ದ.ಕ.: ಕನ್ನಡದಲ್ಲಿ ರಾಜ್ಯೋತ್ಸವ ಪರೇಡ್‌ ಕಮಾಂಡ್‌


Team Udayavani, Nov 1, 2018, 9:35 AM IST

3110mlr14.jpg

ಮಂಗಳೂರು: ಸಾಮಾನ್ಯವಾಗಿ ಕವಾಯತು (ಪರೇಡ್‌) ವೇಳೆ ಆಂಗ್ಲ ಭಾಷೆಯಲ್ಲಿ ಆಜ್ಞೆ (ಕಮಾಂಡ್‌)ಗಳನ್ನು
ನೀಡಲಾಗುತ್ತದೆ. ಆದರೆ ಮಂಗಳೂರಿನಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಪರೇಡ್‌ ಕಮಾಂಡ್‌ ನೀಡುವ ಪ್ರಯತ್ನಕ್ಕೆ ಮಂಗಳೂರು ಹಾಗೂ ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ನ. 1ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಕನ್ನಡದಲ್ಲೇ ಕವಾಯತು ಆಜ್ಞೆಗಳು ಕೇಳಿ ಬರಲಿವೆ.

ರಾಜ್ಯದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಣೆ ಮಾಡಲಾಗಿತ್ತಾದರೂ ಎಲ್ಲ ಕಡೆಗೆ ಸಮರ್ಪಕವಾಗಿ ಜಾರಿ ಮಾಡುವಲ್ಲಿ ಸರಕಾರ ಹಿಂದುಳಿದಿತ್ತು. ಇದೀಗ ಪೊಲೀಸರ ಕಮಾಂಡ್‌ ಕೂಡ ಕನ್ನಡದಲ್ಲೇ ನೀಡುವ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸುವಲ್ಲಿ ಪೊಲೀಸರ ಸಹಕಾರವೂ ಇರಲಿದೆ. 

ರಾಜ್ಯದ ಎರಡನೇ ಜಿಲ್ಲೆ
ಕನ್ನಡದಲ್ಲಿ ಪೊಲೀಸ್‌ ಕವಾಯತು ಆಜ್ಞೆಗಳನ್ನು ನೀಡುವ ರಾಜ್ಯದ ಎರಡನೇ ಜಿಲ್ಲೆ ದ.ಕ.ವಾಗಲಿದೆ. ಮೊದಲ ಬಾರಿಗೆ ಬಳಸಿದ ಹೆಗ್ಗಳಿಕೆ ಬೆಳಗಾವಿಗೆ ಸಲ್ಲುತ್ತದೆ. ಜಿಲ್ಲೆಯ ಎಸ್‌ಪಿ ಡಾ| ರವಿಕಾಂತೇಗೌಡ ಅವರು ಬೆಳಗಾವಿಯಲ್ಲಿ ಮೊದಲ ಬಾರಿ ಪ್ರಯೋಗ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದರು. ಈಗ ದ.ಕ. ಜಿಲ್ಲೆಗೆ ವರ್ಗಾವಣೆಗೊಂಡ ಬಳಿಕ ಇಲ್ಲಿಯೂ ಈ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದಾರೆ.

