ಒಂದೆಡೆ ಪರೀಕ್ಷೆ; ಮತ್ತೊಂದೆಡೆ ತರಗತಿ; ಅತಿಥಿ ಉಪನ್ಯಾಸಕರ ತ್ರಿಶಂಕು ಸ್ಥಿತಿ

ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಅನಿಶ್ಚಿತತೆ !

Team Udayavani, Aug 30, 2022, 7:05 AM IST

ಒಂದೆಡೆ ಪರೀಕ್ಷೆ; ಮತ್ತೊಂದೆಡೆ ತರಗತಿ; ಅತಿಥಿ ಉಪನ್ಯಾಸಕರ ತ್ರಿಶಂಕು ಸ್ಥಿತಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಪದವಿ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿರುವ ಮಧ್ಯೆಯೇ ಎನ್‌ಇಪಿಗೆ ದಾಖಲಾತಿ ಪಡೆದ ಹೊಸ ವಿದ್ಯಾರ್ಥಿಗಳ ತರಗತಿ ಆರಂಭವೂ ನಡೆಯುತ್ತಿದ್ದು, ಕಾಲೇಜು ಗಳಲ್ಲಿ ಅನಿಶ್ಚಿತತೆ ಹುಟ್ಟುಹಾಕಿದೆ.

ಆ. 17ರಂದೇ ಕಾಲೇಜುಗಳನ್ನು ಆರಂಭಿಸುವಂತೆ ಈ ಹಿಂದೆ ವಿ.ವಿ. ನಿರ್ದೇಶನ ನೀಡಿತ್ತು. ಆದರೆ 2021-22ರ ಶೈಕ್ಷ ಣಿಕ ಚಟುವಟಿಕೆ ಪೂರ್ಣವಾಗದ ಹಿನ್ನೆಲೆಯಲ್ಲಿ ಆರಂಭವನ್ನು ಸೆ. 1ಕ್ಕೆ ಮುಂದೂಡಲಾಗಿತ್ತು. ಸೆಪ್ಟಂಬರ್‌ ಮೊದಲ ವಾರದಿಂದ 6ನೇ ಸೆಮಿಸ್ಟರ್‌ ಸಹಿತ ಪದವಿಯ ವಿವಿಧ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಯಲಿರುವುದು ಹೊಸ ತರಗತಿಗಳ ಆರಂಭಕ್ಕೆ ಸವಾಲಾಗಿದೆ.

ಪರೀಕ್ಷೆ, ಮೌಲ್ಯಮಾಪನ ಸಂದರ್ಭ ಪ್ರಾಧ್ಯಾಪಕರು ಮತ್ತು ತರಗತಿ ಕೊಠಡಿಗಳ ಅಗತ್ಯ ಇದೆ. ಅ. 3ರ ವರೆಗೆ ಪರೀಕ್ಷೆ ನಡೆಯ ಲಿದೆ. ಅದುವರೆಗೆ ಹೊಸ ವಿದ್ಯಾರ್ಥಿ ಗಳಿಗೆ ಪೂರ್ಣ ತರಗತಿ ಆರಂಭಿಸಲು ಕೆಲವೆಡೆಗಳಲ್ಲಿ ಕೊಠಡಿ, ಪ್ರಾಧ್ಯಾಪಕರ ಕೊರತೆ ಎದುರಾಗಲಿದೆ.

ಆನ್‌ಲೈನ್‌ ತರಗತಿಗೆ ಒಲವು!
ಪರೀಕ್ಷೆ ಮತ್ತು ತರಗತಿಯನ್ನು ಒಂದೇ ಸಮಯದಲ್ಲಿ ನಡೆಸುವುದು ಕಷ್ಟ ಎಂಬುದನ್ನು ಕೆಲವು ಕಾಲೇಜಿನವರು ವಿ.ವಿ.ಯ ಗಮನಕ್ಕೆ ತಂದಿದ್ದಾರೆ. ಪರೀಕ್ಷೆ ಮುಗಿಯುವ ವರೆಗೆ ಆನ್‌ಲೈನ್‌ ತರಗತಿಗೆ ಅನುಮತಿ ನೀಡುವಂತೆ ವಿ.ವಿ.ಯಿಂದ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯುವ ಸಾಧ್ಯತೆಯಿದೆ.

