ಕಿಂಡಿ ಅಣೆಕಟ್ಟು ಬಳಕೆ ನೀರಿಗೂ ಕಟ್ಟಬೇಕು ತೆರಿಗೆ


Team Udayavani, Feb 3, 2020, 5:47 AM IST

KINDI-ANEKATTU

ಸುಳ್ಯ: ಕೃಷಿಗೆ ಕಿಂಡಿ ಅಣೆಕಟ್ಟಿನಿಂದ ನೀರು ಬಳಸುತ್ತಿದ್ದೀರಾ? ಹಾಗಾದರೆ ಅದಕ್ಕೆ ತೆರಿಗೆ ಕಟ್ಟಬೇಕು!ಸಣ್ಣ ನೀರಾವರಿ ಇಲಾಖೆಯು ಕಂದಾಯ ಇಲಾಖೆಗೆ ಕಳುಹಿಸಿರುವ ಈ ಬೇಡಿಕೆ ಪಟ್ಟಿ ಕಟ್ಟುನಿಟ್ಟಾಗಿ ಜಾರಿಯಾದರೆ ಕೃಷಿಕರಿಗೆ ಬೇಸಗೆ ಬಿಸಿ ಇನ್ನಷ್ಟು ಹೆಚ್ಚಾಗಲಿದೆ. ಕರ ಭಾರದಿಂದಲೂ ಬಳಲುವ ಆತಂಕ ಎದುರಾಗಿದೆ.

ವಿವರ ಸಲ್ಲಿಸಲು ಸೂಚನೆ
ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿರುವ ಕಿಂಡಿ ಅಣೆಕಟ್ಟುಗಳಿಂದ ನೇರ ಮತ್ತು ಪರೋಕ್ಷವಾಗಿ ನೀರಿನ ಪ್ರಯೋಜನ ಪಡೆಯುತ್ತಿರುವ ಫಲಾನುಭವಿಗಳಿಂದ ಕಂದಾಯ ವಸೂಲಿ ಮಾಡಲು ಸರಕಾರದ ನಿರ್ದೇಶನವಿದೆ. ಅಂಥವರ ಸರ್ವೆ ನಂಬರ್‌, ವಿಸ್ತೀರ್ಣ, ಬೆಳೆಯುತ್ತಿರುವ ಬೆಳೆ ವಿವರ ಒದಗಿಸುವಂತೆ ಸಣ್ಣ ನೀರಾವರಿ ಇಲಾಖೆಯು ಕಂದಾಯ ಇಲಾಖೆಗೆ ತಿಳಿಸಿದೆ. ಸೂಕ್ತ ಮಾಹಿತಿ ಆಧಾರದಲ್ಲಿ ನೀರಿಗೆ ಕರ ವಿಧಿಸಲು ಸ್ಪಂದಿಸುವಂತೆ ಪತ್ರದಲ್ಲಿ ಉಲ್ಲೇಖೀಸಲಾಗಿದೆ.

ತಿಂಗಳ ಹಿಂದೆ ನೋಟಿಸ್‌
ಫಲಾನುಭವಿಗಳ ಪಟ್ಟಿ ಕಳುಹಿಸುವಂತೆ 2019ರ ಡಿ.30ರಂದು ಸುತ್ತೋಲೆ ಕಳಿಸಲಾಗಿದ್ದು, ಜನವರಿ ಮೊದಲ ವಾರದಲ್ಲಿ ತಾಲೂಕು ಕಚೇರಿಗೆ ತಲುಪಿದೆ. ನೀರು ಕರ ವಸೂಲಾತಿ ವಿವರಗಳನ್ನು ಸರಕಾರಕ್ಕೆ ಸಲ್ಲಿಸಬೇಕಾದ ಕಾರಣ ಬೇಡಿಕೆಯನ್ನು 2011-12ರಿಂದ 2016-17ರ ತನಕ ತಾಲೂಕು ಕಚೇರಿಗೆ ಸಲ್ಲಿಸಿತ್ತು. ಆದರೆ 2014-2017ರ ತನಕದ ಕರ ಬೇಡಿಕೆ ವಸೂಲಾತಿ ವಿವರ ಸಲ್ಲಿಕೆ ಆಗಿಲ್ಲದ ಕಾರಣ 2014-15ರಿಂದ 2017-18ರ ತನಕದ ವಸೂಲಾತಿ ವಿವರಗಳನ್ನು ತತ್‌ಕ್ಷಣ ಸಲ್ಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕೃಷಿಕರೇ ಹಲಗೆ ಹಾಕಿ ನೀರು ಸಂಗ್ರಹಿಸುತ್ತಾರೆ!
ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ನಿರ್ವಹಣೆಗೆ ನೆರವು ನೀಡುವುದಿಲ್ಲ. ಫಲಾನುಭವಿಗಳೇ ಹಲಗೆ ಅಳವಡಿಸುತ್ತಾರೆ. ಹಲಗೆ ತೆರವು ಮಾಡುವುದೂ ಅವರೇ. “ಈ ತನಕ ಕರ ಪಾವತಿಸಿಲ್ಲ. ನಾವೇ ಹಲಗೆ ಹಾಕಿ, ನಿರ್ವಹಣೆ ಮಾಡಿ, ಸ್ವಂತ ಪಂಪ್‌ ಬಳಸಿ ನೀರೆತ್ತಿದ್ದರೂ ತೆರಿಗೆ ಏಕೆ ಕಟ್ಟಬೇಕು’ ಎಂಬುದು ಕೃಷಿಕರ ಪ್ರಶ್ನೆ.

