ಏಳು ಸಾವಿರ ಸಸಿಗಳೊಂದಿಗೆ ಹಸುರೀಕರಣದತ್ತ ಪಿಲಿಕುಳ


Team Udayavani, Jan 10, 2019, 4:41 AM IST

10-january-1.jpg

ಮಹಾನಗರ: ಪಿಲಿಕುಳದ ಡಾ| ಶಿವರಾಮಕಾರಂತ ನಿಸರ್ಗಧಾಮದಲ್ಲಿ ಹಸುರೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಇಲ್ಲಿರುವ ಜೈವಿಕ ವನದಲ್ಲಿ ಈಗ ಎರಡು ಹಂತದಲ್ಲಿ ಒಟ್ಟು 7,000 ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ವಿಶೇಷ ಅಂದರೆ, ಈ ಜೈವಿಕ ವನದಲ್ಲಿ ನೆಡಲಾಗಿರುವ ಹೆಚ್ಚಿನ ಸಸಿಗಳು ಪಶ್ಚಿಮಘಟ್ಟದಲ್ಲಿ ಕಾಣಸಿಗುವ ಅಪೂರ್ವ ಸಸ್ಯಪ್ರಭೇದಗಳು.

ನಿಸರ್ಗಧಾಮದ ಒಂದು ಭಾಗದ ಸುಮಾರು 100ಕ್ಕೂ ಹೆಚ್ಚು ಎಕ್ರೆ ಜಾಗದಲ್ಲಿ ವನ ಸಂಪತ್ತು ಬೆಳೆಸಲಾಗುತ್ತಿದೆ. ಆ ಮೂಲಕ ಪಿಲಿಕುಳ ನಿಸರ್ಗಧಾಮವು ಭವಿಷ್ಯದಲ್ಲಿ ಅಮೂಲ್ಯವಾದ ನೈಸರ್ಗಿಕ ಸಂಪತ್ತು ಸೃಷ್ಟಿಸುವುದಕ್ಕೆ ಆದ್ಯತೆ ನೀಡುತ್ತಿದೆ.

