ವರ್ಷ ಎರಡಾದರೂ ತೆರೆಯದ ಹೈವೇ ನೆಸ್ಟ್
ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ
Team Udayavani, Feb 12, 2020, 6:10 AM IST
ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಬಳಿ ಇರುವ ಹೈವೇ ನೆಸ್ಟ್ (ಮಿನಿ).
ಬಂಟ್ವಾಳ: ಹೆದ್ದಾರಿ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಹೈವೇ ನೆಸ್ಟ್ ಎಂಬ ಮಿನಿ ಕ್ಯಾಂಟೀನ್ ಸೌಲಭ್ಯ ಕಲ್ಪಿಸುತ್ತಿದೆ. ಆದರೆ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಹೈವೇ ನೆಸ್ಟ್ ಸ್ಥಾಪಿಸಿ ಎರಡು ವರ್ಷಗಳಾಗುತ್ತ ಬಂದರೂ ಇನ್ನೂ ಕಾರ್ಯಾರಂಭಿಸಿಲ್ಲ.
ಹೆದ್ದಾರಿ ಸಚಿವಾಲಯವು 2018ರ ಜನವರಿಯಲ್ಲಿ ಎಚ್ಎಚ್ಎಐ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಹೈವೇ ನೆಸ್ಟ್ ಪ್ರಾರಂಭಿಸುವ ಕುರಿತು ಪ್ರಕಟನೆ ಹೊರಡಿಸಿತ್ತು. ಟೋಲ್ ಪ್ಲಾಜಾದಿಂದ 200-250 ಮೀ. ಅಂತರದಲ್ಲಿ 10 ಮೀ.x20 ಮೀ. ಫ್ಲಾಟ್ಫಾರಂ ಮೂಲಕ ಸಣ್ಣ ಅಂಗಡಿ ತೆರೆದು ಕುಡಿಯುವ ನೀರು, ಟೀ/ಕಾಫಿ ಮತ್ತು ಫ್ಯಾಕ್ಡ್ ಫುಡ್ ನೀಡುವ ಕುರಿತು ತಿಳಿಸಿತ್ತು. ಈ ಸಂಬಂಧ 2018ರಲ್ಲೇ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದ ಪಕ್ಕದಲ್ಲಿ ಹೈವೇ ನೆಸ್ಟ್ಗೆ ಬೇಕಾದ ಎಲ್ಲ ವ್ಯವಸ್ಥೆಗಳಿರುವ ಅಂಗಡಿ ಅನುಷ್ಠಾನಗೊಳಿಸಲಾಗಿತ್ತು.
ಏನೇನು ಸಿಗುತ್ತದೆ?
ಹೈವೇ ನೆಸ್ಟ್ ಮಿನಿ ಕ್ಯಾಂಟೀನ್ನ ರೀತಿಯಲ್ಲಿ ಕಾರ್ಯಾಚರಿಸಲಿದೆ. ಇಲ್ಲಿ ಬಿಸ್ಕೆಟ್ ಸಹಿತ ಇತರ ಸ್ನಾಕ್ಸ್ಗಳು (ಪ್ಯಾಕೆಟ್ಗಳಲ್ಲಿ), ನೀರಿನ ಬಾಟಲ್ಗಳು, ಟೀ/ಕಾಫಿ ಸಿಗಲಿವೆ. ಹೆದ್ದಾರಿ ಪ್ರಯಾಣಿಕರ ಅನುಕೂಲಕ್ಕೆ ಶೌಚಾಲಯ ವ್ಯವಸ್ಥೆಯೂ ಈ ಯೋಜನೆಯ ಮೂಲಕ ಇರುತ್ತದೆ.
ಸುಸಜ್ಜಿತ ನೆಸ್ಟ್ ಪಾಳು ಬಿದ್ದಿದೆ !
ಬ್ರಹ್ಮರಕೂಟ್ಲು ಟೋಲ್ಪ್ಲಾಜಾದಲ್ಲಿ ಈ ಹೈವೇ ನೆಸ್ಟ್ (ಮಿನಿ) ಅನುಷ್ಠಾನಗೊಳ್ಳುವ ಸಂದರ್ಭ ಸುಸಜ್ಜಿತವಾಗಿ ಆಕರ್ಷಣೀಯವಾಗಿ ಕಾಣುತ್ತಿತ್ತು. ಆಗಲೇ ಅದು ಕಾರ್ಯಾ ರಂಭಗೊಂಡಿದ್ದರೆ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತಿತ್ತು. ಆದರೆ ಈಗ ಅಲ್ಲಿನ ಸ್ಥಿತಿ ಪಾಳು ಬಿದ್ದಂತೆ ಗೋಚರವಾಗುತ್ತಿದ್ದು ಸುತ್ತಲೂ ಪೊದೆ ಬೆಳೆದಿದೆ. ಕೌಂಟರ್, ಕುಳಿತುಕೊಳ್ಳುವ ವ್ಯವಸ್ಥೆ, ಸೋಲಾರ್ ದೀಪಗಳು ಉಪಯೋಗಕ್ಕೆ ಇಲ್ಲದಂತಾಗಿದ್ದು ನೆಸ್ಟ್ನ ಕೌಂಟರ್ಗೆ ತುಕ್ಕು ಹಿಡಿದಿದೆ. ಇನ್ನು ಅದು ಕಾರ್ಯಾರಂಭಗೊಳ್ಳಬೇಕಾದರೆ ಮತ್ತೆ ನವೀಕರಣ ನಡೆಯಬೇಕಿದೆ.
ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಬಳಿ ಹೈವೇ ನೆಸ್ಟ್ (ಮಿನಿ) ಅನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಆದರೆ ಅದರ ಕಾರ್ಯಾರಂಭಕ್ಕೆ ಟೆಂಡರ್ ಪ್ರಕ್ರಿಯೆ ತೆರೆಯಲಾ ಗಿದ್ದು, ಅದು ಅಂತಿಮಗೊಳ್ಳ ಬೇಕಿದೆ. ಅದರ ಬಳಿಕವೇ ಕಾರ್ಯಾಚರಣೆ ನಡೆಸಲಿದೆ.
– ಶಿಶುಮೋಹನ್, ಯೋಜನಾ ನಿರ್ದೇಶಕರು, ಎನ್ಎಚ್ಎಐ, ಮಂಗಳೂರು.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