ರಜೆಯಲ್ಲಿ ಮೌಲ್ಯಮಾಪನ: ಸಂಬಳಕ್ಕೆ ಕತ್ತರಿ
"ಅತಿಥಿ'ಗಳನ್ನು ಗೊಂದಲಕ್ಕೆ ತಳ್ಳಿದ ಪದವಿ ಉತ್ತರ ಪತ್ರಿಕೆ ಮೌಲ್ಯಮಾಪನ!
Team Udayavani, Mar 25, 2023, 7:10 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ಅತಿಥಿ ಉಪನ್ಯಾಸಕರು “ಪರೀಕ್ಷಾ ಕಾರ್ಯ’ಕ್ಕೆ ಹಾಜರಾಗಲು ಒಂದು ಸೆಮಿಸ್ಟರ್ನಲ್ಲಿ ಐದು ದಿನಗಳಂತೆ ಎರಡು ಸೆಮಿಸ್ಟರ್ಗಳಲ್ಲಿ ಒಟ್ಟು 10 ದಿನಗಳಿಗೆ ಮಾತ್ರ ಅವಕಾಶ ಎಂದು ಕಾಲೇಜು ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿ ಸಿರುವ ಸುತ್ತೋಲೆ ಅವರನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.
ಮಂಗಳೂರು ವಿ.ವಿ.ಯ ಬಿಕಾಂ ಪದವಿ ಪರೀಕ್ಷೆ ಮೌಲ್ಯಮಾಪನ ಶುಕ್ರವಾರ, ಬಿಬಿಎಯದ್ದು ಗುರುವಾರ ಮುಗಿದಿದೆ. ಮೌಲ್ಯಮಾಪನಕ್ಕೆ ಹಾಜರಾಗುವಂತೆ ಪ್ರತೀ ಅತಿಥಿ ಉಪನ್ಯಾಸಕರಿಗೆ ಪ್ರಾಂಶುಪಾಲರ ಮೂಲಕ ತಿಳಿಸ ಲಾಗಿತ್ತು. ಕೆಲವರಷ್ಟೇ ಹಾಜರಾದ ಕಾರಣ ಸಕಾಲದಲ್ಲಿ ಮೌಲ್ಯಮಾಪನ ಸಾಧ್ಯವಿಲ್ಲ ಎಂದು ವಾಣಿಜ್ಯ ಪರೀಕ್ಷಾಮಂಡಳಿಯು ವಿ.ವಿ.ಗೆ ತಿಳಿಸಿದೆ. ಆದ್ದರಿಂದ “ಪರೀಕ್ಷಾ ಕಾರ್ಯ ಎಲ್ಲ ಮೌಲ್ಯ ಮಾಪಕರ ಆದ್ಯ ಕರ್ತವ್ಯ. ಗೈರು ಹಾಜ ರಾದಲ್ಲಿ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ವಿ.ವಿ. ಯಿಂದ ಕಾಲೇಜು ಗಳಿಗೆ ತಿಳಿವಳಿಕೆ ಪತ್ರ ನೀಡಲಾಗಿತ್ತು. ಒಟ್ಟಿನಲ್ಲಿ ಮಧ್ಯಾಂತರ ರಜಾ ಸಮಯದಲ್ಲಿ 15 ದಿನ ನಡೆದ ಮೌಲ್ಯ ಮಾಪನ ಅತಿಥಿ ಉಪನ್ಯಾಸಕರಿಗೆ ಬಿಸಿ ತುಪ್ಪವಾಗಿದೆ.
ಏನಿದು ಗೊಂದಲ?
2022-23ನೇ ಸಾಲಿನ ಅತಿಥಿ ಉಪ ನ್ಯಾಸಕರ ನೇಮಕಾತಿ ಆದೇಶ ಪತ್ರದಲ್ಲಿ ಪರೀಕ್ಷಾ ಕಾರ್ಯಕ್ಕೆ ಕೇವಲ 5 ದಿನ ಮಾತ್ರ ಅವಕಾಶ ನೀಡಿದ್ದು, ಹೆಚ್ಚು ದಿನ ಭಾಗ ವಹಿಸಿ ದ್ದಲ್ಲಿ ಹೆಚ್ಚುವರಿ ದಿನಗಳ ವೇತನ ಹಾಗೂ ಸೇವಾವಧಿ ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಈ ಮಧ್ಯೆ ಆದೇಶದಲ್ಲಿ ಇರುವ “ಪರೀಕ್ಷಾ ಕಾರ್ಯ’ ಎಂಬ ಉಲ್ಲೇಖ ಗೊಂದಲ ಸೃಷ್ಟಿಸಿದೆ. ಇದು ಪರೀಕ್ಷಾ ದಿನದ ಕರ್ತವ್ಯ ನಿರ್ವಹಣೆಯೇ ಅಥವಾ ಮೌಲ್ಯಮಾಪನವೇ ಎಂಬ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿಲ್ಲ.
ಸಂಬಳಕ್ಕೆ ಕತ್ತರಿ; ಬಾಕಿ ಗೌರವಧನವೂ ಇಲ್ಲ !
ಈ ಗೊಂದಲದ ನಡುವೆ “ಮೌಲ್ಯ ಮಾಪನ ತುರ್ತು ಕಾರ್ಯ’ ಎಂದು ಅತಿಥಿ ಉಪನ್ಯಾಸಕರು 5 ದಿನಗಳಿ ಗಿಂತಲೂ ಹೆಚ್ಚು ಕಾಲ ಮೌಲ್ಯಮಾಪನದಲ್ಲಿ ತೊಡಗಿಸಿ ಕೊಂಡಿದ್ದರು. ಆದರೆ ಅವರ ಸಂಬಳಕ್ಕೆ ಕತ್ತರಿ ಬೀಳುವ ಆತಂಕ ಎದುರಾಗಿದೆ.
5 ದಿನ ಮಾತ್ರ ಮೌಲ್ಯಮಾಪನಕ್ಕೆ ಭಾಗವಹಿಸುವ ಬಗ್ಗೆ ಸುತ್ತೋಲೆ ವಿ.ವಿ.ಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿಯೇ ತೀರ್ಮಾನ ವಾಗ ಬೇಕಿದೆ.
– ಪ್ರೊ| ರಾಜು ಕೃಷ್ಣ ಚಲನ್ನವರ್, ಕುಲಸಚಿವರು-ಪರೀಕ್ಷಾಂಗ ಮಂಗಳೂರು ವಿ.ವಿ.
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್