ರಾಜ್ಯೋತ್ಸವ ಕವಾಯತು ಸಂದರ್ಭ ಒಟ್ಟು 26 ಆದೇಶ (ಕಮಾಂಡ್‌) ಹಾಗೂ ನಾಲ್ಕು ವರದಿ (ರಿಪೋರ್ಟ್‌) ಇರಲಿದೆ. ಹಿಂದೆ ಇದನ್ನು ಆಂಗ್ಲಭಾಷೆಯಲ್ಲಿಯೇ ನೀಡಲಾಗುತ್ತಿತ್ತು. ಈ ಬಾರಿ ಈ ಎಲ್ಲ ಕಮಾಂಡ್‌ಗಳು ಕನ್ನಡ ಭಾಷೆಯಲ್ಲಿ ಇರಲಿವೆ. ಉದಾಹರಣೆಗೆ “ಪರೇಡ್‌ ಸಾವ ಧಾನ್‌’ ಎನ್ನುವ  ಪದಕ್ಕೆ ಬದಲಾಗಿ “ಪರೇಡ್‌ ಸಾವಧಾನ’ ಎನ್ನುವ ಪದ ಬಳಸಲಾಗಿದೆ. “ಪರೇಡ್‌ ವಿಶ್ರಾಂ’ ಬದಲಿಗೆ “ಪರೇಡ್‌ ವಿಶ್ರಾಂತಿ’, “ಕ್ವಿಕ್‌ ಮಾರ್ಚ್‌’ಗೆ ಬದಲಾಗಿ “ಶೀಘ್ರ ನಡೆ’, “ಓಪನ್‌ ಆರ್ಡರ್‌ ಮಾರ್ಚ್‌’ ಬದಲಿಗೆ ವಿರಳ ಕ್ರಮದಲ್ಲಿ ನಿಲ್ಲಿ’, ಔಟ್‌ ಆರ್ಡರ್‌ ಮಾರ್ಚ್‌ನಲ್ಲಿ’ ಎಡದವರು ಎಡಕ್ಕೆ, ಬಲದವರು ಬಲಕ್ಕೆ, ಎಡಬಲಕ್ಕೆ ತಿರುಗಿ’ ಹೀಗೆ ಪದಗಳನ್ನು ಆಯ್ಕೆ ಮಾಡಲಾಗಿದೆ. “ಪರೇಡ್‌’ ಎನ್ನುವ ಪದ ಜನರಿಗೆ ಪರಿಚಿತವಾಗಿರುವುದರಿಂದ ಅದನ್ನು ಬದಲಿಸಿಲ್ಲ.

ಬೆಳಗಾವಿ ಬಳಿಕ ದ.ಕ.
ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್‌ ಕವಾಯತು ಆಜ್ಞೆಗಳನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿದ್ದೇವೆ. ಈ ಹಿಂದೆ ನಾನು ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಬಳಸಲಾಗಿತ್ತು. ಅದಕ್ಕೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೆಲ ಪದಗಳು ಜನ ಬಳಕೆಯಲ್ಲಿ ಇರುವುದರಿಂದ ಅದನ್ನು ಹಾಗೆಯೇ ಇಡಲಾಗಿದೆ . 
ಡಾ| ಬಿ.ಆರ್‌. ರವಿಕಾಂತೇ ಗೌಡ, ಎಸ್ಪಿ

ಪ್ರಜ್ಞಾ ಶೆಟ್ಟಿ

Ad

ಟಾಪ್ ನ್ಯೂಸ್

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

2

Mangaluru: ಗಾಂಜಾ ಪೂರೈಕೆ; ಬೀದರ್‌ ಮೂಲದ ವೈದ್ಯನ ಬಂಧನ

4

Mangaluru: ಕ್ಲಾಕ್‌ ಟವರ್‌ – ಸ್ಟೇಟ್‌ಬ್ಯಾಂಕ್‌ ನಡುವೆ ದ್ವಿಮುಖ ಸಂಚಾರ: ವರದಿ ಕೇಳಿದ ಡಿಸಿ

1-aa-mang

Mangaluru: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾಲಿಕೆ ನೌಕರರಿಂದ ಧರಣಿ

Mangaluru; ಎನ್‌ಡಿಪಿಎಸ್‌ ಕಾಯ್ದೆ: 2025ನೇ ಸಾಲಿನಲ್ಲಿ 40 ಪ್ರಕರಣ; 67 ಆರೋಪಿಗಳ ಬಂಧನ

Mangaluru; ಎನ್‌ಡಿಪಿಎಸ್‌ ಕಾಯ್ದೆ: 2025ನೇ ಸಾಲಿನಲ್ಲಿ 40 ಪ್ರಕರಣ; 67 ಆರೋಪಿಗಳ ಬಂಧನ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.