ಕುಮ್ಕಿ ಹಕ್ಕು ಮತ್ತೆ ಗಗನ ಕುಸುಮ? ಕರಾವಳಿಯ ಕೃಷಿಕರ ಬಹುಕಾಲದ ಬೇಡಿಕೆ


Team Udayavani, May 18, 2023, 8:00 AM IST

ಕುಮ್ಕಿ ಹಕ್ಕು ಮತ್ತೆ ಗಗನ ಕುಸುಮ? ಕರಾವಳಿಯ ಕೃಷಿಕರ ಬಹುಕಾಲದ ಬೇಡಿಕೆ

ಮಂಗಳೂರು: ಕುಮ್ಕಿ ಹಕ್ಕು ಪಡೆಯುವ ಬಗ್ಗೆ ಈ ಬಾರಿ ಆಶಾ ಭಾವನೆ ಹೊಂದಿದ್ದ ಕರಾವಳಿಯ ಕೃಷಿಕರು ಸರಕಾರ ಬದಲಾವಣೆಯಿಂದ ಇನ್ನೇನಾಗಬಹುದೋ ಎನ್ನುವ ಆತಂಕದಲ್ಲಿದ್ದಾರೆ.

ಹಿಂದೆ ಜಗದೀಶ್‌ ಶೆಟ್ಟರ್‌ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ 2013ರಲ್ಲಿ ಕುಮ್ಕಿ ಹಕ್ಕು ನೀಡುವ ಕುರಿತ ಸಚಿವ ಸಂಪುಟ ನಿರ್ಧಾರವನ್ನು ಕೈಗೊಂಡಿತ್ತು. ಆದರೆ 2013ರಿಂದ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಸರಕಾರ ಹಿಂದಿನ ಸರಕಾರದ ನಿರ್ಣಯವನ್ನು ಜಾರಿಗೊಳಿಸಲು ಆಸಕ್ತಿ ತೋರಿಸಿರಲಿಲ್ಲ. ಕುಮ್ಕಿ ಹಕ್ಕು ನೀಡಿದರೆ ಸರಕಾರಿ ಭೂಮಿ ಸಿಗದಾದೀತು ಎನ್ನುವ ಚಿಂತನೆ ಅದಕ್ಕೆ ಕಾರಣ.

ಕೊನೆಯ ಹಂತದ ತೀರ್ಮಾನ !
ಅಂದು ಶೆಟ್ಟರ್‌ ನೇತೃತ್ವದ ಸರಕಾರವೂ ತನ್ನ ಅವಧಿಯ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಕುಮ್ಕಿ ಕುರಿತು ತೀರ್ಮಾನ ಕೈಗೊಂಡಿತ್ತು. ಈ ಬಾರಿಯೂ ಸರಕಾರದ ಅವಧಿಯ ಕೊನೆ ಅವಧಿಯಲ್ಲೇ ಕುಮ್ಕಿ ಹಕ್ಕು ಜಾರಿಗೊಳಿಸುವ ಇಂಗಿತ ವ್ಯಕ್ತಪಡಿಸಿದೆ. ಅದರಂತೆ ಕುಮ್ಕಿ ಜಮೀನುಗಳನ್ನು 5 ಎಕರೆಗೆ ಮೀರದಂತೆ 30 ವರ್ಷ ಅವಧಿಗೆ ಗುತ್ತಿಗೆ ನೀಡುವುದಕ್ಕೆ ಬೇಕಾದ ಕಾನೂನು ತಿದ್ದುಪಡಿ ತರುವುದಕ್ಕೆ ನಿಕಟ ಪೂರ್ವ ಕಂದಾಯ ಸಚಿವ ಆರ್‌. ಅಶೋಕ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯಿಂದ ವರದಿ ಕೇಳಿದ್ದು, ಸಮಿತಿ ಈಗಾಗಲೇ ಶಿಫಾರಸು ಮಾಡಿದೆ. ಕುಮ್ಕಿ ಜಮೀನನ್ನು ಕೃಷಿಕರ ಹಿಡುವಳಿ ಜಮೀನು ಹೊರತು ಪಡಿಸಿ 5 ಎಕರೆಗೆ ಮೀರದಂತೆ ಗುತ್ತಿಗೆ ಮೌಲ್ಯವನ್ನು ನಿಗದಿ ಪಡಿಸಿ 30 ವರ್ಷ ಅವಧಿಗೆ ಗುತ್ತಿಗೆ ನೀಡಲು ಕರ್ನಾಟಕ ಭೂಕಂದಾಯ ಕಾಯಿದೆ 1964ಕ್ಕೆ ತಿದ್ದುಪಡಿ ತರಬಹುದು ಎಂದು ಸಮಿತಿ ತಿಳಿಸಿತ್ತು. ಆದರೆ ಸರಕಾರ ಬದಲಾಗಿರುವುದರಿಂದ ಈ ಶಿಫಾರಸು ಈಗ ಅನುಷ್ಠಾನಕ್ಕೆ ಬರುವುದೇ ಎನ್ನುವ ಸಂದೇಹ ಕೃಷಿಕರನ್ನು ಕಾಡತೊಡಗಿದೆ.

ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ 31,373 ರೈತರು 73,408 ಎಕರೆ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಪ್ಲಾಂಟೇಶನ್‌ ಬೆಳೆಗಳನ್ನು ಬೆಳೆಯುತ್ತಿದ್ದು, ಆ ಜಮೀನಿಗೂ 30 ವರ್ಷ ಅವಧಿಗೆ 25 ಎಕರೆ ವರೆಗೆ ಗುತ್ತಿಗೆ ನೀಡಲು ಸರಕಾರ ಕೆಲವು ತಿಂಗಳ ಹಿಂದೆಯಷ್ಟೇ ಆದೇಶ ಮಾಡಿತ್ತು. ಅದೇ ಮಾದರಿಯನ್ನು ಕುಮ್ಕಿಗೂ ಅನ್ವಯಿಸಬೇಕು ಎನ್ನುವುದು ಕರಾವಳಿ ಭಾಗದ ಶಾಸಕರ ಒತ್ತಾಯವಾಗಿತ್ತು.

ಕುಮ್ಕಿ ಭೂಮಿಯೆಂದರೆ…
ಕೃಷಿಕರ ಸಾಗುವಳಿಯನ್ನು ಪ್ರೋತ್ಸಾಹಿಸುವುದ ಕ್ಕಾಗಿ ಸೊಪ್ಪು ಹಾಗೂ ಹುಲ್ಲು, ಕಟ್ಟಿಗೆ ಇತ್ಯಾದಿ ಬಳಸಿಕೊಳ್ಳುವುದಕ್ಕಾಗಿ ವರ್ಗ ಜಮೀನಿಗೆ ತಾಗಿ ಕೊಂಡಿರುವ ಸರಕಾರಿ ಜಮೀನನ್ನು ಒದಗಿಸಿದ್ದು ಅದಕ್ಕೆ ಕುಮ್ಕಿ ಭೂಮಿ ಎನ್ನುತ್ತಾರೆ. ಮೂಲತಃ ಇದು ಉರ್ದು ಪದವಾದ “ಕುಮ್ಮಕ್ಕು’ನಿಂದ ಬಂದಿದೆ, ಕುಮ್ಮಕ್ಕು ಎಂದರೆ ಪ್ರೋತ್ಸಾಹ. ಬ್ರಿಟಿಷರು ಹಿಂದೆ ಸ್ಟಾ éಂಡಿಂಗ್‌ ಬೋರ್ಡ್‌ ಆದೇಶ ಹೊರಡಿಸಿ, ಕೃಷಿಭೂಮಿಯಿಂದ 100 ಗಜ, ಅಥವಾ 250 ಲಿಂಕ್ಸ್‌ ಸರಕಾರಿ ಜಾಗವನ್ನು ಕೃಷಿಕರು ಬಳಸಿಕೊಳ್ಳಬಹುದು ಎಂದಿದ್ದರು. ಅದುವೇ ಕುಮ್ಕಿ ಜಾಗ. ಇದೇ ಜಾಗಕ್ಕೆ ಸೊಪ್ಪಿನಬೆಟ್ಟ, ಕಾನ, ಬಾಣೆ ಎಂದು ಮಲೆನಾಡು, ಕೊಡಗು ಭಾಗದಲ್ಲಿ ಕರೆಯುತ್ತಾರೆ.

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.