು ವರ್ಷಗಳ ಹಿಂದೆ ಬೋರ್‌ವೆಲ್‌ ಕೊರೆಸಿದ್ದರು. ನೀರನ್ನು ಬಳಸುವ ಮೊದಲು ಪರೀಕ್ಷಿಸಲು ನಿರ್ಧರಿಸಿ ಬೆಂಗಳೂರಿನ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸ್ಯಾಂಪಲ್‌ ರವಾನಿಸಿದರು. ಇಲಾಖೆ ಕಳುಹಿಸಿದ ಪರೀಕ್ಷಾ ವರದಿ ಅವರ ಆತಂಕವನ್ನು ನಿಜ ಮಾಡಿತು. ಬೋರ್‌ವೆಲ್‌ ನೀರಿನಲ್ಲಿ ಆಲ್ಫಾ ಎಂಡೋಸಲ್ಫಾನ್‌ 0.025 ಮೈಕ್ರೊಗ್ರಾಮ್ಸ್‌/ಲೀ. ಹಾಗೂ ಬೇಟಾ ಎಂಡೋಸಲ್ಫಾನ್‌ 0.025 ಮೈಕ್ರೊಗ್ರಾಮ್ಸ್‌/ಲೀ. ನಷ್ಟು ಇದೆ. ಇವುಗಳನ್ನು ಮನುಷ್ಯ ಸ್ವೀಕರಿಸಬಹುದಾದ ಮಿತಿ 0.4 ಮೈಕ್ರೊಗ್ರಾಮ್ಸ್‌/ಲೀ. ಎಂದು ವರದಿ ಹೇಳಿತ್ತು.

ನಿಜವಾದ ಆತಂಕ
ಇಲ್ಲಿನ ಬಾವಿಯಲ್ಲಿ ಎಂಡೋ ಹೂತಿಟ್ಟದ್ದು ಬಹಿರಂಗಗೊಂಡಾಗಲೇ ಅದು ಅಂತರ್ಜಲಕ್ಕೆ ಸೇರುವ ಆತಂಕ ಮೂಡಿತ್ತು. ಈಗ ಬೋರ್‌ವೆಲ್‌ ನೀರಿನಲ್ಲಿ ಎಂಡೋ ಅಂಶ ಇದೆ ಎನ್ನುವುದನ್ನು ಮಂಡಳಿ ದೃಢಪಡಿಸಿದೆ. ಈ ಎಂಡೋ ವಿಷ ಎಲ್ಲಿಂದ ಸೇರಿದೆ ಎನ್ನುವುದರ ಬಗ್ಗೆ ಸಂಬಂಧಪಟ್ಟವರು ಎಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು. ಹಿಂದೊಮ್ಮೆ ಸಹಾಯಕ ಆಯುಕ್ತರಾಗಿದ್ದ ಡಾ| ರಾಜೇಂದ್ರ ಕೆ.ವಿ. ಅವರ ಗಮನ ಸೆಳೆದಾಗ, ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಿದ್ದರು. ಆದರೆ ವರದಿ ಕಡತದಲ್ಲೇ ಬಾಕಿ ಆಗಿದೆ.

ಕಾಸರಗೋಡು ಜಿಲ್ಲಾಧಿಕಾರಿಯವರನ್ನು ಸಂ± ‌ರ್ಕಿಸಿ, ಕೇರಳ ಸರಕಾರದ ಜತೆ ಮಾತುಕತೆ ನಡೆಸುವ ಕೆಲಸವೂ ನಡೆದಿಲ್ಲ. ಸರಕಾರ ಹಾಗೂ ಜಿಲ್ಲಾಡಳಿತದ ಮಟ್ಟದಲ್ಲಿ ಮಾತುಕತೆ ನಡೆಸಿ, ಹೂತಿಟ್ಟ ಎಂಡೋ ವಿಷವನ್ನು ಹೊರ ತೆಗೆಯುವ ಕೆಲಸವಾಗಬೇಕಿತ್ತು. ಎಂಡೋ ವಿಚಾರದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ತಳೆದಿರುವ ದಿವ್ಯ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಬಲಿಯಾಗುತ್ತಲೇ ಇದ್ದಾರೆ. ಈಗ ಅಂತರ್ಜಲ ಮಲಿನಗೊಂಡಿರುವುದು ದೃಢಪಟ್ಟಿದೆ.

