“ಬಿಜೆಪಿಯಲ್ಲಿರುವವರ ಮೇಲೆ ಐಟಿ ದಾಳಿ ಯಾಕಿಲ್ಲ’: ನಟ ಪ್ರಕಾಶ್ ರಾಜ್
Team Udayavani, Mar 19, 2024, 1:14 AM IST
ಮಂಗಳೂರು: ಬೇರೆ ಪಕ್ಷದಲ್ಲಿದ್ದಾಗ ಐಟಿ, ಇಡಿ ದಾಳಿ ನಡೆದು ಬಿಜೆಪಿ ಸೇರಿದರೆ ಅಂತಹವರು ಭ್ರಷ್ಟಾಚಾರ ಮುಕ್ತರಾಗುವುದು ಹೇಗೆ? ಇತರ ಪಕ್ಷದ ನಾಯಕರ ಮೇಲೆ ನಡೆಯುವಂತೆ ಬಿಜೆಪಿ ನಾಯಕರ ಮೇಲೆ ಐಟಿ ದಾಳಿ ಯಾಕೆ ನಡೆ ಯುತ್ತಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣ ಬಾಂಡ್ ಕುರಿತಂತೆ ಪ್ರಧಾನಿ ಮೋದಿ ಮೌನವಾಗಿ ದ್ದಾರೆ. ಮನ್ ಕಿ ಬಾತ್ನಲ್ಲಿ ಈ ಬಗ್ಗೆಯೂ ಮಾತನಾಡಿಲ್ಲ ಎಂದರು.
ಡಿಎಂಕೆ ಸೇರಿದಂತೆ ಹಲವು ಪಕ್ಷ ದವರು ಇಂತಹ ಕಂಪೆನಿಗಳಿಂದ ಬಾಂಡ್ ಪಡೆದಿರುವುದಾಗಿ ಹೇಳಿ ಕೊಂಡಿ ದ್ದಾರೆ. ಬಿಜೆಪಿಯವರು ಯಾಕೆ ಯಾರಿಂದ ಪಡೆದಿದ್ದಾಗಿ ಹೇಳುತ್ತಿಲ್ಲ. ಬಿಜೆಪಿ ಪಡೆದಿರುವ ಬಾಂಡ್ ಹಣ ವೆಲ್ಲಾ ದಾಳಿಯ ಬಳಿಕ ಸಂಗ್ರಹಿಸಿ ದ್ದಾಗಿದೆ. ಕಂಪೆನಿಯೊಂದು 500 ಕೋಟಿ ರೂ. ಲಂಚ ಕೊಟ್ಟು, ಆತನಿಗೆ ಒಂದೂವರೆ ಸಾವಿರ ಕೋಟಿ ಅಥವಾ 2 ಸಾವಿರ ಕೋಟಿ ನೀವು ಗುತ್ತಿಗೆ ಕೊಡುತ್ತೀರಿ ಅಂದರೆ, ಆ ಗುತ್ತಿಗೆ ಹಣ ಜನರ ದುಡ್ಡಲ್ಲವೇ? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡುವು ದಿಲ್ಲ. ಒಂದು ಸಲ ನೋಡಿ ಆಗಿದೆ. ಜನರ ಧ್ವನಿ ಯಾಗಿ ರೋದು ಮುಖ್ಯ ಎನ್ನುವ ಕಾರಣಕ್ಕೆ ನಾನು ಜನರ ಬಳಿ ಇರುತ್ತೇನೆ. ಇಂಥ ರಾಜ ಕಾರಣ ಪ್ರಶ್ನಿಸುತ್ತೇನೆ. ನನ್ನ ಚಿಂತನೆ ಮಂಡಿಸುತ್ತೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