ಖಾಸಗಿ ರಸ್ತೆ ಮಣ್ಣು ಹೆದ್ದಾರಿಗೆ ಬಂದರೆ FIR


Team Udayavani, May 31, 2018, 2:00 AM IST

mannu-30-5.jpg

ಪುತ್ತೂರು: ಮಾಣಿ- ಮೈಸೂರು ಹೆದ್ದಾರಿ ಮಂಗಳವಾರ ಒಂದು ಮಳೆಗೇ ನದಿಯಂತಾಗಿತ್ತು. ರಾತ್ರಿ ಹೊತ್ತು ಸಂಚರಿಸುವ ವಾಹನ ಸವಾರರಿಗೆ ಇದು ರಸ್ತೆಯೋ, ಚರಂಡಿಯೋ ಎಂಬ ಗೊಂದಲ ಉಂಟಾಗಿತ್ತು. ಖಾಸಗಿ ಜಾಗದ ಮಣ್ಣು ಹೆದ್ದಾರಿಗೆ ಬಂದು ಬಿದ್ದಿರುವುದೇ ಈ ಸಮಸ್ಯೆಗೆ ಮೂಲ ಕಾರಣ. ಇದಲ್ಲದೆ, ಚರಂಡಿ ಸಮಸ್ಯೆ, ಹೆದ್ದಾರಿ ತಗ್ಗಿನಲ್ಲಿರುವುದು ಇನ್ನೊಂದು ಕಾರಣ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕೋಪಯೋಗಿ ಇಲಾಖೆ ಹಾಗೂ KRDCL, ಪ್ರಕರಣ ದಾಖಲಿಸಲು ಮುಂದಾಗಿವೆ. ಮುಂದೆ ಇಂತಹ ಪ್ರಕರಣ ಗಮನಕ್ಕೆ ಬಂದರೆ, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ.

ದರ್ಬೆ, ಸಂಪ್ಯ, ಕಾವು ಪ್ರದೇಶಗಳಲ್ಲಿ ಹೆದ್ದಾರಿ ನದಿಯಂತಾಗಿತ್ತು. ಸಂಜೆ ಹೊತ್ತಿಗೆ ಮಳೆ ತೀವ್ರವಾಗಿ ಸುರಿದ ಕಾರಣ, ಮನೆ ದಾರಿ ಹಿಡಿದಿದ್ದ ನಾಗರಿಕರಿಗೆ ತೊಂದರೆಯಾಯಿತು. ಕೆಲವು ಕಡೆಗಳಲ್ಲಿ ನಾಗರಿಕರೇ ಸ್ವಯಂಸೇವಕರಾಗಿ ನಿಂತು, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ಬಂದು ಏನೂ ಮಾಡುವಂತಿರಲಿಲ್ಲ. ಬುಧವಾರ ಬೆಳಗ್ಗೆ ಚರಂಡಿಯನ್ನು ಸರಿಪಡಿಸುವ ಕಡೆ ಗಮನ ಹರಿಸಲಾಯಿತು.

ದುರಸ್ತಿ ಕೆಲಸ ಸ್ಥಗಿತ
ಮಂಗಳವಾರ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗಿದೆ. ವಿದ್ಯುತ್‌ ಸಮಸ್ಯೆ ಎಂದಿನಂತೆ ಕಾಡಿದೆ. ಸಂಪ್ಯ ಬಳಿ ಟ್ರಾನ್ಸ್‌ಫಾರ್ಮರ್‌ ರಿಪೇರಿಗೆ ಬಂದಿದ್ದ ಲೈನ್‌ ಮ್ಯಾನ್‌ ಗಳಿಬ್ಬರಿಗೆ ಹೆಜ್ಜೇನು ದಾಳಿ ಮಾಡಿ ಗಾಯಗೊಳಿಸಿತ್ತು. ಹೀಗಾಗಿ, ದುರಸ್ತಿ ಕೆಲಸ ಸ್ಥಗಿತಗೊಂಡು, ವಿದ್ಯುತ್‌ ಸಮಸ್ಯೆ ತಲೆದೋರಿತು.

