ವಿಮಾನ ನಿಲ್ದಾಣ: ಹೈ-ಅಲರ್ಟ್ ಅಗತ್ಯ
Team Udayavani, Jan 22, 2020, 6:55 AM IST
ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಾಂಬ್ ಪತ್ತೆಯಾಗಿ ದೇಶವ್ಯಾಪಿ ಆತಂಕಕ್ಕೆ ಕಾರಣವಾಗಿತ್ತಾದರೂ ಮಂಗಳವಾರವೂ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಪರಿಸ್ಥಿತಿ ಇರಲಿಲ್ಲ!
ಬಾಂಬ್ ಪತ್ತೆ ಮಾಡುವ ಮೂಲಕ ಭಾರೀ ದುರಂತವೊಂದನ್ನು ಭದ್ರತಾ ದಳ ವಿಫಲಗೊಳಿಸಿತ್ತು. ಇದು ಭದ್ರತಾ ಪಡೆಗಳ ಯಶಸ್ಸಾದರೂ ವಿಮಾನ ನಿಲ್ದಾಣದವರೆಗೆ ಬಾಂಬ್ ಕೊಂಡೊಯ್ದದ್ದು ಮೇಲ್ನೋಟಕ್ಕೆ ಭದ್ರತಾ ವೈಫಲ್ಯವಾಗಿ ಕಾಣಿಸುತ್ತಿದೆ. ಘಟನೆಯ ಅನಂತರ ನಿಲ್ದಾಣ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳುವ ಅನಿವಾರ್ಯತೆ ಇತ್ತಾದರೂ ಮಂಗಳವಾರ ನಿರೀಕ್ಷೆಯಷ್ಟು ಬಿಗಿ ಭದ್ರತೆ ಕಾಣಸಿಗಲಿಲ್ಲ. ಟರ್ಮಿನಲ್ ಪ್ರವೇಶದ ಬಳಿಕ ಬಿಗಿ ಭದ್ರತೆ ಅಳವಡಿಸ ಲಾಗಿದ್ದರೂ ವಾಹನ ಪ್ರವೇಶದ ಮಾರ್ಗದಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಿರುವುದು ಕಾಣಿಸಲಿಲ್ಲ.
ತಪಾಸಣಾ ಕೌಂಟರ್ ಬಂದ್
ಈ ಹಿಂದೆ ನಿಲ್ದಾಣ ಪ್ರವೇಶಕ್ಕೂ ಮೊದಲು “ಎಂಟ್ರಿ ಫೀಸ್’ ಕೌಂಟರ್ ತೆರೆಯಲಾಗಿತ್ತು. ಇಲ್ಲಿಯೇ ಸಿಐಎಸ್ಎಫ್ ಸಿಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆದರೆ ಒಂದೂವರೆ ತಿಂಗಳಿನಿಂದ ಹೊರಭಾಗದ ಪಾರ್ಕಿಂಗ್ ಶುಲ್ಕ ನೀಡುವ ಮತ್ತು ತಪಾಸಣಾ ಕೌಂಟರ್ ಬಂದ್ ಆಗಿದೆ. ಬದಲಾಗಿ ವಾಹನಗಳು ನೇರವಾಗಿ ಪಾರ್ಕಿಂಗ್ ಏರಿಯಾಕ್ಕೆ ತೆರಳಲು ಅವಕಾಶವಿದೆ.
ಹೀಗಾಗಿಯೇ ಸೋಮವಾರ ಶಂಕಿತ ವ್ಯಕ್ತಿ ವಿಮಾನ ನಿಲ್ದಾಣದ ಟರ್ಮಿನಲ್ನ ಮುಂಭಾಗ ದವರೆಗೂ ತಪಾಸಣೆಗೆ ಒಳಗಾಗದೆ ಹೋಗುವುದಕ್ಕೆ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಂಬ್ ಪತ್ತೆಯಾದ ಬಳಿಕ ಈಗ ಸಿಐಎಸ್ಎಫ್ನ ಮೂವರು ಸಿಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಕೆಎಸ್ಆರ್ಪಿಯ ತುಕಡಿಯನ್ನು ನಿಯೋಜಿಸಲಾಗಿದೆ.
ಆಗಮನ ರಸ್ತೆಯಲ್ಲೇ ನಿರ್ಗಮನ!
ಏರ್ಪೋರ್ಟ್ಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ರಸ್ತೆಗಳಿವೆ. ಎರಡೂ ರಸ್ತೆಯ ಕೊನೆಯಲ್ಲಿ ವಿಮಾನ ನಿಲ್ದಾಣದ ಪಕ್ಕ ಕೌಂಟರ್ ಇರುವಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿತ್ತು. ಆದರೆ ಸದ್ಯ ಈ ಕೌಂಟರ್ಗಳು ಕಾರ್ಯ ನಿರ್ವಹಿಸದ್ದರಿಂದ ಈಗ ಆಗಮನ ರಸ್ತೆಯ ಮೂಲಕವೇ ನಿರ್ಗಮನದ ವಾಹನಗಳೂ ತೆರಳುತ್ತಿವೆ.
ಇದರಿಂದಾಗಿ ಇಲ್ಲಿ ಹಲವು ಬಾರಿ ಅಪಘಾತ ಘಟನೆಗಳೂ ಸಂಭವಿಸಿವೆ ಏಕ ಮಾರ್ಗದಲ್ಲಿ ಸಂಚಾರದ ಬಗ್ಗೆ ಮಾರ್ಗಸೂಚಿಯೂ ಇಲ್ಲ ಎನ್ನುತ್ತಾರೆ ಟ್ಯಾಕ್ಸಿ ಚಾಲಕರೊಬ್ಬರು.
ಸಿಸಿಟಿವಿ ಬಳಕೆಯಿಲ್ಲ!
ವಿಮಾನ ನಿಲ್ದಾಣದ ಮುಖ್ಯ ಗೇಟ್ ಭಾಗದಲ್ಲಿ ಸಿಸಿಟಿವಿಗಳನ್ನು ಈ ಹಿಂದೆ ಅಳವಡಿಸಲಾಗಿತ್ತು. ಹೀಗಾಗಿ ಪ್ರತೀ ವಾಹನದ ಚಲನವಲನ ಇಲ್ಲಿ ದಾಖಲಾಗುತ್ತಿತ್ತು. ಆದರೆ ಕೆಲವು ತಿಂಗಳಿನಿಂದ ಇಲ್ಲಿನ ಬಹುತೇಕ ಸಿಸಿ ಟಿವಿಗಳು ಕಾರ್ಯನಿರ್ವಹಿಸುತ್ತಿಲ್ಲ. ಎರಡು ಸಿಸಿಟಿವಿ ಅಳವಡಿಕೆ ಮಾಡಿದ್ದರೂ ವಯರ್ ಮಾತ್ರ ನೇತಾಡುತ್ತಿದ್ದು, ಸಂಪರ್ಕ ಇಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
MUST WATCH
ಹೊಸ ಸೇರ್ಪಡೆ
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