ಮಂಗಳೂರು: ಸಾಲ ಪಡೆದ ಮಹಿಳೆಗೆ 2.45 ಲ.ರೂ. ವಂಚನೆ
Team Udayavani, Oct 13, 2022, 6:38 PM IST
ಮಂಗಳೂರು: ಸಾಲ ಪಡೆಯುವ ಸಂದರ್ಭದಲ್ಲಿ ನೀಡಿದ ಖಾಲಿ ಚೆಕ್ಗಳ ಮೂಲಕ ಹಣ ಪಡೆದು ಮಹಿಳೆಗೆ 2,45,500 ರೂ. ವಂಚಿಸಿರುವ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಲ್ಪಾ ಪೂಂಜಾ ಅವರು ಜೆಪ್ಪು ಶಾಂತಿನಗರದ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾಲ ಪಡೆಯುವ ಸಂದರ್ಭ ಅವರ ಖಾತೆ ಇರುವ ಐಡಿಬಿಐ ಬ್ಯಾಂಕ್ನ ಖಾಲಿ ಚೆಕ್ಗಳನ್ನು ನೀಡಿದ್ದರು. ಸೊಸೈಟಿಯ ವ್ಯವಸ್ಥಾಪಕ ಮತ್ತು ಇತರ ಮೂವರು ಸೇರಿಕೊಂಡು ಆ ಚೆಕ್ಗಳ ಮೂಲಕ ಹಣ ವಿದ್ಡ್ರಾ ಮಾಡಿದ್ದಾರೆ.
ಆರೋಪಿಗಳಾದ ಪ್ರಜ್ವಲ್ ಜೋಯೆಲ್ ಫೆರ್ನಾಂಡಿಸ್ ಹೆಸರಿನಲ್ಲಿ ಒಂದು ಚೆಕ್ ಮೂಲಕ 50,000 ರೂ., ರತನ್ ಕುಮಾರ್ ಕೆ. ಹೆಸರಿನಲ್ಲಿ ಒಂದು ಚೆಕ್ ಮೂಲಕ 99,000 ರೂ., ಅಶ್ರಫ್ ಅಬ್ದುಲ್ ಖಾದರ್ ಹೆಸರಿನಲ್ಲಿ ಒಂದು ಚೆಕ್ ಮೂಲಕ 96,500 ರೂ. ವಿತ್ ಡ್ರಾ ಮಾಡಿ ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?