ಕಾಲನಿಗಳಲ್ಲಿ ಅವ್ಯವಸ್ಥೆ
ಕಾಲನಿಗಳಲ್ಲಿ ನಿವೇಶನ ಹಂಚುವ ವೇಳೆ ಅಸಮರ್ಪಕ ಮಾನದಂಡ ಅನುಸರಿಸಿದ್ದು, ಈಗ ನಿವಾಸಿಗಳಿಗೆ ತಲೆನೋವಾಗಿದೆ. ಮನೆ ಹಿಂಭಾಗದ ಗುಡ್ಡ ಕುಸಿದಿದೆ. ಚರಂಡಿ ಇಲ್ಲದೆ ಮನೆಯೊಳಗೇ ನುಗ್ಗುವ ನೀರು. ಮನೆ ಮುಂಭಾಗದ ಬರೆ ಜರಿದು, ಮನೆಗೆ ಕಂಟಕ ಒದಗಿದೆ. ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಆಶ್ವಾಸನೆ ನೀಡಿಲ್ಲ. ಇನ್ನು ಯಾವುದೇ ರೂಪದಲ್ಲೂ ಈ ಕಾಮಗಾರಿಗಳನ್ನು ನಡೆಸಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಇಂತಹ ವಿಕೋಪಗಳಿಗೆ ಪರಿಹಾರವೂ ಇಲ್ಲ ಎಂದು ಗ್ರಾ. ಪಂ.ಸದಸ್ಯರು ತಿಳಿಸಿದ್ದಾರೆ. ಪುತ್ತೂರು ತೋಟಗಾರಿಕಾ ಇಲಾಖೆಗೆ ಹೋಗುವ ರಸ್ತೆಗೆ ಮರ ಬಿದ್ದಿದೆ. ಇದರಿಂದ ಸಂಚಾರ ಸಮಸ್ಯೆ ಸೃಷ್ಟಿಯಾಯಿತು. ತತ್‌ ಕ್ಷಣದಲ್ಲೇ ಮರ ತೆರವು ಮಾಡಲಾಯಿತು.

ಕೇಸು
ಇದುವರೆಗೆ ಹೆದ್ದಾರಿಗೆ ಬಿದ್ದ ಮಣ್ಣನ್ನು ಇಲಾಖೆ ವತಿಯಿಂದಲೇ ತೆರವು ಮಾಡಿದ್ದೇವೆ. ಇನ್ನು ಮುಂದೆ ಖಾಸಗಿ ಜಾಗದ ಮಣ್ಣು ಹೆದ್ದಾರಿಗೆ ಬಿದ್ದರೆ, ಆಯಾ ಜಾಗದ ಮಾಲೀಕರ ಮೇಲೆ FIR ದಾಖಲಿಸಲಾಗುವುದು. ಆ ಮಣ್ಣನ್ನು ಅವರೇ ತೆರವು ಮಾಡಬೇಕು.
– ಪ್ರಮೋದ್‌, ಲೋ. ಇಲಾಖೆ ಎಂಜಿನಿಯರ್‌

ಟಾಪ್ ನ್ಯೂಸ್

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

TDY-12

ಜೆಡಿಎಸ್‌ ಭದ್ರಕೋಟೆಗೆ ಮೂರು ಬಾಗಿಲು

ದಾಖಲೆಯಿಲ್ಲದೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 50 ಲಕ್ಷ ರೂ. ವಶ: ಮೂವರ ವಿರುದ್ಧ ಪ್ರಕರಣ

