ಕೈಗಾರಿಕೆಗಳು ಬುಡಮೇಲು; ಕಾರ್ಮಿಕರು ಕಂಗಾಲು!


Team Udayavani, Mar 28, 2020, 6:45 AM IST

ಕೈಗಾರಿಕೆಗಳು ಬುಡಮೇಲು; ಕಾರ್ಮಿಕರು ಕಂಗಾಲು!

ಸಾಂದರ್ಭಿಕ ಚಿತ್ರ.

ಮಂಗಳೂರು: ಜಗತ್ತಿನಾದ್ಯಂತ ಕೋವಿಡ್‌ 19 ಮಹಾಮಾರಿ ದಾಂಗುಡಿ ಇಡುತ್ತಿರುವಂತೆಯೇ ಕರಾವಳಿಯ ಆರ್ಥಿಕ ಶಕ್ತಿಯಾಗಿರುವ ವಿವಿಧ ಕೈಗಾರಿಕೆಗಳು ಇದೀಗ ಸಂಪೂರ್ಣ ಬಂದ್‌ ಆಗಿ ಇದರಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

ಮಂಗಳೂರಿನ ಬೈಕಂಪಾಡಿ ಸೇರಿದಂತೆ ದ.ಕ. ಹಾಗೂ ಉಡುಪಿ ಜಿಲ್ಲೆಯ ಕಿರು, ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳು ಬಂದ್‌ ಆಗಿವೆ. ಉದ್ಯೋಗಿಗಳ ಪೈಕಿ ಬಹುತೇಕ ಮಂದಿ ಕರಾವಳಿ ಭಾಗದವರೇ ಆಗಿದ್ದರೆ, ಉಳಿದವರು ಹೊರಜಿಲ್ಲೆ- ಹೊರರಾಜ್ಯದವರಾಗಿದ್ದಾರೆ. ಬಹುತೇಕ ಕಾರ್ಮಿಕರು ಮನೆಗೆ ಹೋಗಿದ್ದರೆ, ಸಾವಿರಾರು ಕಾರ್ಮಿಕರು ಕೈಗಾರಿಕೆಗಳ ಪರಿಸರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಅತ್ತ ಕೆಲಸವೂ ಇಲ್ಲ; ಇತ್ತ ಊರಿಗೂ ಹೋಗದಂತಹ ಪರಿಸ್ಥಿತಿಯಿದೆ. ಮೊದಲೇ ಆರ್ಥಿಕ ಹೊಡೆತದಿಂದ ನೂರಾರು ಸಮಸ್ಯೆ ಎದುರಿಸುತ್ತಿದ್ದ ಕರಾವಳಿಯ ಕೈಗಾರಿಕೆಗಳ ಮಾಲಕರಿಗೆ ಲಾಕ್‌ಡೌನ್‌ನಿಂದಾಗಿ ಸಾವಿರಾರು ಕೋ.ರೂ. ನಷ್ಟವಾಗುತ್ತಿದೆ.

ಕೋವಿಡ್‌ 19 ಆತಂಕ ಶೀಘ್ರದಲ್ಲಿ ದೂರವಾಗದೆ ಹೋದರೆ ಕೈಗಾರಿಕೆಗಳ ಮಾಲಕರು ಹಾಗೂ ಕಾರ್ಮಿಕರಿಗೆ ಉಪಯೋಗವಾಗಬಹುದು. ಆದರೆ ಇನ್ನೂ ಹಲವು ದಿನ ಬಂದ್‌ ಆದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ.

ಕೈಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ ಆಹಾರ, ಕೃಷಿ ಆಧಾರಿತ 2,507 ಕೈಗಾರಿಕೆಗಳಿದ್ದು 24,452 ಉದ್ಯೋಗಿಗಳು ಅವುಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಸದ್ಯ ಕೋವಿಡ್‌ 19 ಇದ್ದರೂ ಆವಶ್ಯಕ ವಸ್ತುಗಳ ಪೈಕಿ ಆಹಾರ ಉತ್ಪನ್ನಗಳಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ ಇದರಲ್ಲಿ ಕೆಲವು ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಆದರೆ ಅಲ್ಲಿಗೆ ಕಾರ್ಮಿಕರು ಬರಲು ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ಕಾರ್ಮಿಕರಿಗೆ ವಿಶೇಷ ವಿನಾಯಿತಿ ನೀಡುವಂತೆ ಕೈಗಾರಿಕೆಗಳ ಪ್ರಮುಖರು ಈಗಾಗಲೇ ಜಿಲ್ಲಾಡಳಿತವನ್ನು ಕೋರಿದ್ದಾರೆ.

ಉಳಿದಂತೆ, ದ.ಕ ಜಿಲ್ಲೆಯಲ್ಲಿ ರೆಡಿಮೆಡ್‌ ಗಾರ್ಮೆಂಟ್ಸ್‌, ಟೆಕ್ಸ್‌ಟೈಲ್ಸ್‌ನ 3,179 ಘಟಕಗಳು ಇದ್ದು 15,828 ಉದ್ಯೋಗಿಗಳು, ಮರ ಆಧಾರಿತ ಪೀಠೊಪಕರಣದ 2,818 ಘಟಕಗಳಲ್ಲಿ 13,074 ಕಾರ್ಮಿಕರು, ಕಾಗದ, ಅದರ ಉತ್ಪನ್ನಗಳ 874 ಘಟಕಗಳಲ್ಲಿ 2,974 ಉದ್ಯೋಗಿಗಳು, ಚರ್ಮ ಆಧಾರಿತ 464 ಘಟಕಗಳಲ್ಲಿ 893 ಉದ್ಯೋಗಿಗಳು, ಪ್ಲಾಸ್ಟಿಕ್‌, ಕೆಮಿಕಲ್‌ ಆಧಾರಿತ 936 ಘಟಕಗಳಲ್ಲಿ 4,772 ಉದ್ಯೋಗಿಗಳು, ಖನಿಜ ಆಧಾರಿತ 240 ಘಟಕಗಳಲ್ಲಿ 3,083 ಉದ್ಯೋಗಿಗಳು, ಲೋಹ ಆಧಾರಿತ (ಸ್ಟೀಲ್‌) 1,865 ಘಟಕಗಳಲ್ಲಿ 10,003 ಉದ್ಯೋಗಿಗಳು, ತಾಂತ್ರಿಕ ಕಾರ್ಯದ 555 ಘಟಕಗಳಲ್ಲಿ 4,805 ಉದ್ಯೋಗಿಗಳು, ಎಲೆಕ್ಟ್ರಿಕಲ್‌ ಮೆಷಿನರಿ ಹಾಗೂ ಟ್ರಾನ್ಸ್‌ಪೊàರ್ಟ್‌ನ 920 ಘಟಕಗಳ 1,573 ಉದ್ಯೋಗಿಗಳು, ರಿಪೇರಿ ಹಾಗೂ ಸರ್ವಿಸಿಂಗ್‌ನ 3,525 ಘಟಕಗಳಲ್ಲಿ 16,672 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರು. ಇವರೆಲ್ಲ ಈಗ ಕೆಲಸವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.

ಸದ್ಯ ಕೋವಿಡ್‌ 19 ವೈರಸನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನಕ್ಕೆ ನಾವೆಲ್ಲ ಬೆಂಬಲಿಸಬೇಕಿದೆ. ಅದು ನಿವಾರಣೆಯಾದರೆ ಎಲ್ಲವೂ ಸಹಜ ಸ್ಥಿತಿಗೆ ಬರಲಿವೆ. ಬಳಿಕ ಕೈಗಾರಿಕೆಗಳ ಪರವಾಗಿ ಸರಕಾರ ಸೂಕ್ತ ಬೆಂಬಲ ನೀಡುವ ಆಶಾಭಾವನೆಯಿದೆ.
– ಐಸಾಕ್‌ ವಾಸ್‌, ಅಧ್ಯಕ್ಷರು, ಕೆಸಿಸಿಐ

– ದಿನೇಶ್‌ ಇರಾ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.