ಮೂಡುಬಿದಿರೆ ರಿಂಗ್‌ರೋಡ್‌: ಇನ್ನೂ ಬಗೆಹರಿಯದ ಸಮಸ್ಯೆಗಳು


Team Udayavani, Jan 14, 2021, 6:30 AM IST

ಮೂಡುಬಿದಿರೆ ರಿಂಗ್‌ರೋಡ್‌: ಇನ್ನೂ ಬಗೆಹರಿಯದ ಸಮಸ್ಯೆಗಳು

ಮೂಡುಬಿದಿರೆ: ಸ್ವರಾಜ್ಯ ಮೈದಾನವನ್ನು ಆವರಿಸಿಕೊಂಡು ಅಲಂಗಾರು ರಸ್ತೆಯತ್ತ ಸಾಗುವ ರಿಂಗ್‌ರೋಡ್‌ನ‌ಲ್ಲಿ ಕಂಡುಬಂದಿರುವ ಸಮಸ್ಯೆಗಳ ಪರಿಹಾರ ಕೋರಿ 2019ರ ಸೆ. 16ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದಿದ್ದ ಲೋಕಾಯುಕ್ತರ ಸಭೆಯಲ್ಲಿ, ಪುರಸಭೆ, ಪೊಲೀಸ್‌ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಮಕ್ಷಮ ಸಲ್ಲಿಸಲಾದ ದಾರಿಹೋಕರೋರ್ವರ ಪತ್ರಕ್ಕಿನ್ನೂ ಸಮಂಜಸ ಪರಿಹಾರ ಮಾರ್ಗ ತೋರಿಸಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಪತ್ರ ಹೀಗೂ ನನೆಗುದಿಗೆ ಬೀಳುವುದೆ? ಎಂಬ ಆತಂಕ ಅರ್ಜಿದಾರರನ್ನು ಕಾಡುತ್ತಿದೆ.

ಮೂಡುಬಿದಿರೆ ಪೇಟೆಯನ್ನು ಪ್ರವೇಶಿಸುವ (ಈಗಿನ ಶಾಸಕರ ಕಚೇರಿ, ಕೋರ್ಟ್‌ ರಸ್ತೆ ತಿರುವು, ಜೆಡಿಎಸ್‌ ಕಚೇರಿ ಇವುಗಳ ಮುಂಭಾಗದಲ್ಲಿ) ಉತ್ತರಕ್ಕೆ ರಿಂಗ್‌ರೋಡ್‌ ರಚಿಸಲಾಗಿತ್ತು. ರಿಂಗ್‌ರೋಡ್‌ನ‌ ಪಕ್ಕವೇ ಮೂರು ದೇವಸ್ಥಾನಗಳು, ಕಲ್ಯಾಣಮಂದಿರ, ಕ್ರೀಡಾಂಗಣ, ಪೇಟೆಯಿಂದ ಸ್ಥಳಾಂತರಿತ ಪುರಸಭೆ ಮಾರುಕಟ್ಟೆ ಇವೆ; ಬಲಗಡೆಯಲ್ಲಿ ಮೀನು, ಮಾಂಸ ಮಾರುಕಟ್ಟೆ, ಸಣ್ಣ ಕೈಗಾರಿಕೆ ಘಟಕಗಳಿವೆ.

ಪೇಟೆಯಿಂದ ಆಳ್ವಾಸ್‌ ಆಸ್ಪತ್ರೆ ರಸ್ತೆಯಾಗಿ ಬರುವ ಒಳಮಾರ್ಗವೂ ಮಾರುಕಟ್ಟೆಯ ಒಂದು ದ್ವಾರವೂ ಒಂದೇ ಜಂಕ್ಷನ್‌ನಲ್ಲಿ ಮುಖಾಮುಖೀಯಾಗುತ್ತಿದೆ. ಹತ್ತಿರದಲ್ಲೇ ಆಳ್ವಾಸ್‌ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌, ಮುಂದೆ ತಿರುವುಗಳೊಂದಿಗೆ ಸಾಗುವ ರಸ್ತೆ ಪಕ್ಕದಲ್ಲೇ ಬಿಎಸ್‌ಎನ್‌ಎಲ್‌ ಟವರ್‌, ನೂತನ ಕನ್ನಡ ಭವನ, ಎಡಗಡೆ ಈಜುಕೊಳ, ಬಲಗಡೆ ರೈತ ಸಂಪರ್ಕ ಕೇಂದ್ರ ಇವೆ. ರಿಂಗ್‌ರೋಡ್‌ ರಚನೆಯಾದ ಬಳಿಕ ಆ ಮೂಲಕ ಹಾದುಹೋಗುವ ವಾಹನಗಳ ಸಂಖ್ಯೆ ಹೆಚ್ಚಿದೆ. ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ಎಷ್ಟೋ ಪ್ರಕರಣಗಳಲ್ಲಿ ಸಾವು ನೋವು ನಡೆದಿದ್ದರೂ ಅಧಿಕೃತವಾಗಿ ದಾಖಲಾಗಿಲ್ಲ. ಅನಾಮಧೇಯವಾಗಿ ಹಾಗೆಯೇ ಬಿದ್ದುಹೋಗಿವೆ. (ಶುಕ್ರವಾರ ವಾರದ ಸಂತೆಯ ದಿನವಂತೂ ಮಾರುಕಟ್ಟೆಯ ಮುಂಭಾಗದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗುತ್ತಿದೆ)

