ಪಾಠ ಕಲಿತಿದ್ದೇವೆ, ಇನ್ನು ಅರ್ಹರಿಗಷ್ಟೇ ಟಿಕೆಟ್‌: ಡಾ| ಜಿ. ಪರಮೇಶ್ವರ


Team Udayavani, Jan 22, 2023, 6:25 AM IST

gಪಾಠ ಕಲಿತಿದ್ದೇವೆ, ಇನ್ನು ಅರ್ಹರಿಗಷ್ಟೇ ಟಿಕೆಟ್‌: ಡಾ| ಜಿ. ಪರಮೇಶ್ವರ

ಮಂಗಳೂರು: ಬಿಜೆಪಿಯವರು ಕೀಳುಮಟ್ಟಕ್ಕೆ ಇಳಿದು ಕಾಂಗ್ರೆಸ್‌ನ ಶಾಸಕರನ್ನು ಹೈಜಾಕ್‌ ಮಾಡಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆ ನಮಗೆ ಕಳೆದ ಬಾರಿ ಇರಲಿಲ್ಲ. ಈಗ ಪಾಠ ಕಲಿತಿದ್ದೇವೆ. ಪ್ರತೀ ಅಭ್ಯರ್ಥಿಯನ್ನೂ ಅಳೆದೂ ತೂಗಿ ವಿಶ್ಲೇಷಿಸಿ ಅರ್ಹರಿಗಷ್ಟೇ ಟಿಕೆಟ್‌ ನೀಡಲಾಗುವುದು ಎಂದು ರಾಜ್ಯ ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ| ಜಿ. ಪರಮೇಶ್ವರ ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಮೈತ್ರಿ ಸರಕಾರವೂ ಇರುವುದಿಲ್ಲ, ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿಯುವುದು ಶತಸ್ಸಿದ್ಧ ಎಂದರು.

ಅರ್ಜಿ ಹಾಕದಿದ್ದರೂ ಸಮರ್ಥರಿಗೆ ಟಿಕೆಟ್‌
ಅರ್ಜಿ ಹಾಕಿದವರಿಗೆ ಮಾತ್ರವೇ ಟಿಕೆಟ್‌ ಎಂಬಂತಹ ಯಾವುದೇ ನಿಯಮ ಇಲ್ಲ, ಯಾರು ಸಮರ್ಥರಿದ್ದಾರೆಯೋ ಅವರು ಅರ್ಜಿ ಹಾಕಿಲ್ಲದಿದ್ದರೂ ಅವರಿಗೆ ಟಿಕೆಟ್‌ ಕೊಡ ಲಾಗುವುದು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಕೂಡಲೇ ಅವರಿಗೆ ಟಿಕೆಟ್‌ ಸಿಗಲಾರದು. ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವುದಕ್ಕೆ ಕಾಂಗ್ರೆಸ್‌ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದರು.

113ಕ್ಕೂ ಅಧಿಕ ಸ್ಥಾನ ಖಚಿತ: ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಇದು ಜನರಲ್ಲಿ ಹತಾಷೆಗೆ ಕಾರಣವಾಗಿದ್ದು, ರಾಜ್ಯದಲ್ಲಿ ಆಡಳಿತಕ್ಕೆ ಕಾಂಗ್ರೆಸ್‌ ಮಾತ್ರವೇ ಸಮರ್ಥವಾಗಿದೆ. ಈ ಬಾರಿ 113ಕ್ಕೂ ಅಧಿಕ ಸ್ಥಾನಗಳು ಸಿಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಿಳಿಸಿದರು.

ವಿಧಾನಸೌಧದ ಮೆಟ್ಟಿಲುಗಳು, ಕಂಬಗಳಲ್ಲೂ ಈಗಿನ ಸರಕಾರದ 40 ಪರ್ಸೆಂಟ್‌ ಭ್ರಷ್ಟಾಚಾರದ ಸದ್ದು ಕೇಳಿಬರುತ್ತಿದೆ. ರಾಜ್ಯದ ಇತಿಹಾಸದಲ್ಲೇ ಇಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆದಿಲ್ಲ,

