ಸಾಮಾಜಿಕ ಜಾಗೃತಿಯಿಂದ ಶೋಷಣೆ ಅಸಮಾನತೆ ನಿವಾರಣೆ: ಪುರಂದರ ಹೆಗ್ಡೆ
Team Udayavani, Apr 10, 2017, 2:56 PM IST
ಬಂಟ್ವಾಳ: ಜನರಲ್ಲಿ ಸಾಮಾಜಿಕ ಜಾಗೃತಿ ಆದಾಗ ಶೋಷಣೆ, ಅಸಮಾನತೆ , ಅಸ್ಪ್ರಶ್ಯತೆ ನಿವಾರಣೆ ಆಗುತ್ತದೆ. ಇದು ಮಹಾವೀರ ಜಯಂತಿ ಆಚರಣೆಯ ಉದ್ದೇಶ. ಈ ಮೂಲಕ ಅಂತಹ ಪುನರುಜ್ಜೀವನದ ಕೆಲಸಗಳು ನಡೆದು ಶಾಂತಿ, ಸಹಬಾಳ್ವೆ ನೆಲೆಸಲಿ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.
ಅವರು ಎ. 9ರಂದು ಬಂಟ್ವಾಳ ತಾ| ಕಚೇರಿಯಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹಾವೀರರು ತ್ಯಾಗದ ಸಂಕೇತ, ಸಮಷ್ಠಿಯ ಪ್ರತೀಕ, ನಿರ್ಲಿಪ್ತತೆಯ ಮೂರ್ತಿಯಾಗಿ ನಮಗೆ ಸಾಮಾಜಿಕ ಬದುಕಿನಲ್ಲಿ ಯಾವ ರೀತಿಯಲ್ಲಿ ಇರಬೇಕು ಎಂಬ ಮಾರ್ಗದರ್ಶನ ನೀಡಿದವರು ಎಂದರು.
ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ವಿಷಯ ನಿರೂಪಕ ವಿಷು ಕುಮಾರ್, ಭರತ್ರಾಜ್ ಜೈನ್, ಜಯಕೀರ್ತಿ ಇಂದ್ರ, ವಿಜಯ ಕುಮಾರಿ ಇಂದ್ರ, ತಾಲೂಕು ಕಚೇರಿಯ ಮಹೇಂದ್ರ, ಗ್ರಾಮ ಕರಣಿಕರಾದ ಪ್ರವೀಣ್, ಅಶ್ವಿನಿ, ಸ್ವಾತಿ, ಸಿಬಂದಿಗಳಾದ ಸದಾಶಿವ ಕೈಕಂಬ, ಶೀತಲ್, ಮಾಧವ, ಗಿಲ್ಬರ್ಟ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.ಕಂದಾಯ ನಿರೀಕ್ಷಕ ನವೀನ್ ಸ್ವಾಗತಿಸಿ, ಉಪತಹಶೀಲ್ದಾರ್ ಪರಮೇಶ್ವರ ನಾಯಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