ಗ್ರೀನ್‌ಬೆಲ್ಟ್ ಡೆವಲಪ್‌ಮೆಂಟ್
ಗ್ರೀನ್‌ಬೆಲ್ಟ್ ಡೆವಲಪ್‌ಮೆಂಟ್ ಹೆಸರಿನಲ್ಲಿ ಪಿಲಿಕುಳ ನಿಸರ್ಗಧಾಮದ ಸುತ್ತಲಿನ ಪರಿಸರ ಹಸುರೀಕರಣ ವಾಗುತ್ತಿದ್ದು, ಈ ಯೋಜನೆಗೆ ಎಂಆರ್‌ಪಿಎಲ್‌ ಕೂಡ ಕೈಜೋಡಿಸುತ್ತಿದೆ. ಮೊದಲನೇ ಹಂತದ ಕೆಲಸ 2017ರಲ್ಲಿ ಪ್ರಾರಂಭಗೊಂಡಿದ್ದು, 20 ಎಕ್ರೆ ಪ್ರದೇಶದಲ್ಲಿ 5 ಸಾವಿರ ಸಸಿಗಳನ್ನು ನೆಡಲಾಗಿತ್ತು. ಇದಕ್ಕೆಂದು 29,97,473 ರೂ. ವ್ಯಯಿಸಲಾಗಿದೆ. ಅದೇ ರೀತಿ 2018ರ ಎರಡನೇ ಹಂತದ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, 30 ಎಕ್ರೆ ಪ್ರದೇಶದಲ್ಲಿ 3ಸಾವಿರ ಸಸಿಗಳನ್ನು ನೆಡಲಾಗಿದೆ. ಇದಕ್ಕಾಗಿ 39,85,000 ರೂ. ವ್ಯಯಿಸಲಾಗಿದೆ. ಪಿಲಿಕುಳ ನಿಸರ್ಗಧಾಮವನ್ನು ಹಸುರೀಕರಣಗೊಳಿಸುವ ಪ್ರಕ್ರಿಯೆಯ ಎರಡನೇ ಹಂತವೂ ಪೂರ್ಣಗೊಂಡಿದ್ದು, ಒಟ್ಟಾರೆ 50 ಎಕ್ರೆ ಪ್ರದೇಶದಲ್ಲಿ 7 ಸಾವಿರ ಸಸಿಗಳನ್ನು ನೆಡ ಲಾಗಿದೆ. ಕೆಲವೇ ತಿಂಗಳಲ್ಲಿ ಮೂರನೇ ಹಂತದ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಉದ್ಯಾನವನದಲ್ಲಿ ಹಲಸು, ಮಾವು, ತೇಗ, ಬೀಟೆ, ಗಂಧದ ಸಸಿಗಳನ್ನು ನೆಡುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಟ್ಟೆಗಳ ಸಂತತಿ ಕಡಿಮೆಯಾಗುತ್ತಿದ್ದು, ಚಿಟ್ಟೆಗಳ ಸಂತಾನೋತ್ಪತ್ತಿ ಹೆಚ್ಚಿಸಲು ಮತ್ತು ಚಿಟ್ಟೆಗಳ ಆಕರ್ಷಣೆಗೆ, ಆಹಾರಕ್ಕೆಂದು ಸ್ಥಳೀಯ ಸಸಿಗಳು, ಬೆತ್ತದ ಸಸಿಗಳನ್ನು ನೆಡಲಾಗಿದೆ. ಇದಲ್ಲದೆ ಮರಗಳ ಇಕ್ಕೆಲಗಳಲ್ಲಿ ಕಬ್ಬು, ಬಾಳೆ, ಗೆಣಸು, ಅನಾನಸು, ತೊಂಡೆ, ಸಹಿತ ತರಕಾರಿ ಗಿಡಗಳನ್ನು ಬೆಳೆಸಲಾಗಿದೆ. ನೀರಾವರಿಗೆಂದು ಸ್ಪಿಂಕ್ಲರ್‌ ವ್ಯವಸ್ಥೆ ಮತ್ತು ರೇಜನ್‌ ಸ್ಪಿಂಕ್ಲರ್‌ ವ್ಯವಸ್ಥೆ ಅಳವಡಿಸಲಾಗಿದೆ. ಈಗಾಗಲೇ ಪಿಲಿಕುಳದಲ್ಲಿನ ಕೆರೆಗಳು ಅಭಿವೃದ್ಧಿಯಾಗಿದ್ದು, ತಾವರೆ, ನೈದಿಲೆಗಳು ನಳನಳಿಸುತ್ತಿದೆ. ಗಿಡಗಳನ್ನು ನೆಟ್ಟ ಬಳಿಕ ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಎಂಆರ್‌ಪಿಎಲ್‌ ಸಂಸ್ಥೆ ನಡೆಸುತ್ತಿದೆ.

ಅಕೇಶಿಯಾ ಮುಕ್ತ ಪರಿಸರ
ಪಿಲಕುಳ ಜೈವಿಕ ಉದ್ಯಾನವನಗಳಲ್ಲಿ ಒಟ್ಟಾರೆ 150 ಎಕ್ರೆ ಜಾಗವಿದ್ದು, ಕೆಲವು ಪ್ರದೇಶಗಳಲ್ಲಿ ಅಕೇಶಿಯಾ ಗಿಡಗಳಿವೆ. ಮುಂದಿನ ದಿನಗಳಲ್ಲಿ ಅಕೇಶಿಯಾ ಮುಕ್ತ ಪರಿಸರ ನಿರ್ಮಾಣವಾಗಲಿದೆ. ಇದೇ ಕಾರಣಕ್ಕೆ ಈಗಾಗಲೇ ಪೂರ್ಣಗೊಂಡ ಎರಡು ಹಂತ ದಲ್ಲಿಯೂ ಅಕೇಶಿಯಾ ಗಿಡಗಳ ಮಧ್ಯೆ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಸಸ್ಯ ಗಳನ್ನು ನೆಡಲಾಗಿದೆ. ಈ ಸಸ್ಯಗಳು ದೊಡ್ಡ ದಾದ ಬಳಿಕ ಅಕೇಶಿಯಾ ಗಿಡಗಳನ್ನು ಮುಕ್ತವಾಗಿಸುವ ಚಿಂತನೆಯಿದೆ.

