ಹಣ ವಿನಿಮಯ ಕೇಂದ್ರ ಸ್ಥಗಿತ; ಪ್ರಯಾಣಿಕರಿಗೆ ತೊಂದರೆ
ಮಂಗಳೂರು ವಿಮಾನ ನಿಲ್ದಾಣ
Team Udayavani, Dec 16, 2019, 5:10 AM IST
ಮಂಗಳೂರು: ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗಿನ ನಗದುವಿನಿಮಯ ಕೇಂದ್ರಗಳು ವಾರದಿಂದ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಇಲ್ಲಿ ಕಾರ್ಯಾಚರಿಸುತ್ತಿದ್ದ ಎರಡು ನಗದು ವಿನಿಮಯ ಕೇಂದ್ರಗಳನ್ನು ನಷ್ಟದ ಕಾರಣ ನೀಡಿ ಟೆಂಡರ್ಪಡೆದ ಗುತ್ತಿಗೆದಾರರು ಬಂದ್ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಅದರಲ್ಲೂ ವಿದೇಶಗಳಿಂದ ಆಗಮಿಸುವವರಿಗೆ ನಗದು ವಿನಿಮಯಕ್ಕೆ ಸಮಸ್ಯೆ
ಯಾಗುತ್ತಿದೆ. ಪರ್ಯಾಯ ವ್ಯವಸ್ಥೆ ರೂಪಿಸುವತ್ತ ವಿಮಾನ ನಿಲ್ದಾಣ ಪ್ರಾಧಿಕಾರವು ಹೆಜ್ಜೆ ಇರಿಸಿದೆ.
ವಿದೇಶಗಳಿಗೆ ತೆರಳುವವರು ಅಲ್ಲಿ ವಹಿವಾಟಿಗಾಗಿ ಅಲ್ಲಿನ ಕರೆನ್ಸಿ ಹೊಂದಿರಬೇಕು. ಇದಕ್ಕಾಗಿ ಮಂಗಳೂರು ನಗರ ಸಹಿತ ಹಲವೆಡೆ ಹಲವಾರು “ನಗದು ವಿನಿಮಯ ಕೇಂದ್ರ’ಗಳಿವೆ. ಸಮಯದ ಅಭಾವ ಅಥವಾ ಇನ್ಯಾವುದೇ ಕಾರಣದಿಂದ ವಿಮಾನ ನಿಲ್ದಾಣದಲ್ಲಿಯೇ ವಿದೇಶೀ ಕರೆನ್ಸಿ ಪಡೆಯಬೇಕಿರುವ ಯಾನಿಗಳ ಅನುಕೂಲಕ್ಕಾಗಿ ನಿಲ್ದಾಣದಲ್ಲೇ ವಿನಿಮಯ ಕೇಂದ್ರ ಆರಂಭಿಸಲಾಗಿತ್ತು. ಈ ಕೇಂದ್ರವಿದ್ದರೆ ಆಗಮಿಸಿದ ವಿದೇಶೀಯರಿಗೂ ಅನುಕೂಲ. ಪ್ರಯಾಣಿಕರಿಗೆ ಸದ್ಯ ಈ ಬಗ್ಗೆ ಮಾಹಿತಿ ನೀಡುತ್ತಿದ್ದರೂ ಕೆಲವರು ಮಾತ್ರ ಬಂದ ಬಳಿಕ ತಬ್ಬಿಬ್ಟಾಗುತ್ತಿದ್ದಾರೆ.
ಏನಿದು ಸಮಸ್ಯೆ?
ನಿಲ್ದಾಣದ ಒಳಭಾಗದ ನಗದು ವಿನಿಮಯ ಕೇಂದ್ರವನ್ನು ಆರ್ಬಿಐ ನಿಯಮದ ಪ್ರಕಾರ ಟೆಂಡರ್ ಆಧಾರದಲ್ಲಿ ಕೇರಳ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ವಿವಿಧ ಕಾರಣಗಳಿಂದ ನಷ್ಟವಾಗುತ್ತಿದೆ ಎಂಬ ಕಾರಣ ನೀಡಿ ಸಂಸ್ಥೆ ಹಿಂದೆ ಸರದಿದೆ.
ಏರ್ಪೋರ್ಟ್ ಪ್ರಾಧಿಕಾರದ ಮೂಲಗಳ ಪ್ರಕಾರ ಈ ಕೇಂದ್ರಗಳು ಸ್ಥಗಿತಗೊಳ್ಳುವ ವೇಳೆಯೇ ಹೊಸ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ ಯಾವುದೇ ಸಂಸ್ಥೆ ಭಾಗವಹಿಸದೆ ಇದ್ದುದರಿಂದ ಮರು ಟೆಂಡರ್ ಕರೆಯಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ದಿನಗಳಿಂದ “ನಗದು ವಿನಿಮಯ ಕೇಂದ್ರ’ ಸ್ಥಗಿತಗೊಂಡಿದೆ. ಹೊಸ ಕೇಂದ್ರ ಆರಂಭಿಸಲು ಟೆಂಡರ್ ಕರೆಯಲಾಗಿದೆ. ಜತೆಗೆ, ತುರ್ತಾಗಿ ವಿನಿಮಯ ಸೇವೆ ಆರಂಭಿಸುವುದಕ್ಕಾಗಿ ಆರ್ಬಿಐ ನಿಯಮ ಪ್ರಕಾರ ಸ್ಥಳೀಯ ಬ್ಯಾಂಕ್ಗಳ ಜತೆಗೆ ಮಾತುಕತೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ.
– ಜೈಶಂಕರ್ ಕಮರ್ಷಿಯಲ್ ಮ್ಯಾನೇಜರ್,
ಮಂಗಳೂರು ಅಂ. ವಿಮಾನ ನಿಲ್ದಾಣ
ವಿದೇಶದಿಂದ
ಆಗಮಿಸುವವರಿಗೆ ಸಮಸ್ಯೆ
ನಿಗದಿತ ಪ್ರಮಾಣಕ್ಕಿಂತ ಅಧಿಕ ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ವಿದೇಶದಿಂದ ತಂದರೆ ನಿಲ್ದಾಣದಲ್ಲಿ ತೆರಿಗೆ ಪಾವತಿಸಬೇಕು. ಆದರೆ ವಿದೇಶದಿಂದ ಬರುವ ಬಹುತೇಕರಲ್ಲಿ ಭಾರತೀಯ ಕರೆನ್ಸಿ ಇರುವುದಿಲ್ಲ. ನಿಲ್ದಾಣದ ಒಳಗೆಯೇ ವಿನಿಮಯ ಕೇಂದ್ರವಿದ್ದರೆ ಇದಕ್ಕೆ ಅನುಕೂಲ. ಈಗ ಕೇಂದ್ರ ಸ್ಥಗಿತಗೊಂಡು ಸಮಸ್ಯೆಯಾಗಿದೆ.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು