ರಾಜ್ಯ ಹೆದ್ದಾರಿಯಂಚಿನಲ್ಲಿದೆ 100ಕ್ಕೂ ಹೆಚ್ಚು ಅಪಾಯಕಾರಿ ಮರಗಳು !
ಕಿನ್ನಿಗೋಳಿಯಿಂದ ಮೂಲ್ಕಿ ಕಾರ್ನಾಡ್ವರೆಗಿನ ರಸ್ತೆ
Team Udayavani, Apr 25, 2019, 6:08 AM IST
ರಸ್ತೆಯಂಚಿನಲ್ಲಿರುವ ಅಪಾಯಕಾರಿ ಮರ.
ಕಿನ್ನಿಗೋಳಿ: ಇಲ್ಲಿಂದ ಮೂಲ್ಕಿ ಕಾರ್ನಾಡುವರೆಗಿನ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಕಾರಣ ಹೆದ್ದಾರಿಯೇನೋ ಡಾಮರೀಕರಣಗೊಂಡಿದೆ. ಆದರೆ ಹೆದ್ದಾರಿ ಬದಿ ಇರುವ 100ಕ್ಕೂ ಹೆಚ್ಚು ಮರಗಳನ್ನು ಕಡಿ ಯದೇ ಹಾಗೇ ಬಿಟ್ಟಿರುವುದರಿಂದ ಸಂಚಾರ ಸಂಚಕಾರವಾ ಗುವ ಅಪಾಯವಿದೆ.
ಕಿನ್ನಿಗೋಳಿಯಿಂದ ಮೂಲ್ಕಿ ಕಾರ್ನಾಡ್ ವರೆಗಿನ ರಾಜ್ಯ ಹೆದ್ದಾ ರಿಯನ್ನು 14.8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸ ಲಾಗಿದೆ. ರಸ್ತೆ ಕಾಮಗಾರಿ ಆರಂಭಗೊಂಡು ಎರಡು ವರ್ಷ ಕಳೆದರೂ ಮಳೆಗಾಲ, ತಾಂತ್ರಿಕ ತೊಂದರೆಯಿಂದಾಗಿ ಹಿನ್ನ ಡೆಯಾಗಿತ್ತು. ಆದರೆ ಈಗ ಹೆದ್ದಾರಿ ಡಾಮರೀಕರಣ ಗೊಂಡಿದೆ. ಆದರೆ ರಸ್ತೆಯ ಅಂಚಿನಲ್ಲಿ ಹೆದ್ದಾರಿಗೆ ತಾಗಿಕೊಂಡೇ ಇರುವ ಮರಗಳು ಮಾತ್ರ ಹಾಗೇ ಇವೆ.
ಅಪಾಯಕಾರಿ ಮರಗಳು
ಹೆದ್ದಾರಿಗೆ ತಾಗಿಕೊಂಡೇ ಸುಮಾರು 100ಕ್ಕೂ ಹೆಚ್ಚು ಮರಗ ಳಿದ್ದು, ವೇಗವಾಗಿ ಬರುವ ವಾಹನ ರಸ್ತೆಯಂಚಿಗೆ ಹೋದರೆ ಅಥವಾ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ತೆರಳಿದರೆ ಮರಕ್ಕೆ ಢಿಕ್ಕಿಯಾಗುವ ಸಾಧ್ಯತೆ ಇದೆ. ಅಲ್ಲದೇ ಮಳೆಗಾಲ ಆರಂಭ ವಾ ದರೆ ಮರದ ಗೆಲ್ಲುಗಳು ರಸ್ತೆಗೆ ಬೀಳುವ ಅಪಾ ಯವೂ ಇದೆ. ಹೀಗಾಗಿ ಈ ಮರಗಳನ್ನು ಕೂಡಲೇ ತೆರವುಗೊಳಿಸಬೇಕಾಗಿದೆ.
ಕಿನ್ನಿಗೋಳಿ ಪೇಟೆಯಲ್ಲಿ ಚರ್ಚ್ ಸಮೀಪದ ಕೆಳಭಾಗದಿಂದ ಭಟ್ರಕೋಡಿ ಯ ತನಕ ಸುಮಾರು 500 ಮೀಟರ್ ರಸ್ತೆಯ ಎರಡೂ ಬದಿ ಕಾಂಕ್ರೀಟ್ ಚರಂಡಿ ನಿರ್ಮಿಸಲಾಗಿದೆ. ಚಪ್ಪಡಿ ಹಾಸಿ ಫುಟ್ಪಾತ್ ನಿರ್ಮಾಣ ಕಾರ್ಯವೂ ಭಾಗಶಃ ಮುಕ್ತಾಯಗೊಂಡಿದೆ.
ವಿದ್ಯುತ್ ಕಂಬಗಳು ತೆರವು
ಮೂರು ಕಾವೇರಿಯಿಂದ ಕಾರ್ನಡ್ ತನಕ ರಸ್ತೆಯ ಅಂಚಿನಲ್ಲಿ ಇದ್ದ 160 ವಿದ್ಯುತ್ ಕಂಬಗಳ ತೆರವು ಆಗಬೇಕಾಗಿದ್ದು ಅದರಲ್ಲಿ ಹೆಚ್ಚಿನ ವಿದ್ಯುತ್ ಕಂಬಗಳು ತೆರವುಗೊಂಡಿವೆ. ಆದರೆ ಅಗತ್ಯವಾಗಿ ರಸ್ತೆ ಅಗಲೀಕರಣಕ್ಕೆ ಪೂರಕವಾಗಿ 60 ಮರಗಳನ್ನು ಕಡಿಯಲೇಬೇಕಾಗಿತ್ತು. ತಾಂತ್ರಿಕ ತೊಂದರೆಯಿಂದಾಗಿ ಈ ಕೆಲಸ ಬಾಕಿ ಉಳಿದಿದೆ. ಸುಮಾರು 100ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸುವ ಬಗ್ಗೆ ಸರ್ವೆ ನಡೆಸಲಾಗಿದೆ. ಹೆಚ್ಚಿನ ಕಡೆಗಳಲ್ಲಿ ಸರಕಾರಿ ಜಾಗ ಇದೆ. ಕೆಲವೂಂದು ಕಡೆಗಳಲ್ಲಿ ಖಾಸಗಿ ಜಾಗವಿದೆ. ಅವರ ಸಹಕಾರ ವನ್ನೂ ಕೋರಲಾಗಿದೆ.
ಮಾತುಕತೆ ನಡೆದಿದೆ
ಕಿನ್ನಿಗೋಳಿಯಿಂದ ಕಾರ್ನಾಡ್ ಜಂಕ್ಷನ್ ವರೆಗಿನ ರಸ್ತೆಯ ಇಕ್ಕಲಗಳಲ್ಲಿ ರಸ್ತೆಯ ಅಂಚಿನಲ್ಲಿರುವ ಮರಗಳನ್ನು ಕಡಿಯಲೇಬೇಕಾಗಿದೆ. ಸರಕಾರಿ ಮಟ್ಟದಲ್ಲಿ ಮಾತುಕತೆ ನಡೆದಿದೆ. ಚುನಾವಣೆ ಹಾಗೂ ಕೆಲವೊಂದು ತಾಂತ್ರಿಕ ಕಾರಣದಿಂದ ಹಿನ್ನಡೆಯಾಗಿದೆ.
- ಕೆ.ಸಿ. ಮಾಥ್ಯೂ,
ಕಿನ್ನಿಗೋಳಿ ವಲಯ ಅರಣ್ಯಾಧಿಕಾರಿ
-ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