ನಕಲಿ ಮತದಾನ ಆರೋಪ: ಮೂಡುಬಿದಿರೆ ಠಾಣೆಗೆ ಮುತ್ತಿಗೆ

ವಿದೇಶದಲ್ಲಿರುವವರ ವೋಟರ್‌ ಐಡಿ ಬಳಕೆ; ಆರೋಪಿ ಪೊಲೀಸ್‌ ವಶಕ್ಕೆ

Team Udayavani, May 11, 2023, 6:50 AM IST

ನಕಲಿ ಮತದಾನ ಆರೋಪ: ಮೂಡುಬಿದಿರೆ ಠಾಣೆಗೆ ಮುತ್ತಿಗೆ

ಮೂಡುಬಿದಿರೆ: ವಿದೇಶದಲ್ಲಿರುವವರ ವೋಟರ್‌ ಐಡಿಯ ಪ್ರತಿಯನ್ನು ಬಳಸಿದ ಝಾರ್ಖಂಡ್‌ ಮೂಲದ ಕಾರ್ಮಿಕನೋರ್ವನನ್ನು ಮತಗಟ್ಟೆ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ತೋಡಾರು ಗ್ರಾಮದ 87ನೇ ಮತಗಟ್ಟೆಯಲ್ಲಿ ಝಾರ್ಖಂಡ್‌ ಮೂಲದ ಪ್ರಕಾಶ್‌ ರಜಕ್‌ ಎಂಬ ನೆಲಹಾಸು (ಟೈಲ್ಸ್‌) ಜೋಡಿಸುವ ಕಾರ್ಮಿಕನೊಬ್ಬ ತಾವು ಕೆಲಸ ಮಾಡುವ ಮನೆಯವರ ವೋಟರ್‌ ಐಡಿಯನ್ನು ಬಳಸಿ ಮತದಾನ ನಡೆಸಲೆತ್ನಿಸಿದ ಎನ್ನಲಾಗಿದೆ. ಈ ಮನೆಯವರು ವಿದೇಶದಲ್ಲಿದ್ದಾರೆ. ಈ ಸಂದರ್ಭ ಜೆಡಿಎಸ್‌ ಪಕ್ಷದವರ ಅನುಮಾನದಿಂದಾಗಿ ಸಿಕ್ಕಿಹಾಕಿಕೊಂಡ ಎನ್ನಲಾಗಿದೆ.

ಆಗ ಎಚ್ಚೆತ್ತ ಬಿಜೆಪಿಯ ನೂರಾರು ಕಾರ್ಯಕರ್ತರು ಮೂಡುಬಿದಿರೆ ಠಾಣೆ ಎದುರು ಜಮಾಯಿಸಿ, ನಕಲಿ ಮತದಾನದ ಹಿಂದಿರುವ ಶಕ್ತಿಗಳನ್ನು ಬಂಧಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಂಡಲಾಧ್ಯಕ್ಷ ಸುನಿಲ್‌ ಆಳ್ವ ಅವರು ಮಾಧ್ಯಮಗಳಿಗೆ ಮಾತನಾಡಿ, “ಇದೊಂದೇ ಪ್ರಕರಣವಲ್ಲ, ವಾಲ್ಪಾಡಿ ಮತ್ತಿತರ ಕಡೆಗಳಲ್ಲೂ ವ್ಯಾಪಕವಾಗಿ ನಕಲಿ ಮತದಾನ ನಡೆದಿರುವ ಬಗ್ಗೆ ಕಾರ್ಯಕರ್ತರಿಂದ ದೂರು ಬಂದಿದೆ. ಊರಲ್ಲಿ ಇಲ್ಲದವರ ಚುನಾವಣ ಗುರುತಿನ ಚೀಟಿ ಈ ಕಾರ್ಮಿಕರಿಗೆ ಸಿಕ್ಕಿರುವುದಾದರೂ ಹೇಗೆ? ಇದನ್ನೆಲ್ಲ ಹೇಳಿ, ಮಾಡಿಸಿದವರಾರು? ಎಲ್ಲ ವ್ಯಕ್ತಿ, ಶಕ್ತಿಗಳ ಬಗ್ಗೆ ಆಮೂಲಾಗ್ರ ತನಿಖೆಯಾಗಬೇಕು ಎಂದು ಬಿಜೆಪಿ ವತಿಯಿಂದ ಪ್ರತ್ಯೇಕ ದೂರು ನೀಡಲಾಗುವುದು ಎಂದರು.

ಈ ವೋಟರ್‌ ಐಡಿಗಳನ್ನು ಕೊಂಚ ಮಸುಕು ಮಾಡಿಸಿ ಅದರಲ್ಲಿರುವ ಚಿತ್ರವನ್ನು ಹೋಲುವ ವ್ಯಕ್ತಿಗಳಿಂದ ಕ್ಷೇತ್ರಾದ್ಯಂತ ವ್ಯಾಪಕವಾಗಿ ನಕಲಿ ಮತದಾನ ಮಾಡಿಸಲಾಗಿದೆ. ಈ ಕುರಿತು ಪೂರ್ಣ ಮಾಹಿತಿ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ ಎಂದು ಕಾರ್ಯಕರ್ತರು ಆಗ್ರಹಿಸಿದರು. ಪುರಸಭೆ ಸದಸ್ಯ ರಾಜೇಶ್‌ ನಾೖಕ್‌, ಸಮಿತ್‌ರಾಜ್‌ ದರೆಗುಡ್ಡೆ ಸಹಿತ ಕಾರ್ಯಕರ್ತರಿದ್ದರು.
ಎಸ್‌ಐ ಸಿದ್ದಪ್ಪ ಅವರು “ಚುನಾವಣ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ತನಿಖೆ ಮಾಡಲಾಗುವುದು’ ಎಂದು ಭರವಸೆ ಇತ್ತ ಬಳಿಕ ಪ್ರತಿಭಟನಕಾರರು ವಾಪಸಾದರು.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.