Haleyangady ನೆಲಮಂಗಲದಲ್ಲಿ ಕಳವಾದ ಮೊಬೈಲ್ ಚೆನ್ನೈನಲ್ಲಿ ಪತ್ತೆ
Team Udayavani, Dec 6, 2023, 8:26 PM IST
ಹಳೆಯಂಗಡಿ: ಬೆಂಗಳೂರಿನ ನೆಲಮಂಗಲದಲ್ಲಿ ಕಳವಾದ ಮೊಬೈಲ್ ಅನ್ನು ಮೂಲ್ಕಿ ಪೊಲೀಸರು ದೂರದ ಚೆನ್ನೈನಲ್ಲಿ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕೆರೆಕಾಡಿನ ಹೇಮಚಂದ್ರ ಶೆಟ್ಟಿಗಾರ್ ತಮ್ಮ ಸ್ನೇಹಿತರೊಂದಿಗೆ ತಿಂಗಳ ಹಿಂದೆ ತಿರುಪತಿ ಪ್ರವಾಸಕ್ಕೆ ತೆರಳಿ ಬರುವಾಗ ನೆಲಮಂಗಲ ಸಮೀಪ ಮೊಬೈಲ್ ಅನ್ನು ಕಳೆದುಕೊಂಡಿದ್ದರು.
ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಮೊಬೈಲ್ನ ಬೆಂಬತ್ತಿದ ಮೂಲ್ಕಿ ಪೊಲೀಸರು ತಮಿಳುನಾಡಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಇದೀಗ ಠಾಣೆಯ ಕ್ರೈಂ ಎಸ್ಐ ಮಾರುತಿ ಅವರು ವಾರಸುದಾರ ಹೇಮಚಂದ್ರ ಶೆಟ್ಟಿಗಾರರಿಗೆ ಹಸ್ತಾಂತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