
Mulki ಚೂರಿ ತೋರಿಸಿ ಮಹಿಳೆಯ ಚಿನ್ನದ ಸರ ದರೋಡೆ
Team Udayavani, Sep 18, 2023, 11:28 PM IST

ಮೂಲ್ಕಿ: ಬಾಟಲಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಮೂವರು ವ್ಯಕ್ತಿಗಳಿದ್ದ ದರೋಡೆಕೋರರ ತಂಡ ಚೂರಿ ತೋರಿಸಿ ಮನೆಯಲ್ಲಿದ್ದ ಮಹಿಳೆಯನ್ನು ಬೆದರಿಸಿ ಅವರ ಕುತ್ತಿಗೆಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಸೆಳೆದುಕೊಂಡು ಪರಾರಿಯಾಗಿರುವ ಘಟನೆ ಕೊಲ್ನಾಡು ಚಂದ್ರಮೌಳೀಶ್ವರ ದೇವಸ್ಥಾನ ರಸ್ತೆಯ ಬಳಿ ರವಿವಾರ ನಡೆದಿದೆ.
ಪೆಟ್ರೋಲ್ ಮುಗಿದಿದೆ ಬಾಟಲಿ ಬೇಕೆಂದು ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು ಮಹಿಳೆ ವಸಂತಿ ಅವರಲ್ಲಿ ಕೇಳಿದ್ದಾರೆ. ಮಹಿಳೆ ಮನೆಯೊಳಗೆ ಹೋಗಿ ಬಾಟಲಿ ತಂದು ಕೊಟ್ಟಿದ್ದರು. ಅನಂತರ ಮತ್ತೆ ಬಂದ ಅದೇ ವ್ಯಕ್ತಿಗಳು ಇನ್ನೊಂದು ಬಾಟಲಿಯನ್ನು ಕೇಳಿದ್ದಾರೆ. ಮತ್ತೆ ಮನೆಯೊಳಗೆ ಹೋದ ಮಹಿಳೆ ಇನ್ನೊಂದು ಬಾಟಲಿಯನ್ನು ತರುವಷ್ಟರಲ್ಲಿ ಮೂವರು ದರೋಡೆಕೋರರ ಗುಂಪು ಚೂರಿ ತೋರಿಸಿ ಹೆದರಿಸಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಸೆಳೆದಿದ್ದಾರೆ. ಈ ವೇಳೆ ವಸಂತಿ ಅವರು ಜೋರಾಗಿ ಬೊಬ್ಬೆ ಹಾಕಿದಾಗ ಸ್ಥಳೀಯರು ಸೇರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Fraud Case ಮೆಸ್ ಮ್ಯಾನೇಜರ್, ಸಿಬಂದಿಯಿಂದ ಮಾಲಕರಿಗೆ 30 ಲಕ್ಷ ರೂ. ವಂಚನೆ

CCB Police ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಬಂಧನ

Karnataka Bandh; ಕರಾವಳಿಯಲ್ಲಿ ಸಂಘಟನೆಗಳಿಂದ ನೈತಿಕ ಬೆಂಬಲ; ಬಸ್ ಸಂಚಾರ ಎಂದಿನಂತೆ

Examಕರಾವಳಿಯ ಕೈ ತಪ್ಪಿದ ಕೆ-ಸೆಟ್ ಕೇಂದ್ರ: 23 ವಿಷಯಗಳಿಗೆ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ
MUST WATCH
ಹೊಸ ಸೇರ್ಪಡೆ

Congress ಜಗದೀಶ್ ಶೆಟ್ಟರ್ಗೆ ಆಪರೇಷನ್ ಹಸ್ತದ ಹೊಣೆ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

Asian Games ಇಂದಿನಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Tomorrow ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಿಲ್ಲಿಗೆ ?