ಜೂ. 8-11: ನಿಟ್ಟೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ


Team Udayavani, Jun 7, 2023, 5:01 PM IST

ಜೂ. 8-11: ನಿಟ್ಟೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಪತ್ರಿಕಾಭವನ: ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ನಾಲ್ಕನೇ ವರ್ಷದ ನಿಟ್ಟೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೂ. 8ರಿಂದ 11ರ ವರೆಗೆ ಮಂಗಳೂರಿನ ಭಾರತ್‌ ಸಿನೆಮಾಸ್‌ನಲ್ಲಿ ಆಯೋಜಿಸಲಾಗಿದೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರೋತ್ಸವದ ನಿರ್ದೇಶಕ ಪ್ರೊ| ರವಿರಾಜ್‌ ಮಾಹಿತಿ ನೀಡಿ, ಚಲನಚಿತ್ರೋತ್ಸವದಲ್ಲಿ 50ಕ್ಕೂ ಮಿಕ್ಕಿ ಚಲನಚಿತ್ರಕಾರರು ಭಾಗವಹಿಸಲಿದ್ದಾರೆ. ಎಲ್ಲ ಚಲನಚಿತ್ರಗಳಿಗೂ ಉಚಿತ ಪ್ರವೇಶ ಇರಲಿದೆ. ಭಾರತೀಯ ಭಾಷೆಗಳ ಅನೇಕ ಪ್ರಶಸ್ತಿ ವಿಜೇತ ಚಲನಚಿತ್ರ ಸಹಿತ ಜರ್ಮನಿಯ 13 ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ಅಶ್ವತ್ಥ ನಾರಾಯಣ ಅವರಿಂದ ಕನ್ನಡ ಚಿತ್ರರಂಗದ ಇತಿಹಾಸವನ್ನು ನೆನಪಿಸುವ ಛಾಯಾಚಿತ್ರ ಪ್ರದರ್ಶನ ನೆರವೇರಲಿದೆ ಎಂದರು.

ಜೂ. 8ರಂದು ಬೆಳಗ್ಗೆ 8 ಗಂಟೆಗೆ ನಡೆಯುವ ಉದ್ಘಾಟನ ಸಮಾರಂಭದಲ್ಲಿ ಫೆಡರೇಶನ್‌ ಆಫ್‌ ಫಿಲ್ಮ್ ಸೊಸೈಟಿ ಆಫ್‌ ಇಂಡಿಯದ ಉಪಾಧ್ಯಕ್ಷ ಪ್ರೇಮೇಂದ್ರ ಮಜುಂದಾರ್‌, ನಿಟ್ಟೆ ಡಿಯು ಪ್ರೊ-ಚಾನ್ಸಲರ್‌ ಡಾ| ಎಂ. ಶಾಂತಾರಾಮ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಎನ್‌ಐಸಿಒ ಮುಖ್ಯಸ್ಥ ಪೊ| ರವಿರಾಜ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರಾಜ್‌ ಬಿ. ಶೆಟ್ಟಿ, ಮನೀಶ್‌ಸೈನಿ, ಶಿವಧ್ವಜ್‌, ಶಿಶಿರ್‌ ಝಾ, ರಾಹುಲ್‌ ಪಿ.ಕೆ., ಮಂಸೋರೆ, ಜ್ಯೋ ಬೇಬಿ, ಚಂಪಾ ಶೆಟ್ಟಿ, ಭರತ್‌ ಮಿರ್ಲೆ, ಸೌರಬ್‌ ಕಾಂತಿದತ್ತ, ಅಮರ್ಮೃ ಭಟ್ಟಾಚಾರ್ಯ, ಉಮೇಶ್‌ ಬಡಿಗೇರ್‌ ಭಾಗವಹಿಸಲಿದ್ದಾರೆ ಎಂದರು.