ತಾಲೂಕಿನ 18ಕ್ಕೂ ಅಧಿಕ ಕಿಂಡಿ ಅಣೆಕಟ್ಟು ವ್ಯಾಪ್ತಿಯ ಫಲಾನುಭವಿಗಳಿಂದ ಕರ ವಸೂಲಿಗಾಗಿ ವಿವರ ಸಂಗ್ರಹಿಸುವಂತೆ ಸಣ್ಣ ನೀರಾವರಿ ಮಂಗಳೂರು ವಿಭಾಗದಿಂದ ಸುಳ್ಯ ತಾಲೂಕು ಕಚೇರಿಗೆ ಸುತ್ತೋಲೆ ಕಳುಹಿಸಿದ್ದಾರೆ. ಈಗಿನ ಬಿಸಿಲಿನ ತಾಪದಿಂದಾಗಿ 2 ತಿಂಗಳಿಗಿಂತ ಹೆಚ್ಚು ನೀರು ಇರುವುದಿಲ್ಲ. ಹಾಗಾಗಿ ಕರ ವಸೂಲಿಯಿಂದ ಕೃಷಿಕರಿಗೆ ತೊಂದರೆ ಆಗುತ್ತದೆ.
-ಎಸ್‌.ಎನ್‌. ಮನ್ಮಥ
ಜಿ.ಪಂ. ಸದಸ್ಯ, ಬೆಳ್ಳಾರೆ

ಸಣ್ಣ ನೀರಾವರಿ ಇಲಾಖೆ ಮೂಲಕ ನಾವು ಬೇಡಿಕೆ ಪಟ್ಟಿಯನ್ನು ಆಯಾ ತಾ. ಕಂದಾಯ ಇಲಾಖೆಗೆ ಕಳುಹಿಸುತ್ತೇವೆ. ವಸೂಲಿ ಜವಾಬ್ದಾರಿ ಅವರದು. ಕರ ವಸೂಲಿ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ಜಿಲ್ಲಾ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ.
ಗೋಕುಲ್‌ದಾಸ್‌ ಕಾರ್ಯಕಾರಿ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ ಮಂಗಳೂರು

ಏನಿದು ಕರ ಸಂಗ್ರಹ?
ಕಿಂಡಿ ಅಣೆಕಟ್ಟು ನಿರ್ಮಾಣ ಆರಂಭಗೊಂಡ ಕಾಲದಿಂದಲೇ ತೆರಿಗೆ ವಸೂಲಾತಿ ಇದೆ ಎನ್ನುವುದು ಇಲಾಖೆಯ ವಾದ. ಕಿಂಡಿ ಅಣೆಕಟ್ಟುಗಳ ಕಾಮಗಾರಿ ಆರಂಭಕ್ಕೆ ಮೊದಲು ಅದರ ಪ್ರಯೋಜನ ಪ್ರದೇಶ, ಫಲಾನುಭವಿಗಳ ಸಂಖ್ಯೆ, ಕೃಷಿ ಮಾಹಿತಿಗಳನ್ನು ಆಯಾ ಗ್ರಾಮಕರಣಿಕರು ಸಂಗ್ರಹಿಸಿ ಸಲ್ಲಿಸಬೇಕು. ಅಣೆಕಟ್ಟು ನಿರ್ಮಾಣಗೊಂಡ 3 ವರ್ಷಗಳ ಅನಂತರ ನಿಗದಿತ ದರದಡಿ ನೀರಾವರಿ ಇಲಾಖೆಯು ಬೇಡಿಕೆ ಪಟ್ಟಿ ಸಲ್ಲಿಸುತ್ತದೆ. ಕಂದಾಯ ಇಲಾಖೆಯು ಗ್ರಾಮ ಕರಣಿಕರ ಕಚೇರಿ ಮೂಲಕ ಕರ ಸಂಗ್ರಹಿಸಬೇಕು. ಆದರೆ 3 ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ಕರ ವಸೂಲಾತಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹೊಸ ಕಿಂಡಿ ಅಣೆಕಟ್ಟುಗಳ ವ್ಯಾಪ್ತಿಯ ಮಾಹಿತಿ ಸಲ್ಲಿಸಿಲ್ಲ. ಹೀಗಾಗಿ ಕರ ವಿಧಿಸುವ ಬಗ್ಗೆ ಕಂದಾಯ ಇಲಾಖೆ ಜತೆ ಜಂಟಿ ಪರಿಶೀಲನೆ ನಡೆಸಿ, ಕರ ನಿಗದಿ ಪಡಿಸಲು ಸೂಕ್ತ ದಿನಾಂಕ ನೀಡುವಂತೆ ಸಣ್ಣ ನೀರಾವರಿ ಇಲಾಖೆಯು ಕಂದಾಯ ಇಲಾಖೆಗೆ ಉಲ್ಲೇಖ ಪತ್ರ ನೀಡಿತ್ತು. ಆದರೂ ಕಂದಾಯ ಇಲಾಖೆ ದಿನಾಂಕ ನೀಡಿರಲಿಲ್ಲ. ಕಳೆದ ತಿಂಗಳು ಸಣ್ಣ ನೀರಾವರಿ ಇಲಾಖೆಯು ಸುತ್ತೋಲೆ ರವಾನಿಸಿದ್ದು, ಈ ಹಿಂದಿನ ವರ್ಷದಂತೆ ಕರ ವಿಧಿಸಲಾಗಿದೆ ಎಂದು ಉಲ್ಲೇಖೀಸಲಾಗಿದೆ. ಜತೆಗೆ, ವಸೂಲಾತಿ ಆದ ತತ್‌ಕ್ಷಣ ವಿವರ ಸಲ್ಲಿಸುವಂತೆ ತಿಳಿಸಿದೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.