ನೋಂದಾಯಿತ ಗುತ್ತಿಗೆದಾರರ ಸಂಘದವರು ಬಹಿರಂಗವಾಗಿ ಲಂಚದ ಆರೋಪ ಮಾಡಿದ್ದಾರೆ. ಅವರಿಗೆ ಬರಬೇಕಾದ ಆರೂವರೆ ಸಾವಿರ ಕೋಟಿ ರೂ. ಬಿಲ್‌ ಬಾಕಿ ಇದೆ. ಪರಿಶಿಷ್ಟರಿಗಾಗಿ ಇರುವ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ 42 ಸಾವಿರ ಕೋಟಿ ರೂ. ಮೊತ್ತದ ಬದಲು ಕೇವಲ 28 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲೂ 8 ಸಾವಿರ ಕೋಟಿ ರೂ. ಮೊತ್ತವನ್ನು ಬೇರೆ ಕೆಲಸಕ್ಕೆ ಖರ್ಚು ಮಾಡಿದ್ದಾರೆ ಈ ಮೂಲಕ ಬಜೆಟ್‌ಗೆ ಅರ್ಥವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಪ್ರಣಾಳಿಕೆಯೇ ನಮ್ಮ ಆಡಳಿತದ ಮೂಲಮಂತ್ರ
ಕಳೆದ ಸರಕಾರದ ಪ್ರಣಾಳಿಕೆಯಲ್ಲಿ 160ರಷ್ಟು ಭರವಸೆಗಳಿದ್ದು, ಅದರಲ್ಲಿ ಬಹುತೇಕ ಈಡೇರಿಸಿದ್ದೇವೆ. ನಮ್ಮ ಸರಕಾರ ಹಿಂದೆ ಪ್ರಣಾಳಿಕೆಯನ್ನು ಇರಿಸಿಕೊಂಡೇ ಬಜೆಟ್‌ ರೂಪಿಸಿತ್ತು ಎಂದ ಅವರು, ಈ ಬಾರಿಯೂ ಎಲ್ಲ ಜಿಲ್ಲೆಗಳಿಂದಲೂ ಸಲಹೆ ಪಡೆದುಕೊಂಡು ಎಲ್ಲ ಕ್ಷೇತ್ರಗಳನ್ನೂ ಒಳಗೊಂಡಂತೆ ಸಮಗ್ರ ಭರವಸೆಗಳುಳ್ಳ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದರು.

ಮಂಗಳೂರಿನಲ್ಲಿ ಇಂದು ಮೀನುಗಾರರು, ಅಡಿಕೆ ಬೆಳೆಗಾರರು, ವಿದ್ಯಾರ್ಥಿಗಳು, ಉದ್ಯಮಿಗಳು, ಬಸ್‌ ಮಾಲಕ, ನೌಕರರು, ಆಟೊರಿಕ್ಷಾ ಚಾಲಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಸಾಮರಸ್ಯ ಹದಗೆಟ್ಟಿರುವುದರಿಂದ ಬಂಡವಾಳ ಹೂಡಿಕೆಗೆ ಹಿನ್ನಡೆಯಾಗುತ್ತಿರುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಶಾಸಕ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ನಾಯಕರಾದ ಪ್ರೊ| ಕೆ.ಇ. ರಾಧಾಕೃಷ್ಣ, ಜಿ.ಎ. ಬಾವಾ, ಮಧು ಬಂಗಾರಪ್ಪ, ಜೆ.ಆರ್‌. ಲೋಬೊ, ಐವನ್‌ ಡಿ’ಸೋಜಾ, ಶಕುಂತಳಾ ಶೆಟ್ಟಿ, ಕವಿತಾ ಸನಿಲ್‌, ನವೀನ್‌ ಡಿ’ಸೋಜಾ, ಇಬ್ರಾಹಿಂ ಕೋಡಿಜಾಲ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

