ಸುರತ್ಕಲ್ ಟೋಲ್ನಲ್ಲಿ “ಸುಂಕ’ದ ಗಲಾಟೆ!
Team Udayavani, Nov 22, 2022, 7:02 AM IST
ಸುರತ್ಕಲ್: ಕೇಂದ್ರ ಸರಕಾರವು ಸುರತ್ಕಲ್ನಲ್ಲಿ ಟೋಲ್ಗೇಟ್ ತೆರವು ಮಾಡಿರುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ನಾವೇಕೆ ಇನ್ನೂ ಸುಂಕ ಪಾವತಿಸಬೇಕು ಎಂದು ಪ್ರಶ್ನಿಸಿ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ಗಳ ಸಿಬಂದಿ ಟೋಲ್ಗೇಟ್ ಸಿಬಂದಿಯ ಬಳಿ ಚರ್ಚೆಗಿಳಿದ ಘಟನೆ ನಡೆದಿದೆ.
ಖಾಸಗಿ ಕಾಲೇಜಿಗೆ ಸೇರಿದ 6 ಬಸ್ಗಳಲ್ಲಿ ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದು, ಟೋಲ್ಗೇಟ್ನಲ್ಲಿ ಸಿಬಂದಿ ತಡೆದು ಸುಂಕ ಪಾವತಿಸುವಂತೆ ತಿಳಿಸಿ ದಾಗ, ಮಾತಿನ ಚಕಮಕಿ ನಡೆ ಯಿತು. ಸುಮಾರು ಅರ್ಧ ತಾಸು ಕಾಲ ಸಂಚಾರ ಅಸ್ತವ್ಯಸ್ತವಾಯಿತು.