ಮಂಗಳೂರು: ಪ್ರಧಾನಿ ಮೋದಿಯಿಂದ ಆಶ್ನಾ ರೈಗೆ ಚಿನ್ನದ ಪದಕ
Team Udayavani, Jan 30, 2023, 7:25 AM IST
ಮಂಗಳೂರು: ಹೊಸದಿಲ್ಲಿಯಲ್ಲಿ ಶನಿವಾರ ಜರಗಿದ ವಾರ್ಷಿಕ ಎನ್ಸಿಸಿ ರ್ಯಾಲಿಯಲ್ಲಿ ಭಾಗವಹಿಸಿದ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ಎನ್ಸಿಸಿ ನೌಕಾದಳದ ಕೆಡೆಟ್ ಆಶ್ನಾ ರೈ ಅವರು ಅ. ಭಾ. ಮಟ್ಟದ ಅತ್ಯುತ್ತಮ ಕೆಡೆಟ್ ಅವಾರ್ಡ್ (ಚಿನ್ನದ ಪದಕ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದರು.
ಆಶ್ನಾ ರೈ ಅವರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೇ ಅವರಿಗೆ ಎನ್ಸಿಸಿ ಸೇರಬೇಕೆಂಬ ಆಸಕ್ತಿ. ಕೆನರಾ ಸಿಬಿಎಸ್ಇ ಶಾಲೆಯಲ್ಲಿ ಎಂಟನೇ ತರಗತಿ ಕಲಿಯುತ್ತಿರುವಾಗ ಎನ್ಸಿಸಿಗೆ ಸೇರಿದ್ದರು. ಬಳಿಕ ಇದೇ ಕ್ಷೇತ್ರದಲ್ಲಿ ಮುಂದುವರಿದಿದ್ದರು. ಈ ಹಿಂದೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಎನ್ಸಿಸಿ ರ್ಯಾಲಿಗೆ ಆಯ್ಕೆಯಾಗಿದ್ದರು. ಈ ಸಾಧನೆಗೆ ಮಾಜಿ ಎನ್ಸಿಸಿ ಕೆಡೆಟ್ಗಳಾದ ಅನೀಶ್ ರಾಹುಲ್, ಅತಿಕ್ ಡಿ.ಬಿ., ರೂಪಿತ್ ಡಿ’ಸೋಜಾ ಮತ್ತು ಮನೀಶ್ ಅವರು ಸಹಕಾರ ಮತ್ತು ವಿಂಗ್ ಕಮಾಂಡರ್ ಚಂದನ್ ಗರ್ಗ್, ಆಲ್ವಿನ್ ಮಿಸ್ಕಿತ್ ಅವರ ಮಾರ್ಗದರ್ಶನ ಕಾರಣ. ಆಶ್ನಾ ರೈ ಅವರು ಮಂಗಳೂರಿನ ಕದ್ರಿ ಕಂಬಳದ ಉದ್ಯಮಿ ರಾಮಣ್ಣ ರೈ ಮತ್ತು ಶಿಕ್ಷಕಿ ಅಕ್ಷತಾ ರೈ ದಂಪತಿ ಪುತ್ರಿ.
ಇದನ್ನೂ ಓದಿ: ಕ್ಷತ್ರಿಯ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ: ಸಿಎಂ ಭರವಸೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೂಪೇಶ್ ಶೆಟ್ಟಿ ನಿರ್ದೇಶನದ ‘ಸರ್ಕಸ್’ ಚಿತ್ರದ ಹಾಡು ಬಿಡುಗಡೆ; ಜೂ. 23 ರಂದು ಸಿನಿಮಾ ತೆರೆಗೆ
ಬೆಳೆ ಪರಿಹಾರ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ರಾಜ್ಯ ರೈತ ಸಂಘದಿಂದ ಧರಣಿ
ಪ್ರಧಾನಿ ಮೋದಿ ಮತ್ತು ಬಿಜೆಪಿಯ ನಿರಂಕುಶಾಧಿಪತ್ಯ ಸಾಬೀತು: ಬಿ.ಕೆ. ಹರಿಪ್ರಸಾದ್
ಬಹ್ರೈನ್ನಿಂದ ಮಂಗಳೂರು ವಿಮಾನ ಬರಲು ಬರೋಬ್ಬರಿ 2 ದಿನ!
ರಜೆಯಲ್ಲಿ ಮೌಲ್ಯಮಾಪನ: ಸಂಬಳಕ್ಕೆ ಕತ್ತರಿ
MUST WATCH
ಹೊಸ ಸೇರ್ಪಡೆ
ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ: ಎಚ್.ವಿಶ್ವನಾಥ್
ಸೋಲಾರ್ ಪ್ಲಾಂಟ್ ಹೆಸರಲ್ಲಿ ವಂಚನೆ: ಸೆರೆ
ರೂಪೇಶ್ ಶೆಟ್ಟಿ ನಿರ್ದೇಶನದ ‘ಸರ್ಕಸ್’ ಚಿತ್ರದ ಹಾಡು ಬಿಡುಗಡೆ; ಜೂ. 23 ರಂದು ಸಿನಿಮಾ ತೆರೆಗೆ
ಕೆಟ್ಟ ಭವಿಷ್ಯ ಹೇಳಿದ್ದಕ್ಕೆ ಹಲ್ಲೆ: ಕೊಲೆ !
ಭಾರತದ ಅಭಿವೃದ್ಧಿಯಲ್ಲಿ ಸಾಮಾಜಿಕ- ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದು: ನರೇಂದ್ರ ಮೋದಿ