ದ.ಕನ್ನಡದಲ್ಲಿ ವಾಕ್ಸಿನ್ ಕೊರತೆಯಿದೆ ಆದರೆ ಶಾಸಕರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ: ಐವನ್
Team Udayavani, Apr 21, 2021, 1:20 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಕೊರತೆಯಿದೆ. ಸ್ವತಃ ಜಿಲ್ಲಾಧಿಕಾರಿಯವರೇ ವಾಕ್ಸಿನ್ ಇಲ್ಲ ಎಂಬುದು ಒಪ್ಪಿಕೊಂಡಿದ್ದಾರೆ. ಕೇಳಿದರೆ ನಮ್ಮಲ್ಲಿ ಕಡಿಮೆ ಇದೆ ನಾವು ತರಿಸಿಕೊಳ್ಳುತ್ತೆವೆ ಎನ್ನುತ್ತಾರೆ. ಜಿಲ್ಲೆಯ ಮಂತ್ರಿಗಳು ಶಾಸಕರು ವಾಕ್ಸಿನ್ ತರಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಐವನ್ ಡಿ’ಸೋಜಾ ಟೀಕಿಸಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಗೆ ವಾಕ್ಸಿನ್ ಕೊರತೆ ವಿಚಾರ ಗೊತ್ತೇ ಇಲ್ಲ. ಶಾಸಕರು ಎಲ್ಲರೂ ಗುದ್ದಲಿ ಪೂಜೆಯಲ್ಲಿ ಬ್ಯೂಸಿಯಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಕೋವಿಡ್-19 ನಿಯಮ ಉಲ್ಲಂಘನೆ: ಗಂಗಾವತಿಯಲ್ಲಿ 297 ಕೇಸ್, 29,700 ರೂ. ದಂಡ ವಸೂಲಿ!
ಶಾಸಕರ ಕೆಲಸ ಗುದ್ದಲಿ ಪೂಜೆ ಮಾಡುವ ಕೆಲಸವಲ್ಲ, ಈ ಸಮಯದಲ್ಲಿ ಜನರ ಆರೋಗ್ಯ ಸಂಬಂಧಿಸಿ ಕಾಳಜಿ ವಹಿಸಬೇಕು ಎಂದು ಐವನ್ ಡಿ’ಸೋಜಾ ಹೇಳಿದರು.