ದಾಖಲೆಯಿಲ್ಲದೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 50 ಲಕ್ಷ ರೂ. ವಶ: ಮೂವರ ವಿರುದ್ಧ ಪ್ರಕರಣ

tdy-9

ಬೊಂಬೆನಗರಿಯಲ್ಲಿ ಕೈ ಅಭ್ಯರ್ಥಿ ಕಗ್ಗಂಟು

TDY-8

ವಿಶ್ವ ರಂಗಭೂಮಿ ದಿನಾಚರಣೆ: ನಶಿಸುತ್ತಿರುವ ರಂಗಕಲೆಗೆ ಪ್ರೋತ್ಸಾಹ ಅಗತ್ಯ

ಪಾಕ್ ಗೆ ಸರಣಿ ಸೋಲಿನ ಅವಮಾನ: ಐತಿಹಾಸಿಕ ಸಾಧನೆ ಮಾಡಿದ ಅಫ್ಘಾನಿಸ್ಥಾನ

ಪಾಕ್ ಗೆ ಸರಣಿ ಸೋಲಿನ ಅವಮಾನ: ಐತಿಹಾಸಿಕ ಸಾಧನೆ ಮಾಡಿದ ಅಫ್ಘಾನಿಸ್ಥಾನ

ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ?

ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಯ: ಮಣ್ಣಿನಡಿ ಸಿಲುಕಿ ಕಾರ್ಮಿಕರ ಸಾವು ಪ್ರಕರಣ, ತಲಾ 50 ಸಾವಿರ ರೂ. ಪರಿಹಾರ ವಿತರಣೆ

ಸುಳ್ಯ: ಮಣ್ಣಿನಡಿ ಸಿಲುಕಿ ಕಾರ್ಮಿಕರ ಸಾವು ಪ್ರಕರಣ, ತಲಾ 50 ಸಾವಿರ ರೂ. ಪರಿಹಾರ ವಿತರಣೆ

ನಿಗಮದಿಂದಲೇ ಮೀನು ಖರೀದಿಗೆ ಯೋಜನೆ: ಸಚಿವ ಅಂಗಾರ

ನಿಗಮದಿಂದಲೇ ಮೀನು ಖರೀದಿಗೆ ಯೋಜನೆ: ಸಚಿವ ಅಂಗಾರ

ಪುತ್ತೂರು ಬಸ್‌ ನಿಲ್ದಾಣಕ್ಕೆ ಕೋಟಿ-ಚೆನ್ನಯ ನಾಮಕರಣ

ಪುತ್ತೂರು ಬಸ್‌ ನಿಲ್ದಾಣಕ್ಕೆ ಕೋಟಿ-ಚೆನ್ನಯ ನಾಮಕರಣ

ಬಾಳೂರು ಅರಣ್ಯಕ್ಕೆ ಹತ್ತಿದ ಬೆಂಕಿ ಶಮನ: ಕಾರ್ಯಾಚರಣೆ ಸಫ‌ಲ

ಬಾಳೂರು ಅರಣ್ಯಕ್ಕೆ ಹತ್ತಿದ ಬೆಂಕಿ ಶಮನ: ಕಾರ್ಯಾಚರಣೆ ಸಫ‌ಲ

snake ashok

ಲಾೖಲ ಸ್ನೇಕ ಅಶೋಕ್‌ಗೆ ನಾಗರ ಹಾವು ಕಡಿತ: ಪ್ರಾಣಾಪಾಯದಿಂದ ಪಾರಾದ ಆಶೋಕ್‌

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

TDY-12

ಜೆಡಿಎಸ್‌ ಭದ್ರಕೋಟೆಗೆ ಮೂರು ಬಾಗಿಲು

ದಾಖಲೆಯಿಲ್ಲದೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 50 ಲಕ್ಷ ರೂ. ವಶ: ಮೂವರ ವಿರುದ್ಧ ಪ್ರಕರಣ

ದಾಖಲೆಯಿಲ್ಲದೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 50 ಲಕ್ಷ ರೂ. ವಶ: ಮೂವರ ವಿರುದ್ಧ ಪ್ರಕರಣ

tdy-11

ದರ್ಶನ್‌ ಅವಿರೋಧ ಆಯೆ: ಅಭಿಯಾನ ಆರಂಭ

actor sharan sung for just pass pass movie

ಜಸ್ಟ್‌ ಪಾಸ್‌ ಚಿತ್ರಕ್ಕೆ ಶರಣ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.