ಮಂಗಳೂರು/ಉಡುಪಿ: ಕರಾವಳಿಗೆ ತಂಪೆರೆದ ಹದವಾದ ಮಳೆ
Team Udayavani, Dec 12, 2022, 7:15 AM IST
ಮಂಗಳೂರು/ಉಡುಪಿ/ಕಾಸರಗೋಡು : “ಮ್ಯಾಂಡಸ್’ ಚಂಡಮಾರುತದ ಪ್ರಭಾವ ಕರಾವಳಿಯಲ್ಲೂ ಕಾಣಿಸಿದ್ದು, ಶನಿವಾರ ರಾತ್ರಿ ಹಾಗೂ ರವಿವಾರ ದಿನವಿಡೀ ಮಿಂಚು-ಗುಡುಗು, ಗಾಳಿಯ ಆರ್ಭಟವಿಲ್ಲದೆ ಹದವಾದ ಮಳೆ ಸುರಿಯಿತು.
ಮಂಗಳೂರು, ಉಡುಪಿ ನಗರ, ಮಣಿಪಾಲ, ಪರ್ಕಳ, ಮಲ್ಪೆ, ಹಿರಿಯಡಕ, ಕಾರ್ಕಳ ಸುತ್ತಮುತ್ತ ಬಿಸಿಲು-ಮೋಡದ ವಾತಾವರಣದ ನಡುವೆ ಬಿಟ್ಟು ಬಿಟ್ಟು ಸಾಧಾರಣ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ಸಂಜೆ ವೇಳೆಗೆ ಬಿರುಸಿನ ಮಳೆಯಾಗಿದೆ.
ಬೆಳ್ತಂಗಡಿ, ಕಡಬ, ಸುಳ್ಯ, ಬೆಳ್ಳಾರೆ, ಪಂಜ, ಅರಂತೋಡು, ಸುಬ್ರಹ್ಮಣ್ಯ, ಪುತ್ತೂರು, ಬಂಟ್ವಾಳ ತಾಲೂಕುಗಳಲ್ಲಿ ಮುಂಜಾನೆಯಿಂದ ಮೋಡ ಕವಿದ ವಾತಾವರಣದ ಜತೆಗೆ ಚಳಿಯ ವಾತಾವರಣವಿತ್ತು. ಸಂಜೆಯ ಬಳಿಕ ಮಳೆ ಸುರಿಯ ಲಾರಂಭಿಸಿದ್ದು, ರಾತ್ರಿ ವರೆಗೂ ನಿರಂತರ ಮಳೆಯಾಗಿದೆ.