ಪಿಲಿಕುಳಕ್ಕೆ ಬರಲಿದೆ ಕಾಡುಕೋಣ
ಕೆಲವು ದಿನಗಳಲ್ಲಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಎರಡು ಕಾಡುಕೋಣಗಳು ಬರಲಿವೆ. ಅದಕ್ಕೆಂದು ಚೆನ್ನೈಯ ಉದ್ಯಾನವನ ವೊಂದರ ಜತೆ ಮಾತುಕತೆ ನಡೆಸಲಾಗಿದ್ದು, ಅಲ್ಲಿಂದ ಕಾಡುಕೋಣ ತಂದರೆ ಪಿಲಿಕುಳದಿಂದ ಕಾಳಿಂಗ ಸರ್ಪ, ಇನ್ನಿತರ ಪ್ರಾಣಿಗಳ ಕೊಡು- ಕೊಳ್ಳುವಿಕೆ ನಡೆಯಲಿದೆ.

ಪಿಲಿಕುಳ ಹಸುರೀಕರಣ
ಪ್ರಾಣಿಗಳು ಕಾಡಿನ ಪರಿಸರದಲ್ಲಿರಬೇಕು ಎಂಬ ಕಲ್ಪನೆಯಲ್ಲಿ ಉದ್ಯಾನವನ ಸುತ್ತಲೂ ಹಸುರೀಕರಣ ಮಾಡಲಾಗುತ್ತಿದೆ. ಈಗಾಗಲೇ ಎರಡನೇ ಹಂತ ಪೂರ್ಣಗೊಂಡಿದೆ. ಎರಡು ಹಂತದಲ್ಲಿ 7,000ದಷ್ಟು ಪಶ್ಚಿಮಘಟ್ಟದಲ್ಲಿರುವ ಮತ್ತು ಸ್ಥಳೀಯ ಸಸಿಗಳನ್ನು ನೆಡಲಾಗಿದೆ.
– ಎಚ್‌. ಜಯಪ್ರಕಾಶ್‌ ಭಂಡಾರಿ,
ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ

ಕಾಡಿನ ಮಧ್ಯೆ ಪ್ರಾಣಿ ಗೂಡು
ಪಿಲಿಕುಳ ಜೈವಿಕ ಉದ್ಯಾನವನ ಸುತ್ತಮುತ್ತಲೂ ಈಗಾಗಲೇ ಸಸಿಗಳನ್ನು ನೆಡಲು ಪ್ರಾರಂಭಿಸಿದ್ದು, ಕೆಲವು ವರ್ಷಗಳ ಬಳಿಕ ಸುತ್ತಲಿನ ಪ್ರದೇಶ ಹಸಿರಿನಿಂದ ಕಂಗೊಳಿಸಲಿದೆ. ಬಳಿಕ, ಉದ್ಯಾನವನವು ಸಂಪೂರ್ಣ ಕಾಡಾಗಿ ಮಾರ್ಪಾಡಾಗುವುದರಿಂದ ಈಗಿರುವ ಪ್ರಾಣಿಗಳ ಗೂಡು ಕಾಡಿನ ಮಧ್ಯೆ ಇರುವಂತೆ ಕಾಣಲಿದೆ. ಇದರೊಂದಿಗೆ ಪ್ರಾಣಿಗಳು ಕಾಡಿನ ಒಳಗೆ ಇರಬೇಕು ಎಂಬ ಕಲ್ಪನೆ ಸಾಕಾರವಾಗಲಿದೆ.

••ನವೀನ್‌ ಭಟ್ ಇಳಂತಿಲ

ಟಾಪ್ ನ್ಯೂಸ್

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.