ಪೃಥ್ವಿ ಕೊಣ್ಣನೂರ್‌ ನಿರ್ದೇಶನದ ಹದಿನೇಳೆಂಟು ಕನ್ನಡ ಚಲನಚಿತ್ರ ಪ್ರದರ್ಶನದ ಮೂಲಕ ಪ್ರದರ್ಶನಗಳು ಅಧಿಕೃತವಾಗಿ ಆರಂಭವಾಗಲಿದೆ. ಕಾಂತಾರ (ಕನ್ನಡ), ಫ್ಯಾಮಿಲಿ (ಮಲಯಾಳ), ಕೋರಮ್ಮ (ತುಳು), ಏಕ್‌ ಜಗಹ್‌ ಅಪ್ನಿ (ಹಿಂದಿ), ವಾಲ್ವಿ (ಮರಾಠಿ), ಅನುನಾದ್‌ (ಅಸ್ಸಾಮಿ), ಗಾಂಧಿ ಆ್ಯಂಡ್‌ ಕೋ (ಗುಜರಾತಿ), ಧೂಯಿನ್‌ (ಮೈಥಿಲಿ), ಟೋರ್ಟಾಯಿಸ್‌ ಅಂಡರ್‌ ದಿ ಅರ್ಥ್ (ಸಾಂಥಲಿ) ಸಹಿತ ಅನೇಕ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು. ಕಿರು ಚಿತ್ರ ನಿರ್ಮಾಣದ ಬಗ್ಗೆ ಗಣೇಶ್‌ ಬಿ. ಶೆಟ್ಟಿ ಜೂ. 8ರಂದು ಸಂಜೆ 6ಗಂಟೆಗೆ ಉಪನ್ಯಾಸ ನೀಡಲಿದ್ದಾರೆ. ಜೂ. 9ರಂದು ಸಂಜೆ 6 ಗಂಟೆಗೆ ಕಲಾ ನಿರ್ದೇಶನದ ಬಗ್ಗೆ ಶಶಿಧರ ಅಡಪ, ಜೂ. 10ರಂದು 5 ಗಂಟೆಗೆ ಚಲನಚಿತ್ರ ನಿರ್ದೇಶನದ ಬಗ್ಗೆ ಮಿಖೀಲ್‌ ಮುಸಳೆ, 6 ಗಂಟೆಗೆ ಚಲನಚಿತ್ರ ವಿಮರ್ಶೆ ಬಗ್ಗೆ ನಮ್ರತಾ ಜೋಶಿ, ಜೂ. 11ರಂದು 6 ಗಂಟೆಗೆ ಕಥನ ಕಟ್ಟುವ ಕಲೆಯ ಬಗ್ಗೆ ಜಯಂತ ಕಾಯ್ಕಿಣಿ ಮಾತನಾಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅನುಪಮಾ ರತೀಶ್‌, ಸಮರ್ಥ್, ಉಮೇರ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Ambedkar:ಅಕ್ಟೋಬರ್14ರಂದು ಅಮೆರಿಕದಲ್ಲಿ BR ಅಂಬೇಡ್ಕರ್‌ ಬೃಹತ್‌ ಪ್ರತಿಮೆ ಅನಾವರಣ

Ambedkar:ಅಕ್ಟೋಬರ್14ರಂದು ಅಮೆರಿಕದಲ್ಲಿ BR ಅಂಬೇಡ್ಕರ್‌ ಬೃಹತ್‌ ಪ್ರತಿಮೆ ಅನಾವರಣ

Tiger Nageswara Rao: ಕುಖ್ಯಾತ ಕಳ್ಳನ ರಿಯಲ್‌ ಲೈಫ್‌ ಕಹಾನಿಯಲ್ಲಿ ಮಿಂಚಿದ ಮಾಸ್‌ ಮಹಾರಾಜ

Tiger Nageswara Rao: ಕುಖ್ಯಾತ ಕಳ್ಳನ ರಿಯಲ್‌ ಲೈಫ್‌ ಕಹಾನಿಯಲ್ಲಿ ಮಿಂಚಿದ ಮಾಸ್‌ ಮಹಾರಾಜ

JK Cement ಕಂಪನಿಯ ಬ್ಯುಸಿನೆಸ್‌ ಮುಖ್ಯಸ್ಥರಾಗಿ ಅನುಜ್ ಖಾಂಡೆಲ್‌ ವಾಲ್‌ ನೇಮಕ

JK Cement ಕಂಪನಿಯ ಬ್ಯುಸಿನೆಸ್‌ ಮುಖ್ಯಸ್ಥರಾಗಿ ಅನುಜ್ ಖಾಂಡೆಲ್‌ ವಾಲ್‌ ನೇಮಕ

ICC World Cup 2023; ವರ್ಣರಂಜಿತ ಉದ್ಘಾಟನಾ ಸಮಾರಂಭ ರದ್ದು? ಯಾಕೆ ಈ ನಿರ್ಧಾರ

ICC World Cup 2023; ವರ್ಣರಂಜಿತ ಉದ್ಘಾಟನಾ ಸಮಾರಂಭ ರದ್ದು? ಯಾಕೆ ಈ ನಿರ್ಧಾರ

Earthquake: ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪನ: ರಿಕ್ಟರ್ ಮಾಪನದಲ್ಲಿ 6.2 ತೀವ್ರತೆ ದಾಖಲು

