ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಮುನ್ನುಡಿಯಾದ ಸಂಘ

ಗಂಜಿಮಠ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 62 ವರ್ಷ

Team Udayavani, Feb 14, 2020, 5:13 AM IST

0802BAJ2

ಮಂಗಳೂರು ತಾಲೂಕಿನ ಪ್ರಥಮ ಹಾಲು ಉತ್ಪಾದಕರ ಸಂಘವಾದ ಗಂಜಿಮಠ ಹಾಲು ಉತ್ಪಾದಕರ ಸಂಘವು ಆರಂಭ ಕಾಲದಿಂದಲೂ ಸ್ಥಳೀಯರ ಸೊÌàದ್ಯೋಗದ ಮೂಲಕ ಸ್ವಾವ ಲಂಬಿ ಬದುಕಿಗೆ ನಾಂದಿಯಾಗಿದೆ. ಸದಸ್ಯರ ಏಳಿಗೆಗೆ ಸಂಘವು ಶ್ರಮಪಡುತ್ತಿದೆ. ಸ್ಥಳೀಯವಾಗಿ ಹಾಲು ಉತ್ಪಾದಕರಿಗೆ ಒಳ್ಳೆಯ ದರ ಮತ್ತು ಮಾರುಕಟ್ಟೆಯನ್ನು ಈ ಸಂಘವೂ ನೀಡಿದೆ.

 ಕೈಕಂಬ: ಮಂಗಳೂರು ತಾಲೂಕಿನ ಪ್ರಥಮ ಹಾಲು ಉತ್ಪಾದಕರ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಂಜಿಮಠ ಹಾಲು ಉತ್ಪಾದಕರ ಸಹಕಾರ ಸಂಘವು ಆರಂಭಗೊಂಡು 62 ವರ್ಷಗಳು ಸಂದಿವೆ. 1958ರಲ್ಲಿ ಸ್ಥಾಪನೆಯಾದ ಈ ಸಂಘ ಗ್ರಾಮೀಣ ಜನರ ಬದುಕನ್ನು ಕಟ್ಟಿಕೊಂಡು ಸ್ವಾವಲಂಬನೆ, ಹಾಲಿಗೆ ಒಳ್ಳೆಯ ದರ, ಮಾರುಕಟ್ಟೆ ಉದ್ದೇಶದಿಂದ ಈ ಸಹಕಾರ ಸಂಘ ಆರಂಭಿಸಲಾಗಿತ್ತು.

1958ರ ಜ. 31ರಲ್ಲಿ ಮೊಗರು, ಬಡಗುಳಿಪಾಡಿ, ತೆಂಕುಳಿಪಾಡಿ, ಎಡ ಪದವು, ಪೆರಾರ ಗ್ರಾಮಗಳ ಹಾಲು ಉತ್ಪಾದಕರು ಒಟ್ಟು ಸೇರಿ ಈ ಸಹಕಾರ ಸಂಘವನ್ನು ಹುಟ್ಟು ಹಾಕಿದ್ದರು. ಪ್ರಥಮವಾಗಿ ಅಳಿಕೆ ಕ್ರಾಸ್‌ನ ಬಾಡಿಗೆ ಕಟ್ಟಡದಲ್ಲಿದ್ದ ಈ ಸಂಘ, ಅನಂತರ ಗಂಜಿಮಠ ದೇವಸ್ಥಾನದ ಎದುರಿನ ಕಟ್ಟಡದಲ್ಲಿ ಆರಂಭವಾಯಿತು. ಆಗ ಸುಮಾರು 100 ಮಂದಿ ಸದಸ್ಯರನ್ನೊಳಗೊಂಡಿತ್ತು. ದಿನಕ್ಕೆ ಬೆಳಗ್ಗೆ 300 ಮತ್ತು ಸಂಜೆ 200ಲೀ. ಒಟ್ಟು 500ಲೀ. ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಇದನ್ನು ಸದಸ್ಯರೇ ಹೊತ್ತು ಕೊಂಡು ಬರುತ್ತಿದ್ದರು. ಕೊಡಪಾನಗಳಲ್ಲಿ ತುಂಬಿಸಿ ಬಸ್‌ಗಳ ಟಾಪ್‌ನಲ್ಲಿ ಹಾಕಿ ಮಂಗಳೂರಿಗೆ ಕಳುಹಿಸಲಾಗುತ್ತಿತ್ತು. ಅಂದು ಹಾಲನ್ನು 9 ಕೊಂಡೆಗಳಲ್ಲಿ ಮಾಪನ ಮಾಡಲಾಗುತ್ತಿತ್ತು. 9 ಕೊಂಡೆಗೆ ಒಂದು ಕುತ್ತಿ ಎಂದು ಕರೆಯಲಾಗುತ್ತಿತ್ತು. ಮೊದಲಿಗೆ ಮಂಗಳೂರು ನಗರದ ಹೊಟೇಲ್‌ಗ‌ಳಿಗೆ ಹಾಗೂ ಪರಿಸರದ ಹೊಟೇಲ್‌ಗ‌ಳಿಗೆ ಹಾಲನ್ನು ಮಾರಲಾಗುತ್ತಿತ್ತು. ಆ ಸಮಯ ದಲ್ಲಿ ಖಾಸಗಿ ಮತ್ತು ಸೊಸೈಟಿಯ ನಡುವೆ ಸ್ಪರ್ಧೆ ಇತ್ತು.ಸಂಘದ ಆರಂಭದಲ್ಲಿ ಮಂಗಳೂರು ಡೈರಿಗೆ ಹಾಲನ್ನು ಹಾಕಲಾಗುತ್ತಿತ್ತು. 1988ರಲ್ಲಿ ಕೆಎಂಎಫ್‌ ಆರಂಭದ ಅನಂತರ ಪುತ್ತೂರು ಕೇಂದ್ರಕ್ಕೆ ಹಾಲನ್ನು ಕಳುಹಿಸಲಾಗುತ್ತಿದೆ. ಸಂಘದ ಪ್ರಾರಂಭದ ದಿನದಂದು 5 ಲೀ. ಹಾಲು ಸಂಗ್ರಹ ದೊಡ್ಡ ಸಾಧನೆ ಆಗಿತ್ತು. ದಿ| ರಾಮಕೃಷ್ಣ ರೈ ಸಂಘದ ಪ್ರಥಮ ಕಾರ್ಯದರ್ಶಿಯಾಗಿ ಸಂಘದ ಯಶಸ್ಸಿನ ಮುನ್ನಡೆಗೆ ಕಾರಣ ಆಗಿದ್ದರು.