ಇದಾಗಿ ಮತ್ತೆ ಒಂದೂಕಾಲು ವರ್ಷಗಳೇ ಸಂದಿವೆ. ಅಭಿಪ್ರಾಯಗಳೆಲ್ಲ ಪತ್ರಗಳ ಒಳಗೇ ನರಳುತ್ತಿವೆ. ರಿಂಗ್‌ರೋಡಿನ ಸಮಸ್ಯೆಗಳಿಗೆ ಪರಿಹಾರ ಗೋಚರಿಸುವುದೆಂದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.

16 ತಿಂಗಳ ಹಿಂದೆ ಸಲ್ಲಿಸಿದ್ದ ಪತ್ರದಲ್ಲಿದ್ದುದೇನು? :

ಈ ರಿಂಗ್‌ರೋಡ್‌ಅನ್ನು ದ್ವಿಪಥ ಗೊಳಿಸಬೇಕಾಗಿದೆ. ಇಲ್ಲಿ ಅಗತ್ಯವಿರುವಲ್ಲಿ, ವಿಶೇಷವಾಗಿ ಮಾರುಕಟ್ಟೆ, ಆಸ್ಪತ್ರೆ, ರಿಂಗ್‌ರೋಡ್‌ ರಸ್ತೆಗಳು ಸಂಪರ್ಕಿಸುವಲ್ಲಿ ವೇಗತಡೆಗಳನ್ನು, ಕನ್ನಡಭವನದ ಬಳಿ ವೃತ್ತವನ್ನು ನಿರ್ಮಿಸಬೇಕಾಗಿದೆ ಎಂಬಿತ್ಯಾದಿ ಕೋರಿಕೆಗಳಿರುವ ಪತ್ರವನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಪುರಸಭೆ, ಲೋಕೋಪಯೋಗಿ ಮತ್ತು ಪೊಲೀಸ್‌ ಇಲಾಖೆಯವರಿಗೆ ಅಧಿಕಾರಿ ಕೂಡಲೇ ಕ್ರಮ ಜರಗಿಸುವಂತೆ ಸೂಚಿಸಿದ್ದರು. ಇದಾಗಿ ತಿಂಗಳ ಬಳಿಕ ಕಡೆಯಿಂದ ಪೊಲೀಸ್‌ ನಿರೀಕ್ಷಕರಿಗೆ “ಪುರಸಭೆ ಮುಖ್ಯಾಧಿಕಾರಿಯವರು ಪತ್ರದಲ್ಲಿ ವ್ಯಕ್ತಪಡಿಸಲಾದ ಕೋರಿಕೆಗಳಿಗೆ ಸಂಬಂಧಿಸಿ ಪೊಲೀಸ್‌ ಇಲಾಖೆಯವರು ಅಭಿಪ್ರಾಯ ನೀಡಬೇಕಾಗಿ ಕೋರಿದ್ದರು.

ರಿಂಗ್‌ರೋಡ್‌ ಸಮಸ್ಯೆಗಳ ಬಗ್ಗೆ ಪುರಸಭೆಯ ವತಿಯಿಂದ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಪುರಸಭೆಯಲ್ಲಿ ಎಂಜಿನಿಯರ್‌ ಹುದ್ದೆ ಖಾಲಿ ಬಿದ್ದು ಸಮಯವಾಗಿದೆ, ಸಮಸ್ಯೆಯಾಗಿದೆ. ಆದರೂ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಅಭಿಪ್ರಾಯದಂತೆ ಕೂಡಲೇ ಪ್ರಯತ್ನಿಸಲಾಗುವುದು. ಇಂದೂ ಎಂ.,   ಮುಖ್ಯಾಧಿಕಾರಿ, ಮೂಡುಬಿದಿರೆ ಪುರಸಭೆ

 

ಧನಂಜಯ  ಮೂಡುಬಿದಿರೆ

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.