ತರಗತಿ ಮುಂದೂಡಿಕೆಗೆ ಅತೃಪ್ತಿ
ಈ ಮಧ್ಯೆ ಒಂದೊಂದೇ ಕಾರಣ ನೀಡುತ್ತ ಕಾಲೇಜು ಆರಂಭವನ್ನು ಮತ್ತೆ ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಮುಂದಿನ ಪರೀಕ್ಷೆ-ಫಲಿತಾಂಶ ವಿಳಂಬವಾಗಿ ಅವರಿಗೆ ಉದ್ಯೋಗಕ್ಕೆ ಸಮಸ್ಯೆಯಾಗಲಿದೆ. ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಗೆ ತೊಡಕಾಗುತ್ತದೆ. ಹೀಗಾಗಿ ಕಾಲೇಜಿ ನವರು ಸಹಕಾರ ಮನೋಭಾವದಿಂದ ತರಗತಿ ನಡೆಸಿದರೆ ಉತ್ತಮ ಎಂಬ ಅಭಿಪ್ರಾಯ ಕೆಲವು ಪ್ರಾಧ್ಯಾಪಕರಿಂದ ಕೇಳಿಬಂದಿದೆ.

ಹಾಸ್ಟೆಲ್‌ ಇಲ್ಲ !
ಪರೀಕ್ಷೆ ಮುಗಿಯದೆ 6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಹಾಸ್ಟೆಲ್‌ ತೆರವು ಮಾಡುವುದಿಲ್ಲ. ಇದರಿಂದಾಗಿ ಹೊಸ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶಕ್ಕೆ ಅವಕಾಶ ಸಿಗುವುದಿಲ್ಲ. ಇಲಾಖೆಯ ಮಾಹಿತಿ ಪ್ರಕಾರ ಹೊಸ ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿ ಸೇರ್ಪಡೆ ನಿಗದಿಯಾಗುವುದೇ ಸೆ. 26ಕ್ಕೆ. ಹೊಸ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಕರ್ಯ ಗಗನ ಕುಸುಮ!

ಅತಿಥಿ ಉಪನ್ಯಾಸಕರ ತ್ರಿಶಂಕು ಸ್ಥಿತಿ
ಸರಕಾರದ ಆದೇಶ ಪ್ರಕಾರ ಆ. 31ರ ವರೆಗೆ ಮಾತ್ರ ಅತಿಥಿ ಉಪನ್ಯಾಸಕರು ಈ ಶೈಕ್ಷಣಿಕ ವರ್ಷದಲ್ಲಿ ಸೇವೆ ಸಲ್ಲಿಸ ಬಹುದು. ಸೆಪ್ಟಂಬರ್‌ ಬಳಿಕ ಅವರ ಹೊಣೆ ಮುಂದುವರಿಯುತ್ತದೆಯೇ ಎಂಬ ಬಗ್ಗೆ ಖಚಿತತೆ ಇಲ್ಲ. ಒಂದೆಡೆ ಕಾಲೇಜಿನಲ್ಲಿ ಪರೀಕ್ಷೆ- ಮೌಲ್ಯಮಾಪನ ಹಾಗೂ ಇನ್ನೊಂದೆಡೆ ಕಾಲೇಜು ಆರಂಭ ಆಗುವ ಒತ್ತಡದ ಸಮಯದಲ್ಲಿಯೇ ಅತಿಥಿ ಉಪನ್ಯಾಸಕರು ಇಲ್ಲವಾದರೆ ಸಮಸ್ಯೆ ಜಟಿಲವಾಗುವ ಸಾಧ್ಯತೆಯಿದೆ.

ಸೆ. 1ರಂದೇ ಕಾಲೇಜು ಆರಂಭಿಸುವಂತೆ ಸರಕಾರ ಸೂಚಿಸಿದೆ. ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ಎಲ್ಲ ವಿಧದಲ್ಲೂ ಹೊಂದಾಣಿಕೆ ಮಾಡಿ ಕೊಂಡು ವಿದ್ಯಾರ್ಥಿಗಳ ಆಗಮನಕ್ಕೆ ಸಿದ್ಧತೆ ಕೈಗೊಳ್ಳಲಾಗುವುದು.
– ಡಾ| ಕಿಶೋರ್‌ ಕುಮಾರ್‌, ಕುಲಸಚಿವರು (ಆಡಳಿತ), ಮಂ.ವಿ.ವಿ.

 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.