850 ಲೀ. ಹಾಲು ಸಂಗ್ರಹ
ಪ್ರಸ್ತುತ 250 ಸದಸ್ಯರು ಹಾಲು ಹಾಕುತ್ತಿದ್ದು, 850 ಲೀ. ಹಾಲು ಸಂಗ್ರಹಣೆ ಯಾಗುತ್ತಿದೆ.

ತಾಲೂಕು ಉತ್ತಮ ಸಂಘ
1971ರಲ್ಲಿ ಉತ್ತಮ ಸಂಘ ಪ್ರಶಸ್ತಿ, 2009ರಲ್ಲಿ ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ತಾಲೂಕು ಮಟ್ಟದ ಪ್ರಥಮ ಉತ್ತಮ ಹಾಲು ಉತ್ಪಾದಕ ಸಂಘದ ಪ್ರಶಸ್ತಿ, 2014-15ರಲ್ಲಿ ಉತ್ತಮ ಕಾರ್ಯನಿರ್ವಹಣೆ ಸಂಘದ ಪ್ರಶಸ್ತಿ.

ಅಧ್ಯಕ್ಷರು
ಕೆ.ಎಸ್‌.ಪದ್ಮಾನಾಭ ಆಚಾರ್ಯ, ಲೋರೆನ್ಸ್‌ ಕ್ರಾಸ್ತಾ, ಆ್ಯಂಟೋನಿ ಪಿಂಟೋ, ಗ್ರೆಗೋರಿ ಫೆರ್ನಾಂಡಿಸ್‌, ಕೃಷ್ಣ ನಾಯ್ಕ, ಎಂ. ಸೇಸ ರೈ,ತಿಮ್ಮಪ್ಪ ರೈ, ಚಾರ್ಲಿ ಡಿ’ಸೋಜಾ, ಫೆಲಿಕ್ಸ್‌ ಫೆರ್ನಾಂಡಿಸ್‌, ನಾರ್ಬರ್ಟ್‌ ಕ್ರಾಸ್ತಾ, ಎ. ನಾರಾಯಣ ಪೂಜಾರಿ, ಗಂಗಾಧರ ಅಮೀನ್‌, ಜಯಾನಂದ ನಾಯ್ಕ, ರುಕ್ಮಯ ನಾಯ್ಕ, ಸ್ಟಾನಿ ಕ್ರಾಸ್ತಾ, ಸುರೇಶ್‌ ಶೆಟ್ಟಿ .

ಕಾರ್ಯದರ್ಶಿಗಳು
ಸೇಸ ರೈ, ನಾರಾಯಣ ಭಟ್‌, ಬೆರ್ನಾರ್ಡ್‌ ಸಿಕ್ವೇರ, ಗೋಪಾಲ ರಾವ್‌, ಸುಬ್ರಮಣ್ಯ ಆಚಾರ್ಯ, ಪ್ರಕಾಶ್‌ ಎನ್‌. ಆಚಾರ್ಯ.

ಹಾಲು ಉತ್ಪಾದಕರ ಸಹ‌ಕಾರ ಸಂಘ ಸ್ಥಾಪನೆಯಿಂದಾಗಿ ಗಂಜಿಮಠ ಪರಿಸರದ 5 ಗ್ರಾಮಗಳಲ್ಲಿ ಕ್ಷೀರ ಕಾಂತ್ರಿಗೆ ಕಾರಣವಾಗಿತ್ತು . ದಿನಕ್ಕೆ 1ಸಾವಿರ ಲೀಟರ್‌ ತನಕ ಹಾಲು ಸಂಗ್ರಹವಾಗಿತ್ತು. ಈಗ ಸದಸ್ಯರಿಗೆ ಬೋನಸ್‌,ಶೇ. 25 ಡಿವಿಡೆಂಡ್‌ ನೀಡಲಾಗಿದೆ.
– ಸುರೇಶ್‌ ಶೆಟ್ಟಿ, ಅಧ್ಯಕ್ಷರುಗಂಜಿಮಠ ಹಾಲು ಉತ್ಪಾದಕರ ಸಹಕಾರ ಸಂಘ.

500 ದನಗಳು
ಗಂಜಿಮಠ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 500 ದನಗಳ ಹಾಲು ಬರುತ್ತಿದೆ. ಜರ್ಸಿ, ಎಚ್‌ಎಫ್‌ ಹಾಗೂ ದೇಶಿ ತಳಿಯ ದನಗಳಿವೆ. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಅವರ ಒಡೂxರು ಫಾಮ್ಸ್‌ìನಿಂದ 250ಲೀ. ಹಾಲು ದಿನಕ್ಕೆ ಸಂಘಕ್ಕೆ ಬರುತ್ತಿದೆ.

ಸುಬ್ರಾಯ ನಾಯಕ್‌,ಎಕ್ಕಾರು

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.