

Team Udayavani, Jun 15, 2024, 11:55 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 73ರ 21 ಕಡೆಗಳಲ್ಲಿ ಸೂಕ್ತವಾದ ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ವಹಿಸಿದೆ.
ಬೆಳ್ತಂಗಡಿ ತಾಲೂಕು ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ 73ರ ಕಾಮಗಾರಿ ಪರಿಶೀಲನೆ ಮತ್ತು ಮಳೆಗಾಲದ ಸಮಯ ಉಂಟಾಗುವ ತೊಂದರೆಗಳ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಜೂ. 12ರಂದು ವೀಕ್ಷಣೆ ನಡೆಸಿ ಕೂಡಲೇ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದ್ದರು.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಿಸಲಾಗಿದ್ದು, ಸಂಚಾರ ಸುಗಮವಾಗುವಂತೆ ಹಾಗೂ ಶಾಲಾ ವಠಾರ, ಬಸ್ ನಿಲ್ದಾಣಗಳ ಬಳಿ ಕೆಸರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ.
ದೂರುಗಳಿದ್ದರೆ ಸಂಪರ್ಕಿಸಿ
ಈ ಹೆದ್ದಾರಿ ಕಾಮಗಾರಿಗಳ ನಿರ್ವಹಣೆ ಬಗ್ಗೆ ಸಾರ್ವಜನಿಕರು ಇನ್ನೂ ಯಾವುದೇ ಸಮಸ್ಯೆಗಳನ್ನು ಎದುರಿಸು ತ್ತಿದ್ದರೆ ಅಥವಾ ಸಂಚಾರ ದಲ್ಲಿ ಸಮಸ್ಯೆ ಯಾಗಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಕಂಟ್ರೋಲ್ ರೂಂ ಸಂಖ್ಯೆ: 0824- 2220588 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.
Ad
ವಿಚಾರಣಾಧೀನ ಕೈದಿಗೆ ನೀಡಲು ತಂದಿದ್ದ ಅನುಮಾನಾಸ್ಪದ ಪುಡಿ; ಮಹಿಳೆ ವಶಕ್ಕೆ
Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
Mangaluru: ಗಾಂಜಾ ಪೂರೈಕೆ; ಬೀದರ್ ಮೂಲದ ವೈದ್ಯನ ಬಂಧನ
Mangaluru: ಕ್ಲಾಕ್ ಟವರ್ – ಸ್ಟೇಟ್ಬ್ಯಾಂಕ್ ನಡುವೆ ದ್ವಿಮುಖ ಸಂಚಾರ: ವರದಿ ಕೇಳಿದ ಡಿಸಿ
Mangaluru: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾಲಿಕೆ ನೌಕರರಿಂದ ಧರಣಿ
You seem to have an Ad Blocker on.
To continue reading, please turn it off or whitelist Udayavani.