police siren

ತೋಟದಲ್ಲಿ ಪಿಕಪ್‌ ವಾಹನ ಪಲ್ಟಿ : ಮರಗಳ್ಳರು ಪರಾರಿ

tt

ಚಾರ್ಮಾಡಿ: ಟಿಟಿ, ತರಕಾರಿ ಸಾಗಾಟ ವಾಹನ ಪಲ್ಟಿ

police siren

ಮಹಿಳೆಯರ ಕುತ್ತಿಗೆಯಿಂದ ಸರ ಅಪಹರಣ

police siren

ವಿದ್ಯಾರ್ಥಿನಿ ಅನಮಾನಸ್ಪದ ಸಾವು: ಸಮಗ್ರ ತನಿಖೆ ನಡೆಸಿನ್ಯಾಯ ಒದಗಿಸಲು ಆಗ್ರಹ

police karnataka

ನಕಲಿ ಮಂತ್ರವಾದಿ ಮೇಲೆ ಹಲ್ಲೆ ಪ್ರಕರಣ ರಾಜಿಯಲ್ಲಿ ಮುಕ್ತಾಯ

1-qwewe

Karwar ನೌಕಾನೆಲೆ :ಯುದ್ಧ ನೌಕೆಯ ರನ್ ವೇನಲ್ಲಿ ಯುದ್ಧ ವಿಮಾನ ಸಾಮರ್ಥ್ಯ ಪ್ರದರ್ಶನ

hk-patil

Tourism ಬೆಳವಣಿಗೆಗೆ ವಿಶೇಷ ಒತ್ತು:ಸಚಿವ ಎಚ್.ಕೆ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತ ಮಾಡಿದ ಚಿತ್ರತಂಡ

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತಮಾಡಿದ ಚಿತ್ರತಂಡ

PU ಫೇಲಾದ ಪ್ರಿಯಾಂಕ ಖರ್ಗೆ ಎಂಜಿನಿಯರ್ ಸೂಲಿಬೆಲೆಯ ಪದವಿ ಕೇಳುತ್ತಿದ್ದಾರೆ: ಭರತ್ ಶೆಟ್ಟಿ

PU ಫೇಲಾದ ಪ್ರಿಯಾಂಕ ಖರ್ಗೆ ಎಂಜಿನಿಯರ್ ಸೂಲಿಬೆಲೆಯ ಪದವಿ ಕೇಳುತ್ತಿದ್ದಾರೆ: ಭರತ್ ಶೆಟ್ಟಿ

Mangaluru: ಎಂಡಿಎಂಎ ಮಾದಕ ವಸ್ತು ಹೊಂದಿದ ಇಬ್ಬರು ಆರೋಪಿಗಳ ಸೆರೆ

Mangaluru: ಎಂಡಿಎಂಎ ಮಾದಕ ವಸ್ತು ಹೊಂದಿದ ಇಬ್ಬರು ಆರೋಪಿಗಳ ಸೆರೆ

arrest

ಮಟ್ಕಾ ಜುಗಾರಿ: 25 ಮಂದಿ ಸೆರೆ

ಉಳ್ಳಾಲ: 24 ಪುಟಗಳ ಡೆತ್ ನೋಟ್ ಬರೆದಿಟ್ಟು ನೂತನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ

ಉಳ್ಳಾಲ: 24 ಪುಟಗಳ ಡೆತ್ ನೋಟ್ ಬರೆದಿಟ್ಟು ನೂತನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ

MUST WATCH

udayavani youtube

ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಕಿರಣ್‌ ಕೊಡ್ಗಿ

udayavani youtube

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್‌ ಘೀ ರೋಸ್ಟ್‌

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಹೊಸ ಸೇರ್ಪಡೆ

police siren

ತೋಟದಲ್ಲಿ ಪಿಕಪ್‌ ವಾಹನ ಪಲ್ಟಿ : ಮರಗಳ್ಳರು ಪರಾರಿ

tt

ಚಾರ್ಮಾಡಿ: ಟಿಟಿ, ತರಕಾರಿ ಸಾಗಾಟ ವಾಹನ ಪಲ್ಟಿ

police siren

ಮಹಿಳೆಯರ ಕುತ್ತಿಗೆಯಿಂದ ಸರ ಅಪಹರಣ

police siren

ವಿದ್ಯಾರ್ಥಿನಿ ಅನಮಾನಸ್ಪದ ಸಾವು: ಸಮಗ್ರ ತನಿಖೆ ನಡೆಸಿನ್ಯಾಯ ಒದಗಿಸಲು ಆಗ್ರಹ

police karnataka

ನಕಲಿ ಮಂತ್ರವಾದಿ ಮೇಲೆ ಹಲ್ಲೆ ಪ್ರಕರಣ ರಾಜಿಯಲ್ಲಿ ಮುಕ್ತಾಯ