Earthquake: ನೇಪಾಳದಲ್ಲಿ ಪ್ರಬಲ ಭೂಕಂಪನ: ರಾಷ್ಟ್ರ ರಾಜಧಾನಿಯಲ್ಲೂ ಕಂಪಿಸಿದ ಭೂಮಿ

Eid Procession: ಈದ್ ಮೆರವಣಿಗೆ ವೇಳೆ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ

Eid Procession: ಈದ್ ಮೆರವಣಿಗೆ ವೇಳೆ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

10–hunsur

Hunsur: ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ ಆನೆ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Moodabidri ರಾಜ್ಯಮಟ್ಟದ ಜೂ. ಆ್ಯತ್ಲೆಟಿಕ್ಸ್‌ : ಆಳ್ವಾಸ್‌ಗೆ 50 ಪದಕ

Moodabidri ರಾಜ್ಯಮಟ್ಟದ ಜೂ. ಆ್ಯತ್ಲೆಟಿಕ್ಸ್‌ : ಆಳ್ವಾಸ್‌ಗೆ 50 ಪದಕ

Mangaluru ಜಗತ್ತಿಗೆ ಸಹಿಷ್ಣುತೆ, ಸ್ನೇಹದ ಸಂದೇಶ ಅಗತ್ಯ: ಡಾ| ಸಖಾಫಿ

Mangaluru ಜಗತ್ತಿಗೆ ಸಹಿಷ್ಣುತೆ, ಸ್ನೇಹದ ಸಂದೇಶ ಅಗತ್ಯ: ಡಾ| ಸಖಾಫಿ

Mangaluru ಸಾರಿಗೆ ಉದ್ಯಮಿ ಪ್ರಕಾಶ್‌ ಅಂತ್ಯಸಂಸ್ಕಾರ

Mangaluru ಸಾರಿಗೆ ಉದ್ಯಮಿ ಪ್ರಕಾಶ್‌ ಅಂತ್ಯಸಂಸ್ಕಾರ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Ambedkar:ಅಕ್ಟೋಬರ್14ರಂದು ಅಮೆರಿಕದಲ್ಲಿ BR ಅಂಬೇಡ್ಕರ್‌ ಬೃಹತ್‌ ಪ್ರತಿಮೆ ಅನಾವರಣ

Ambedkar:ಅಕ್ಟೋಬರ್14ರಂದು ಅಮೆರಿಕದಲ್ಲಿ BR ಅಂಬೇಡ್ಕರ್‌ ಬೃಹತ್‌ ಪ್ರತಿಮೆ ಅನಾವರಣ

Sandalwood; ‘ಅಥರ್ವ’ನಾಗಿ ಕನ್ನಡ ಚಿತ್ರರಂಗಕ್ಕೆ ಕಾರ್ತಿಕ್ ರಾಜು ಎಂಟ್ರಿ

Sandalwood; ‘ಅಥರ್ವ’ನಾಗಿ ಕನ್ನಡ ಚಿತ್ರರಂಗಕ್ಕೆ ಕಾರ್ತಿಕ್ ರಾಜು ಎಂಟ್ರಿ

Tiger Nageswara Rao: ಕುಖ್ಯಾತ ಕಳ್ಳನ ರಿಯಲ್‌ ಲೈಫ್‌ ಕಹಾನಿಯಲ್ಲಿ ಮಿಂಚಿದ ಮಾಸ್‌ ಮಹಾರಾಜ

Tiger Nageswara Rao: ಕುಖ್ಯಾತ ಕಳ್ಳನ ರಿಯಲ್‌ ಲೈಫ್‌ ಕಹಾನಿಯಲ್ಲಿ ಮಿಂಚಿದ ಮಾಸ್‌ ಮಹಾರಾಜ

JK Cement ಕಂಪನಿಯ ಬ್ಯುಸಿನೆಸ್‌ ಮುಖ್ಯಸ್ಥರಾಗಿ ಅನುಜ್ ಖಾಂಡೆಲ್‌ ವಾಲ್‌ ನೇಮಕ

JK Cement ಕಂಪನಿಯ ಬ್ಯುಸಿನೆಸ್‌ ಮುಖ್ಯಸ್ಥರಾಗಿ ಅನುಜ್ ಖಾಂಡೆಲ್‌ ವಾಲ್‌ ನೇಮಕ

ICC World Cup 2023; ವರ್ಣರಂಜಿತ ಉದ್ಘಾಟನಾ ಸಮಾರಂಭ ರದ್ದು? ಯಾಕೆ ಈ ನಿರ್ಧಾರ

ICC World Cup 2023; ವರ್ಣರಂಜಿತ ಉದ್ಘಾಟನಾ ಸಮಾರಂಭ ರದ್ದು? ಯಾಕೆ ಈ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.