

Team Udayavani, Jun 7, 2024, 12:49 PM IST
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದ ಮಾತ್ರಕ್ಕೆ ರಾಜಿನಾಮೆ ನೀಡೋದಿಲ್ಲ. ರಾಜಿನಾಮೆ ಮಾರ್ಕೆಟ್ ನಲ್ಲಿ ಸಿಗುವ ವಸ್ತು ಅಲ್ಲ. ಪಕ್ಷದ ಜಿಲ್ಲಾ ಮುಖಂಡರು, ಚುನಾವಣೆಗೆ ಸ್ಪರ್ಧಿಸಿದವರು, ಜವಾಬ್ದಾರಿಯುತ ವ್ಯಕ್ತಿಗಳು ರಾಜಿನಾಮೆ ಕೇಳಿದರೆ ಪರಿಶೀಲನೆ ನಡೆಸಬಹುದು. ಆದರೆ, ವಾಟ್ಸ್ ಆಪ್ ಯುನಿವರ್ಸಿಟಿಯಲ್ಲಿ ಕೆಲವರು ರಾಜಿನಾಮೆ ಕೊಡಿ ಎಂದ ಕೂಡಲೇ ಆಗ ರಾಜಿನಾಮೆ ನೀಡಲಾಗುವುದಿಲ್ಲ, ನಾನು ವಾಟ್ಸಪ್ ವಿವಿ ಸ್ಟೂಡೆಂಟ್ ಅಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಕೂತವನನ್ನು ಪಕ್ಷ ಜಿಲ್ಲಾಧ್ಯಕ್ಷ ಮಾಡಿಲ್ಲ. ಜಿಲ್ಲೆಯ ಹಲವಾರು ಜವಾಬ್ದಾರಿಗಳನ್ನು ಈ ಹಿಂದೆ ನಾನು ನಿಭಾಯಿಸಿದ್ದೇನೆ. ಅದರ ಆಧಾರದಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ನನಗೆ ನೀಡಿದ್ದಾರೆ. 1989ರಲ್ಲಿ ಚುನಾವಣೆ ಸಂದರ್ಭ ಕೊನೆಯ ಕ್ಷಣದಲ್ಲಿ ಬಿ.ಫಾರಂ ತಪ್ಪಿದಾಗ ಪಕ್ಷ ಬಿಟ್ಟಿಲ್ಲ. ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡಿದ್ದೆ. ಗೆದ್ದರೆ ನನ್ನ ಗೆಲವು ಎಂದು ಹೇಳುತ್ತಾರೆ. ಸೋತರೆ ಬೇರೆಯವರ ಮೇಲೆ ಬೆರಳು ತೋರಿಸುತ್ತಾರೆ. ರಾಜಿನಾಮೆ ನೀಡಬೇಕು ಎಂದು ಪಕ್ಷ ಹೇಳಿದರೆ ಅಗ ರಾಜಿನಾಮೆ ನೀಡಿ ಪಕ್ಷ ಸದೃಢಗೊಳಿಸಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆಯನ್ನು ಪದ್ಮರಾಜ್ ಅವರು ಹೊರುತ್ತೇನೆ ಎಂದಿದ್ದಾರೆ. ಸೋಲಿಗೆ ಅವರೊಬ್ಬರೇ ಜವಾಬ್ದಾರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದ್ದೆವು. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಮ್ಮ ಅಭ್ಯರ್ಥಿಗೆ ಅಧಿಕ ಮತ ದೊರಕಿದೆ. ಆದರೂ ಸೋಲು-ಸೋಲೇ. ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸ್ಥಳದಲ್ಲೇ ಮೃತ್ಯು… ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
Ad
ಮಹಾನಗರ: ಲೂಪ್ ಲೋಪಕ್ಕೆ ಲಕ್ಷಾಂತರ ರೂ. ಪೋಲು!
ಮಂಗಳೂರೂ: ನೂಯಿ-ಪೊಳಲಿ ದ್ವಾರ ರಸ್ತೆಯೇ ಸವಾಲು; ಇಲ್ಲಿ ರಸ್ತೆ ರಚನೆ ಹೇಗೆ?
ಪುತ್ತೂರು-ಮಂಗಳೂರು ತಡೆರಹಿತ ಎಕ್ಸ್ಪ್ರೆಸ್ಗೆ ಚಾಲನೆ: 7 ಬಸ್; ದಿನಕ್ಕೆ 60 ಟ್ರಿಪ್
ತೊಕ್ಕೊಟ್ಟು ಜಂಕ್ಷನ್ನಲ್ಲಿ ಕೃತಕ ನೆರೆ: ಸಂಚಾರಕ್ಕೆ ತೊಂದರೆ
ಯುವಕರಲ್ಲಿ ಹಠಾತ್ ಹೃದಯಾಘಾತ ಏರಿಕೆ ;ಮುನ್ನೆಚ್ಚರಿಕೆ ಅಗತ್ಯ: ಡಾ| ಯೂಸುಫ್ ಕುಂಬ್ಳೆ
Udyavara: ಮೃತ ಮೀನುಗಾರ ಕುಟುಂಬಕ್ಕೆ ಪರಿಹಾರ ವಿತರಣೆ
ಕಾಸರಗೋಡು ಪೊಲೀಸರಿಂದ ವಿಶೇಷ ಕಾರ್ಯಾಚರಣೆ: ಹಲವು ಪ್ರಕರಣ ದಾಖಲು
Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ
ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ:ಇಬ್ಬರು ಉಪನ್ಯಾಸಕರು, ಗೆಳೆಯ ಸೇರಿ ಮೂವರು ಆರೋಪಿಗಳ ಬಂಧನ
ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!
You seem to have an Ad Blocker on.
To continue reading, please turn it off or whitelist Udayavani.