![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಅತಿಥಿ ಉಪನ್ಯಾಸಕರ ವೇತನ ಹೊಣೆ ಪ್ರಾಂಶುಪಾಲರದ್ದು: ಶಾಸಕಿ ಶಕುಂತಳಾ
Team Udayavani, Apr 13, 2017, 1:57 PM IST
![Shakuntala-Shetty-Puttur-c1.jpg](https://www.udayavani.com/wp-content/uploads/2017/04/13/Shakuntala-Shetty-Puttur-c1.jpg)
ಉಪ್ಪಿನಂಗಡಿ: ಅತಿಥಿ ಉಪನ್ಯಾಸಕರ ಸೇವೆ ಪಡೆದು ಬಳಿಕ ತಾಂತ್ರಿಕ ನೆಪವೊಡ್ಡಿ ವೇತನ ನೀಡದಿರುವುದು ಅಕ್ಷಮ್ಯ ನಡೆಯಾಗಿದೆ. ನೇಮಕಾತಿ ಸರಕಾರಿ ನಿಯಮಾವಳಿಯ ಉಲ್ಲಂಘನೆಯೊಂದಿಗೆ ನಡೆದಿದ್ದರೆ ಉಪನ್ಯಾಸಕರ ವೇತನ ಪಾವತಿಯ ಹೊಣೆ ಪ್ರಾಂಶುಪಾಲರದ್ದು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.
ಬುಧವಾರ ಸರಕಾರಿ ಪ್ರಥಮ ಧರ್ಜೆ ಕಾಲೇಜಿಗೆ ಡಿಢೀರ್ ಭೇಟಿ ನೀಡಿ, ಅತಿಥಿ ಉಪನ್ಯಾಸಕರಿಗೆ ವೇತನ ನೀಡದಿರುವ ದೂರಿನ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಕಾಲೇಜು ಇಲಾಖೆಯ ನಿಯಮಾವಳಿ ಯನ್ನು ಉಲ್ಲಂ ಸಿ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗಿರುವುದರಿಂದ ಹಾಗೂ ಸದ್ರಿ ನೇಮಕಾತಿಯ ವಿಚಾರ ಕಾಲೇಜು ಆಡಳಿತ ಮಂಡಳಿಗೆ ತಿಳಿಸದಿರುವುದರಿಂದ ಸದ್ರಿ ಉಪನ್ಯಾಸಕರಿಗೆ ಪ್ರಾಂಶುಪಾಲರ ವೇತನದಿಂದಲೇ ನೀಡಬೇಕೆಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕಿ ತಿಳಿಸಿದರು.
ಕಳೆದ ಬಾರಿ ಕಳವಾದ ಲ್ಯಾಪ್ಟಾಪ್ ಹಾಗೂ ಪ್ರಾಜೆಕ್ಟರ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾಲೇಜು ಪ್ರಾಂಶುಪಾಲೆ ಮೇರಿ, ಕಳವಿಗೀಡಾಗಿದೆ ಎನ್ನಲಾದ ನಾಲ್ಕು ಲ್ಯಾಪ್ಟಾಪ್ಗ್ಳು ಹಿಂತಿರುಗಿ ಬಂದು ಎಲ್ಲ 29 ಲ್ಯಾಪ್ಟಾಪ್ ಗಳು ಕಾಲೇಜಿನಲ್ಲಿವೆ. ಕಳವಿಗೀಡಾದ ನಾಲ್ಕು ಪ್ರಾಜೆಕ್ಟರ್ಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಲ್ಲ ನಾಲ್ಕು ಪ್ರಾಜೆಕ್ಟರ್ಗಳ ಮೊತ್ತವನ್ನು ಪ್ರಾಂಶುಪಾಲೆಯಾದ ತಾನೇ ಭರಿಸುತ್ತೇನೆ. ಎಂದು ತಿಳಿಸಿದರು. ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಶ್ರಫ್ ಬಸ್ತಿಕಾರ್, ಕೃಷ್ಣ ರಾವ್ ಅರ್ತಿಲ, ಮಹೇಂದ್ರ ವರ್ಮ, ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.