ಆರು ಬಾವಿ
ದಿ ಪ್ಲಾಂಟೇಷನ್‌ ಕಾರ್ಪೊರೇಷನ್‌ ಆಫ್‌ ಕೇರಳದ ಗೇರು ತೋಟ 141.30 ಹೆಕ್ಟೇರ್‌ ಇದೆ. ಇದರಲ್ಲಿರುವ 6 ಬಾವಿಗಳಲ್ಲಿ ಎಂಡೋ ಹೂತಿಡಲಾಗಿದೆ ಎನ್ನಲಾಗು ತ್ತಿದೆ. ಒಂದು ಬಾವಿ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.ಗೆ ತಾಗಿದೆ. ಎಂಡೋ ಹೂತಿಟ್ಟದ್ದು ಬಹಿರಂಗಗೊಳ್ಳುತ್ತಿದ್ದಂತೆ ದೊಡ್ಡ ಸುದ್ದಿ ಯಾಗಿತ್ತು. ಹೂತಿಟ್ಟ ಎಂಡೋ ನಿವಾರಿಸುವ ಅಥವಾ ಪರ್ಯಾಯ ಕ್ರಮ ನಡೆದಿಲ್ಲ. ಬೋರ್‌ವೆಲ್‌ ನೀರಿಗೆ ಎಂಡೋ ಬೆರೆತಿದೆ ಎಂದು ತಿಳಿದ ಮೇಲಾದರೂ ಎಚ್ಚೆತ್ತುಕೊಳ್ಳುವ ಕೆಲಸ ಆಗಬೇಕಿತ್ತು. ಅದೂ ಆಗಿಲ್ಲ.

ಬಹಿರಂಗಗೊಂಡದ್ದು ಹೀಗೆ
ಕೇರಳದ ಗೇರು ನಿಗಮದ ತೋಟದ ಬಾವಿಯಲ್ಲಿ ಎಂಡೋಸಲ್ಫಾನ್‌ ಹೂತಿಡಲಾಗಿದೆ ಎಂದು ಬಹಿರಂಗಪಡಿಸಿದ್ದು ಸ್ವತಃ ಹೂತಿಟ್ಟಾತನೇ. 2013ರ ಅಕ್ಟೋಬರ್‌ನಲ್ಲಿ ನಿಗಮದ ನಿವೃತ್ತ ಕಾರ್ಮಿಕ ಅಚ್ಯುತ ಮಣಿಯಾಣಿ ಈ ವಿಷಯವನ್ನು ಹೊರಗೆಡವಿದರು. 2005ರ ಆಸುಪಾಸಿನಲ್ಲಿ ಎಂಡೋಸಲ್ಫಾನ್‌ ತುಂಬಿದ ಡಬ್ಬಿ, ಬಾಟಲಿಗಳನ್ನು ಈ ಬಾವಿಯೊಳಗೆ ನಿಗಮದ ಅಧಿಕಾರಿಗಳ ಸೂಚನೆಯಂತೆ ಸುರಿದಿದ್ದೇನೆ. ಇದಕ್ಕೆ ಮೊದಲು ಎಂಡೋ ಸಿಂಪರಣೆಗೆ ಬರುತ್ತಿದ್ದ ಹೆಲಿಕಾಪ್ಟರ್‌ಗಳಿಗೆ ತಾನೇ ಎಂಡೋ ತುಂಬಿಸುತ್ತಿದ್ದೆ ಎಂದಿದ್ದರು. ಅವರು ಬಹಿರಂಗಪಡಿಸಲು ಕಾರಣವಾದದ್ದು ಅವರಿಗೂ ಕಾಡಿದ್ದ ಎಂಡೋ ಬಾಧೆ.

ನಿಗದಿತ ಪ್ರಮಾಣದ ಒಳಗೆ ರಾಸಾಯನಿಕದ ಅಂಶ ಇದ್ದರೆ ಸಮಸ್ಯೆ ಇಲ್ಲ. ಆದರೂ ಈ ವಿಷಯದ ಬಗ್ಗೆ ಪರಿಶೀಲಿಸುತ್ತೇನೆ. ವರ್ಷಗಳ ಹಿಂದೆ ಸಹಾಯಕ ಆಯುಕ್ತರು ಕಳುಹಿಸಿದ ವರದಿಯನ್ನು ಗಣನೆಗೆ ತೆಗೆದು ಕೊಳ್ಳುತ್ತೇನೆ.
ಶಶಿಕಾಂತ ಸೆಂಥಿಲ್‌,  ಜಿಲ್ಲಾಧಿಕಾರಿ, ದ.ಕ.

 ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

udAgricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Agricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Sullia: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ 2ವರ್ಷ: ಈವರೆಗೂ 7ಮಂದಿಯ ಪತ್ತೆಯೇ ಆಗಿಲ್ಲ!

Sullia: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ 2ವರ್ಷ: ಈವರೆಗೂ 7ಮಂದಿಯ ಪತ್ತೆಯೇ ಆಗಿಲ್ಲ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.