ಕೈ ತಪ್ಪಿದ ಔಟ್ಬೋರ್ಡ್ ಎಂಜಿನ್ ಸಹಾಯಧನ : ನಾಡದೋಣಿ ಮೀನುಗಾರರ ಸಂಕಷ್ಟ
ಮರು ಆರಂಭಕ್ಕೆ ಆಗ್ರಹ
Team Udayavani, Oct 7, 2022, 7:45 AM IST
ಮಂಗಳೂರು : ನಾಡದೋಣಿ ಮೀನುಗಾರರಿಗೆ ಔಟ್ಬೋರ್ಡ್ ಎಂಜಿನ್ ಖರೀದಿಗೆ ಸಿಗುತ್ತಿದ್ದ 60 ಸಾವಿರ ರೂ. ಸಹಾಯಧನ ಕೈ ತಪ್ಪಿದೆ.
ನಾಡದೋಣಿ ಮೀನುಗಾರರಿಗೆ ಹೊಸ ಎಂಜಿನ್ ಖರೀದಿಸಲು ಸರಕಾರದಿಂದ ಸಿಗುತ್ತಿದ್ದ ಸಹಾಯ ಧನ 2 ವರ್ಷದಿಂದ ಸಿಗುತ್ತಿಲ್ಲ. ಸಹಾಯಧನ ಮುಂದುವರಿಸಬೇಕೆಂಬ ಮೀನು ಗಾರರ ಬೇಡಿಕೆ ಇನ್ನೂ ಈಡೇರಿಲ್ಲ. ಬಜೆಟ್ ಪೂರ್ವ ಸಭೆಯಲ್ಲಿ ಉಲ್ಲೇ ಖೀಸಿದ್ದು, ಇಲಾ ಖೆಯ ವಿವಿಧ ಸಭೆಗಳಲ್ಲಿ ಚರ್ಚಿಸಿ ದರೂ ಉಪಯೋಗವಾಗಿಲ್ಲ. ದ.ಕ. ಜಿಲ್ಲೆಯಲ್ಲಿ 2,000 ಕ್ಕೂ ಹೆಚ್ಚು ಹಾಗೂ ಉಡುಪಿ ಜಿಲ್ಲೆಯಲ್ಲಿ 3,000ಕ್ಕೂ ಹೆಚ್ಚು ನಾಡ ದೋಣಿಗಳಿವೆ.
ಕೈ ಬಿಟ್ಟದ್ದು ಯಾಕೆ?
ಮೀನುಗಾರಿಕೆ ಇಲಾಖೆಯ ಅಧಿಕಾ ರಿಗಳ ಪ್ರಕಾರ “ಕೇಂದ್ರ ಪುರಸ್ಕೃತ ನೀಲಿ ಕ್ರಾಂತಿ ಯೋಜನೆಯು 2019- 20ಕ್ಕೆ ಮುಗಿದಿದೆ. 2020- 21ನೇ ಸಾಲಿನಿಂದ ಕೇಂದ್ರದ “ಪಿಎಂಎಂಎಸ್ವೈ’ ಯೋಜನೆ ಜಾರಿಗೆ ಬಂದಿದ್ದು, ಅದರಲ್ಲಿ ನಾಡದೋಣಿ ಔಟ್ಬೋ ರ್ಡ್ ಎಂಜಿನ್ಗೆ ಸಹಾಯಧನ ನೀಡಲು ಅವಕಾಶವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಕಾಯುತ್ತಿವೆ ಅರ್ಜಿಗಳು
ನಾಡದೋಣಿ ಔಟ್ಬೋರ್ಡ್ ಎಂಜಿನ್ ಖರೀದಿಗೆ 1.40 ಲಕ್ಷ ರೂ. ತಗಲುತ್ತದೆ. ಅದಕ್ಕೆ 60 ಸಾವಿರ ರೂ. ಸಹಾಯ ಧನ ಸಿಗುತ್ತಿತ್ತು. ಸುದೀರ್ಘ ವರ್ಷ ದಿಂದ ಜಾರಿಯಲ್ಲಿದ್ದ ಯೋಜನೆ ಈಗ ಇಲ್ಲ. ಆದರೆ ಮೀನುಗಾರರು ನಿರೀಕ್ಷೆಯಿಂದ ಅರ್ಜಿ ಹಾಕುತ್ತಲೇ ಇದ್ದಾರೆ. ಸಹಾಯ ಧನ ಮಾತ್ರ ಸಿಗುತ್ತಿಲ್ಲ’ ಎನ್ನುತ್ತಾರೆ ಕರಾವಳಿ ನಾಡದೋಣಿ ಮೀನುಗಾರರ ಸಂಘ, ನವ ಮಂಗಳೂರು ವಲಯ ಅಧ್ಯಕ್ಷ ವಾಸುದೇವ ಬಿ. ಕರ್ಕೇರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್